<p><strong>ಕಾರವಾರ:</strong> ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ ಇಲ್ಲಿನ ಹೋಟೆಲ್ ಉದ್ಯಮಕ್ಕೆ ಬಲವಾಗಿ ತಟ್ಟಿದೆ. ವಾಣಿಜ್ಯ ಬಳಕೆಯೆ ಸಿಲಿಂಡರ್ ಸಿಗದೆ ಸೌದೆಯ ಒಲೆ ಬಳಸಿ ಅಡುಗೆ ಸಿದ್ಧಗೊಳ್ಳುತ್ತಿದೆ. ಪರ್ಯಾಯ ವ್ಯವಸ್ಥೆ ಕಷ್ಟವಾದ ಕಾರಣಕ್ಕೆ ಕೆಲ ಹೋಟೆಲ್ಗಳನ್ನು ಭಾಗಶಃ ಮುಚ್ಚಲಾಗಿದೆ.</p>.<p>ಪ್ರವಾಸಿ ಸೀಸನ್ ಆರಂಭಗೊಂಡಿರುವುದರಿಂದ ಭರಪೂರ ಪ್ರವಾಸಿಗರು ನಗರದತ್ತ ಮುಖ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಭರ್ಜರಿ ವಹಿವಾಟು ನಡೆಸುವ ನಿರೀಕ್ಷೆಯಲ್ಲಿದ್ದ ಹೋಟೆಲ್ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದಿರುವುದು ಸಮಸ್ಯೆ ಉಂಟಾಗಿದೆ. ಕಳೆದ ಒಂದೆರಡು ದಿನಗಳಿಂದ ಹಲವು ಹೋಟೆಲ್ಗಳ ಪಾಕಶಾಲೆಯಲ್ಲಿ ಸೌದೆ ಒಲೆಯ ಹೊಗೆ ಆವರಿಸಿಕೊಳ್ಳತೊಡಗಿದೆ.</p>.<p>ವಾಣಿಜ್ಯ ಬಳಕೆಯ ಸಿಲಿಂಡರ್ ಹೊಂದಿಸಿಕೊಳ್ಳಲು ವಾರಗಳಿಂದ ಹೆಣಗಾಡುತ್ತಿದ್ದ ಹೋಟೆಲ್ ಮಾಲೀಕರು, ಈಗ ಸಾಮಿಲ್ಗಳು, ಅರಣ್ಯ ಇಲಾಖೆ ಮರಮಟ್ಟು ಸಂಗ್ರಹಾಲಯಗಳತ್ತ ಮುಖ ಮಾಡಿದ್ದಾರೆ. ಅಲ್ಲಿಂದ ಕಟ್ಟಿಗೆ ತುಂಡುಗಳನ್ನು ಖರೀದಿಸಿ ತರುತ್ತಿದ್ದಾರೆ. ನಿರುಪಯುಕ್ತ ಎನಿಸಿದ್ದ ಮರಗಳ ತುಂಡುಗಳಿಗೆ ಈಗ ಬೇಡಿಕೆ ಬಂದಿದೆ. ಅಲ್ಲದೇ, ವಿದ್ಯುತ್ ಒಲೆಗಳ ಖರೀದಿಯೂ ಹೆಚ್ಚತೊಡಗಿದೆ.</p>.<p>‘ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ಮೊದಲೇ ಸಂಗ್ರಹಿಸಿಟ್ಟುಕೊಂಡಿದ್ದ ಸಿಲಿಂಡರ್ಗಳಲ್ಲೇ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ಬೇಯಲು ಹೆಚ್ಚು ಅವಧಿ ತೆಗೆದುಕೊಳ್ಳುವ ತಿನಿಸುಗಳನ್ನು ಸೌದೆಯ ಒಲೆ ಬಳಸಿ ಸಿದ್ಧಪಡಿಸಲಾಗುತ್ತಿದೆ. ಸೀಮಿತ ಆಹಾರಗಳನ್ನು ಮಾತ್ರ ಸಿಲಿಂಡರ್ ಒಲೆಯಲ್ಲಿ ತಯಾರಿಸಲಾಗುತ್ತಿದೆ. ಮೆನು ಪಟ್ಟಿಯಲ್ಲಿನ ಅರ್ಧದಷ್ಟು ತಿನಿಸು ಕೈಬಿಟ್ಟಿದ್ದೇವೆ’ ಎಂದು ಕಾರವಾರ ಹೋಟೆಲ್ ರೆಸ್ಟೊರೆಂಟ್ ಅಸೋಸಿಯೇಶನ್ (ಖಾರಾ) ಅಧ್ಯಕ್ಷ ಶ್ಯಾಮ ಬಸ್ರೂರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆಯ ಕಾರಣದಿಂದ ದರ ಏಕಾಏಕಿ ಏರಿಕೆ ಮಾಡಲಾಗಿದೆ. ಹೆಚ್ಚಿನ ದರ ನೀಡುತ್ತೇವೆ ಎಂದರೂ ಒಂದು ಸಿಲಿಂಡರ್ ಕೊಡಲೂ ಏಜೆನ್ಸಿಗಳು ಮುಂದಾಗುತ್ತಿಲ್ಲ. ಸೌದೆಯ ಒಲೆ ಬಳಸಿ ಆಹಾರ ಸಿದ್ಧಪಡಿಸಲು ಪಾಕಶಾಲೆಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಇದರಿಂದ ಹೋಟೆಲ್ ಮುಚ್ಚುವ ಸ್ಥಿತಿ ಬಂದಿದೆ’ ಎಂದು ಹೋಟೆಲ್ವೊಂದರ ಮಾಲೀಕರೊಬ್ಬರು ಸಮಸ್ಯೆ ಹೇಳಿಕೊಂಡರು.