<p><strong>ಕಾರವಾರ:</strong> ಪಾಳು ಬಿದ್ದ ಸ್ಥಳವಾಗಿದ್ದ ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಟೆಗಾಳಿ ಸಮೀಪದ ಭೀಮಕೋಲ ‘ಪಂಚವಟಿ ಉದ್ಯಾನ’ವಾಗಿ ರೂಪುಗೊಂಡು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೋ ನಿಜ. ಆದರೆ, ಈಗ ಮತ್ತೆ ತನ್ನ ಅಂದ ಕಳೆದುಕೊಂಡು ಮೊದಲಿನ ಸ್ಥಿತಿಗೆ ತಲುಪುತ್ತಿದೆಯೆ? ಹೀಗೊಂದು ಪ್ರಶ್ನೆ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿ, ಈಚೆಗೆ ಉದ್ಯಾನದ ಸ್ಥಿತಿ ಗಮನಿಸಿದವರಲ್ಲಿ ಮೂಡುತ್ತಿದೆ.</p>.<p>ಹಸಿರಿನಿಂದ ಕಂಗೊಳಿಸುತ್ತಿದ್ದ ಸರೋವರದ ದಂಡೆ, ಆಕರ್ಷಕ ಎನಿಸುತ್ತಿದ್ದ ಚಿರೇಕಲ್ಲಿನ ಪಥ, ಮಸುಕಾದ ಪರಿಕರಗಳು...ಹೀಗೆ ಕಳೆಗುಂದಿದ ಸೌಕರ್ಯವನ್ನು ಒಳಗೊಂಡಿರುವ ಉದ್ಯಾನದ ಈಗಿನ ಸ್ಥಿತಿ ಇಂಥ ಶಂಕೆ ಮೂಡಲು ಕಾರಣವಾಗುತ್ತಿದೆ.</p>.<p>2020ಕ್ಕೆ ಮುನ್ನ ಭೀಮಕೋಲದಲ್ಲಿ ವಿಶಾಲವಾದ ಕೆರೆ ಮತ್ತು ಒಡೆದು ಬಿದ್ದ ಒಡ್ಡು ಮಾತ್ರ ಕಾಣಸಿಗುತ್ತಿತ್ತು. ಜಿಲ್ಲಾ ಪಂಚಾಯಿತಿಯ ಅಮೃತ ಸರೋವರ ಯೋಜನೆ ಅಡಿಯಲ್ಲಿ ಕೆರೆ ಅಭಿವೃದ್ಧಿಗೊಂಡರೆ, ಸಾಮಾಜಿಕ ಅರಣ್ಯ ವಿಭಾಗದಿಂದ ಕೆರೆಯ ದಂಡೆಯ ಮೇಲೆ ‘ಪಂಚವಟಿ’ ಹೆಸರಿನ ಆಕರ್ಷಕ ಉದ್ಯಾನ ರೂಪುಗೊಂಡಿತು. ಲಕ್ಷಾಂತರ ಮೊತ್ತ ವ್ಯಯಿಸಿ ರೂಪಿಸಿದ ಸ್ಥಳದಲ್ಲೀಗ ಮತ್ತೆ ಸೌಕರ್ಯಗಳ ಕೊರತೆ ಕಾಡುತ್ತಿದೆ ಎಂಬುದು ಪ್ರವಾಸಿಗರ ದೂರು.</p>.<p>‘ಮಳೆಗಾಲದ ಆರಂಭದಲ್ಲಿ ಭೀಮಕೋಲಕ್ಕೆ ಭೇಟಿ ನೀಡಿದ್ದಾಗ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದೆ. ಪರ್ವತಗಳ ನಡುವೆ ಜಲರಾಶಿ, ಅದರ ದಡದಲ್ಲಿ ಹಸಿರು ಉದ್ಯಾನ ಕಂಗೊಳಿಸುತ್ತಿತ್ತು. ಅದೇ ಸೌಂದರ್ಯ ಆಸ್ವಾದಿಸಲು ವಾರದ ಹಿಂದೆ ಭೇಟಿ ನೀಡಿದರೆ ಒಣಗಿದ ಗಿಡಮರಗಳು, ಕೆರೆಯ ದಂಡೆಯಲ್ಲಿ ಪೊದೆ ಮತ್ತು ಹುಲ್ಲಿನ ರಾಶಿ ಬೆಳೆದುನಿಂತಿದೆ. ಆರು ತಿಂಗಳ ಹಿಂದೆ ಕಂಡಿದ್ದ ಸೌಂದರ್ಯ ಸಂಪೂರ್ಣ ಮರೆಮಾಚಿದೆ’ ಎನ್ನುತ್ತಾರೆ ನಗರದ ಕೆ.ಎಚ್.ಬಿ ಕಾಲೊನಿಯ ಸಂಜಯ ನೇತಲಕರ್.</p>.