<p><strong>ಭಟ್ಕಳ</strong>: ತಾಲ್ಲೂಕಿನ ಅಳ್ವೆಕೊಡಿಯ ಕಳ್ಳಿಕಟ್ಟೆ ನದಿಯಲ್ಲಿ ಸಾವಿಗಿಡಾದ 11 ಸಂತ್ರಸ್ತರ ಮನೆಗಳಿಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿದರು.</p>.<p>ಮೃತ ಲಕ್ಷ್ಮಿ ನಾಯ್ಕ ಮನೆಯ ಜಗಲಿಯಲ್ಲಿ ಅಸಹಾಯಕರಾಗಿ ಮನೆಯ ಚಾವಣಿ ನೋಡುತ್ತ ಕಣ್ಣೀರು ಇಡುತ್ತಾ ಕುಳಿತಿದ್ದ ಮೂವರು ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಗುವಿಗೆ ಧೈರ್ಯ ತುಂಬಿದರು.</p>.<p>‘ಸರ್ಕಾರದಿಂದ ಸಿಗುವ ಸಹಾಯಗಳ ಬಗ್ಗೆ ಈಗಾಗಲೇ ಸಚಿವ ಮಾಂಕಾಳ ವೈದ್ಯ ಕಾರ್ಯೊನ್ಮುಖರಾಗಿದ್ದು ಇನ್ನಷ್ಟು ಸಹಾಯವನ್ನು ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೂ ತರಲಾಗುವುದು’ ಎಂದು ಭರವಸೆ ನೀಡಿದರು.</p>.<p>ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಶಾರದಹೊಳೆ ವೆಂಕಟರಮಣ ದೇವಸ್ಥಾನದ ಪ್ರಮುಖರಾದ ಕೃಷ್ಣ ನಾಯ್ಕ, ಸುಬ್ರಾಯ ನಾಯ್ಕ, ರತ್ನಾಕರ ನಾಯ್ಕ, ಎಂ.ಎನ್ ಸುಬ್ರಹ್ಮಣ್ಯ, ಗೌರೀಶ ನಾಯ್ಕ, ಗಣಪತಿ ನಾಯ್ಕ ಶಾರದಹೊಳೆ, ಕುಮಾರ ನಾಯ್ಕ, ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-20-1988583762</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ</strong>: ತಾಲ್ಲೂಕಿನ ಅಳ್ವೆಕೊಡಿಯ ಕಳ್ಳಿಕಟ್ಟೆ ನದಿಯಲ್ಲಿ ಸಾವಿಗಿಡಾದ 11 ಸಂತ್ರಸ್ತರ ಮನೆಗಳಿಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿದರು.</p>.<p>ಮೃತ ಲಕ್ಷ್ಮಿ ನಾಯ್ಕ ಮನೆಯ ಜಗಲಿಯಲ್ಲಿ ಅಸಹಾಯಕರಾಗಿ ಮನೆಯ ಚಾವಣಿ ನೋಡುತ್ತ ಕಣ್ಣೀರು ಇಡುತ್ತಾ ಕುಳಿತಿದ್ದ ಮೂವರು ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಗುವಿಗೆ ಧೈರ್ಯ ತುಂಬಿದರು.</p>.<p>‘ಸರ್ಕಾರದಿಂದ ಸಿಗುವ ಸಹಾಯಗಳ ಬಗ್ಗೆ ಈಗಾಗಲೇ ಸಚಿವ ಮಾಂಕಾಳ ವೈದ್ಯ ಕಾರ್ಯೊನ್ಮುಖರಾಗಿದ್ದು ಇನ್ನಷ್ಟು ಸಹಾಯವನ್ನು ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೂ ತರಲಾಗುವುದು’ ಎಂದು ಭರವಸೆ ನೀಡಿದರು.</p>.<p>ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಶಾರದಹೊಳೆ ವೆಂಕಟರಮಣ ದೇವಸ್ಥಾನದ ಪ್ರಮುಖರಾದ ಕೃಷ್ಣ ನಾಯ್ಕ, ಸುಬ್ರಾಯ ನಾಯ್ಕ, ರತ್ನಾಕರ ನಾಯ್ಕ, ಎಂ.ಎನ್ ಸುಬ್ರಹ್ಮಣ್ಯ, ಗೌರೀಶ ನಾಯ್ಕ, ಗಣಪತಿ ನಾಯ್ಕ ಶಾರದಹೊಳೆ, ಕುಮಾರ ನಾಯ್ಕ, ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-20-1988583762</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>