</p>.<p>‘ಪ್ರವಾಸಿ ಸೀಸನ್ ಆಗಿದ್ದರಿಂದ ಮುಂಗಡವಾಗಿ ಕೊಠಡಿ ಕಾಯ್ದಿರಿಸಿದ್ದ ಪ್ರವಾಸಿಗರು ಹೋಟೆಲ್ನಲ್ಲಿ ತಿನಿಸು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕೊಠಡಿ ರದ್ದುಪಡಿಸುತ್ತಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ ಇಲ್ಲಿನ ಆತಿಥ್ಯ ವಲಯಕ್ಕೆ ತಟ್ಟಿದೆ’ ಎಂದು ಉದ್ಯಮಿ ಮಾರುತಿ ರಾಣೆ ಪ್ರತಿಕ್ರಿಯಿಸಿದರು.</p>.<div><blockquote>ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ವಾಣಿಜ್ಯ ಸಿಲಿಂಡರ್ ಪೂರೈಕೆ ಸದ್ಯ ಇದೆ. ಆದರೆ ಈ ಮುಂಚಿನಂತೆ ಹೋಟೆಲ್ನವರು ಕೇಳಿದಷ್ಟು ಸಿಲಿಂಡರ್ ಪೂರೈಸುವುದು ಕಷ್ಟ. </blockquote><span class="attribution"> ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ</span></div>.<div><blockquote>ಸಿಲಿಂಡರ್ ಕೊರತೆಯಿಂದಾಗಿ ಹೋಟೆಲ್ನವರು ಪರ್ಯಾಯ ಮಾರ್ಗದ ಮೊರೆ ಹೋಗುವುದು ಅನಿವಾರ್ಯ. ತಿನಿಸುಗಳ ದರವನ್ನೂ ಏರಿಕೆ ಮಾಡಲಾಗಿದೆ. </blockquote><span class="attribution">ಶ್ಯಾಮ ಬಸ್ರೂರು ಖಾರಾ ಅಧ್ಯಕ್ಷ</span></div>.<p>ಗಡಿಯಲ್ಲಿ ಬಿಗು ತಪಾಸಣೆ ಗೋವಾದಿಂದ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ ಮೂಲಕ ಗೃಹಬಳಕೆ ವಾಣಿಜ್ಯ ಸಿಲಿಂಡರ್ ಅಕ್ರಮವಾಗಿ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಜಾಳಿಯ ಚೆಕ್ಪೋಸ್ಟ್ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ‘ಸಿಲಿಂಡರ್ ಅಕ್ರಮ ಸಾಗಣೆ ತಡೆಯಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ನಿತ್ಯವೂ ಅಲ್ಲಿ ನಿಗಾ ಇರಿಸುತ್ತಿದ್ದೇವೆ. ಪ್ರತಿ ವಾಹನಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಲು ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ ಇಲ್ಲಿನ ಹೋಟೆಲ್ ಉದ್ಯಮಕ್ಕೆ ಬಲವಾಗಿ ತಟ್ಟಿದೆ. ವಾಣಿಜ್ಯ ಬಳಕೆಯೆ ಸಿಲಿಂಡರ್ ಸಿಗದೆ ಸೌದೆಯ ಒಲೆ ಬಳಸಿ ಅಡುಗೆ ಸಿದ್ಧಗೊಳ್ಳುತ್ತಿದೆ. ಪರ್ಯಾಯ ವ್ಯವಸ್ಥೆ ಕಷ್ಟವಾದ ಕಾರಣಕ್ಕೆ ಕೆಲ ಹೋಟೆಲ್ಗಳನ್ನು ಭಾಗಶಃ ಮುಚ್ಚಲಾಗಿದೆ.