<p>‘ಉದ್ಯಾನ ವೀಕ್ಷಣೆಗೆ ಪ್ರವಾಸಿಗರಿಂದ ಶುಲ್ಕ ಪಡೆಯಲಾಗುತ್ತಿದೆ. ಆದರೆ ಉದ್ಯಾನದಲ್ಲಿ ವ್ಯವಸ್ಥಿತ ನಿರ್ವಹಣೆ ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪ್ಯಾರಾಗೋಲ, ಕೆರೆಯ ದಂಡೆಯ ಚಿರೇಕಲ್ಲಿನ ಪಥದಲ್ಲೆಲ್ಲ ಹುಲ್ಲುಗಳು ಬೆಳೆದುನಿಂತಿವೆ. ಇವುಗಳಿಂದ ಜನರ ಓಡಾಟಕ್ಕೆ ಅಡಚಣೆ ಆಗುತ್ತಿದೆ. ಹಾವು, ಚೇಳುಗಳ ಭಯದಿಂದ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸದಾಶಿವಗಡ ರೂಪೇಶ ದೂರಿದರು.</p>.<p><strong>ನಿರ್ವಹಣೆ ಸಮಿತಿಯ ಜವಾಬ್ದಾರಿ</strong></p><p> ‘ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯಿಂದ ಲಕ್ಷಾಂತರ ಮೊತ್ತ ವೆಚ್ಚ ಮಾಡಿ ಭೀಮಕೋಲ ಉದ್ಯಾನ ರೂಪುಗೊಂಡಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿರ್ವಹಣೆಯ ಕಾರಣಕ್ಕೆ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗೆ ಜವಾಬ್ದಾರಿ ನೀಡಲಾಗಿದೆ. ಪ್ರವಾಸಿಗರಿಂದ ಸಂಗ್ರಹವಾಗುವ ಶುಲ್ಕದಲ್ಲಿ ಸಮಿತಿಯು ಸಿಬ್ಬಂದಿಗೆ ವೇತನ ನೀಡುವ ಜತೆಗೆ ಅಗತ್ಯ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಆದರೆ ಸಮಿತಿಯಿಂದ ಪರಿಣಾಮಕಾರಿ ಕೆಲಸ ಸದ್ಯಕ್ಕೆ ಆಗಿಲ್ಲ’ ಎನ್ನುತ್ತಾರೆ ಸ್ಥಳೀಯ ಪ್ರಮಖರೊಬ್ಬರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಪಾಳು ಬಿದ್ದ ಸ್ಥಳವಾಗಿದ್ದ ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಟೆಗಾಳಿ ಸಮೀಪದ ಭೀಮಕೋಲ ‘ಪಂಚವಟಿ ಉದ್ಯಾನ’ವಾಗಿ ರೂಪುಗೊಂಡು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೋ ನಿಜ. ಆದರೆ, ಈಗ ಮತ್ತೆ ತನ್ನ ಅಂದ ಕಳೆದುಕೊಂಡು ಮೊದಲಿನ ಸ್ಥಿತಿಗೆ ತಲುಪುತ್ತಿದೆಯೆ? ಹೀಗೊಂದು ಪ್ರಶ್ನೆ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿ, ಈಚೆಗೆ ಉದ್ಯಾನದ ಸ್ಥಿತಿ ಗಮನಿಸಿದವರಲ್ಲಿ ಮೂಡುತ್ತಿದೆ.</p>.<p>ಹಸಿರಿನಿಂದ ಕಂಗೊಳಿಸುತ್ತಿದ್ದ ಸರೋವರದ ದಂಡೆ, ಆಕರ್ಷಕ ಎನಿಸುತ್ತಿದ್ದ ಚಿರೇಕಲ್ಲಿನ ಪಥ, ಮಸುಕಾದ ಪರಿಕರಗಳು...ಹೀಗೆ ಕಳೆಗುಂದಿದ ಸೌಕರ್ಯವನ್ನು ಒಳಗೊಂಡಿರುವ ಉದ್ಯಾನದ ಈಗಿನ ಸ್ಥಿತಿ ಇಂಥ ಶಂಕೆ ಮೂಡಲು ಕಾರಣವಾಗುತ್ತಿದೆ.</p>.<p>2020ಕ್ಕೆ ಮುನ್ನ ಭೀಮಕೋಲದಲ್ಲಿ ವಿಶಾಲವಾದ ಕೆರೆ ಮತ್ತು ಒಡೆದು ಬಿದ್ದ ಒಡ್ಡು ಮಾತ್ರ ಕಾಣಸಿಗುತ್ತಿತ್ತು. ಜಿಲ್ಲಾ ಪಂಚಾಯಿತಿಯ ಅಮೃತ ಸರೋವರ ಯೋಜನೆ ಅಡಿಯಲ್ಲಿ ಕೆರೆ ಅಭಿವೃದ್ಧಿಗೊಂಡರೆ, ಸಾಮಾಜಿಕ ಅರಣ್ಯ ವಿಭಾಗದಿಂದ ಕೆರೆಯ ದಂಡೆಯ ಮೇಲೆ ‘ಪಂಚವಟಿ’ ಹೆಸರಿನ ಆಕರ್ಷಕ ಉದ್ಯಾನ ರೂಪುಗೊಂಡಿತು. ಲಕ್ಷಾಂತರ ಮೊತ್ತ ವ್ಯಯಿಸಿ ರೂಪಿಸಿದ ಸ್ಥಳದಲ್ಲೀಗ ಮತ್ತೆ ಸೌಕರ್ಯಗಳ ಕೊರತೆ ಕಾಡುತ್ತಿದೆ ಎಂಬುದು ಪ್ರವಾಸಿಗರ ದೂರು.</p>.<p>‘ಮಳೆಗಾಲದ ಆರಂಭದಲ್ಲಿ ಭೀಮಕೋಲಕ್ಕೆ ಭೇಟಿ ನೀಡಿದ್ದಾಗ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದೆ. ಪರ್ವತಗಳ ನಡುವೆ ಜಲರಾಶಿ, ಅದರ ದಡದಲ್ಲಿ ಹಸಿರು ಉದ್ಯಾನ ಕಂಗೊಳಿಸುತ್ತಿತ್ತು. ಅದೇ ಸೌಂದರ್ಯ ಆಸ್ವಾದಿಸಲು ವಾರದ ಹಿಂದೆ ಭೇಟಿ ನೀಡಿದರೆ ಒಣಗಿದ ಗಿಡಮರಗಳು, ಕೆರೆಯ ದಂಡೆಯಲ್ಲಿ ಪೊದೆ ಮತ್ತು ಹುಲ್ಲಿನ ರಾಶಿ ಬೆಳೆದುನಿಂತಿದೆ. ಆರು ತಿಂಗಳ ಹಿಂದೆ ಕಂಡಿದ್ದ ಸೌಂದರ್ಯ ಸಂಪೂರ್ಣ ಮರೆಮಾಚಿದೆ’ ಎನ್ನುತ್ತಾರೆ ನಗರದ ಕೆ.ಎಚ್.ಬಿ ಕಾಲೊನಿಯ ಸಂಜಯ ನೇತಲಕರ್.</p>.<p>‘ಉದ್ಯಾನ ವೀಕ್ಷಣೆಗೆ ಪ್ರವಾಸಿಗರಿಂದ ಶುಲ್ಕ ಪಡೆಯಲಾಗುತ್ತಿದೆ. ಆದರೆ ಉದ್ಯಾನದಲ್ಲಿ ವ್ಯವಸ್ಥಿತ ನಿರ್ವಹಣೆ ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪ್ಯಾರಾಗೋಲ, ಕೆರೆಯ ದಂಡೆಯ ಚಿರೇಕಲ್ಲಿನ ಪಥದಲ್ಲೆಲ್ಲ ಹುಲ್ಲುಗಳು ಬೆಳೆದುನಿಂತಿವೆ. ಇವುಗಳಿಂದ ಜನರ ಓಡಾಟಕ್ಕೆ ಅಡಚಣೆ ಆಗುತ್ತಿದೆ. ಹಾವು, ಚೇಳುಗಳ ಭಯದಿಂದ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸದಾಶಿವಗಡ ರೂಪೇಶ ದೂರಿದರು.</p>.<p><strong>ನಿರ್ವಹಣೆ ಸಮಿತಿಯ ಜವಾಬ್ದಾರಿ</strong></p><p> ‘ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯಿಂದ ಲಕ್ಷಾಂತರ ಮೊತ್ತ ವೆಚ್ಚ ಮಾಡಿ ಭೀಮಕೋಲ ಉದ್ಯಾನ ರೂಪುಗೊಂಡಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿರ್ವಹಣೆಯ ಕಾರಣಕ್ಕೆ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗೆ ಜವಾಬ್ದಾರಿ ನೀಡಲಾಗಿದೆ. ಪ್ರವಾಸಿಗರಿಂದ ಸಂಗ್ರಹವಾಗುವ ಶುಲ್ಕದಲ್ಲಿ ಸಮಿತಿಯು ಸಿಬ್ಬಂದಿಗೆ ವೇತನ ನೀಡುವ ಜತೆಗೆ ಅಗತ್ಯ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಆದರೆ ಸಮಿತಿಯಿಂದ ಪರಿಣಾಮಕಾರಿ ಕೆಲಸ ಸದ್ಯಕ್ಕೆ ಆಗಿಲ್ಲ’ ಎನ್ನುತ್ತಾರೆ ಸ್ಥಳೀಯ ಪ್ರಮಖರೊಬ್ಬರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>