</p>.<p>ಪ್ರವಾಸಿ ಸೀಸನ್ ಆರಂಭಗೊಂಡಿರುವುದರಿಂದ ಭರಪೂರ ಪ್ರವಾಸಿಗರು ನಗರದತ್ತ ಮುಖ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಭರ್ಜರಿ ವಹಿವಾಟು ನಡೆಸುವ ನಿರೀಕ್ಷೆಯಲ್ಲಿದ್ದ ಹೋಟೆಲ್ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದಿರುವುದು ಸಮಸ್ಯೆ ಉಂಟಾಗಿದೆ. ಕಳೆದ ಒಂದೆರಡು ದಿನಗಳಿಂದ ಹಲವು ಹೋಟೆಲ್ಗಳ ಪಾಕಶಾಲೆಯಲ್ಲಿ ಸೌದೆ ಒಲೆಯ ಹೊಗೆ ಆವರಿಸಿಕೊಳ್ಳತೊಡಗಿದೆ.</p>.<p>ವಾಣಿಜ್ಯ ಬಳಕೆಯ ಸಿಲಿಂಡರ್ ಹೊಂದಿಸಿಕೊಳ್ಳಲು ವಾರಗಳಿಂದ ಹೆಣಗಾಡುತ್ತಿದ್ದ ಹೋಟೆಲ್ ಮಾಲೀಕರು, ಈಗ ಸಾಮಿಲ್ಗಳು, ಅರಣ್ಯ ಇಲಾಖೆ ಮರಮಟ್ಟು ಸಂಗ್ರಹಾಲಯಗಳತ್ತ ಮುಖ ಮಾಡಿದ್ದಾರೆ. ಅಲ್ಲಿಂದ ಕಟ್ಟಿಗೆ ತುಂಡುಗಳನ್ನು ಖರೀದಿಸಿ ತರುತ್ತಿದ್ದಾರೆ. ನಿರುಪಯುಕ್ತ ಎನಿಸಿದ್ದ ಮರಗಳ ತುಂಡುಗಳಿಗೆ ಈಗ ಬೇಡಿಕೆ ಬಂದಿದೆ. ಅಲ್ಲದೇ, ವಿದ್ಯುತ್ ಒಲೆಗಳ ಖರೀದಿಯೂ ಹೆಚ್ಚತೊಡಗಿದೆ.</p>.<p>‘ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ಮೊದಲೇ ಸಂಗ್ರಹಿಸಿಟ್ಟುಕೊಂಡಿದ್ದ ಸಿಲಿಂಡರ್ಗಳಲ್ಲೇ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ಬೇಯಲು ಹೆಚ್ಚು ಅವಧಿ ತೆಗೆದುಕೊಳ್ಳುವ ತಿನಿಸುಗಳನ್ನು ಸೌದೆಯ ಒಲೆ ಬಳಸಿ ಸಿದ್ಧಪಡಿಸಲಾಗುತ್ತಿದೆ. ಸೀಮಿತ ಆಹಾರಗಳನ್ನು ಮಾತ್ರ ಸಿಲಿಂಡರ್ ಒಲೆಯಲ್ಲಿ ತಯಾರಿಸಲಾಗುತ್ತಿದೆ. ಮೆನು ಪಟ್ಟಿಯಲ್ಲಿನ ಅರ್ಧದಷ್ಟು ತಿನಿಸು ಕೈಬಿಟ್ಟಿದ್ದೇವೆ’ ಎಂದು ಕಾರವಾರ ಹೋಟೆಲ್ ರೆಸ್ಟೊರೆಂಟ್ ಅಸೋಸಿಯೇಶನ್ (ಖಾರಾ) ಅಧ್ಯಕ್ಷ ಶ್ಯಾಮ ಬಸ್ರೂರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆಯ ಕಾರಣದಿಂದ ದರ ಏಕಾಏಕಿ ಏರಿಕೆ ಮಾಡಲಾಗಿದೆ. ಹೆಚ್ಚಿನ ದರ ನೀಡುತ್ತೇವೆ ಎಂದರೂ ಒಂದು ಸಿಲಿಂಡರ್ ಕೊಡಲೂ ಏಜೆನ್ಸಿಗಳು ಮುಂದಾಗುತ್ತಿಲ್ಲ. ಸೌದೆಯ ಒಲೆ ಬಳಸಿ ಆಹಾರ ಸಿದ್ಧಪಡಿಸಲು ಪಾಕಶಾಲೆಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಇದರಿಂದ ಹೋಟೆಲ್ ಮುಚ್ಚುವ ಸ್ಥಿತಿ ಬಂದಿದೆ’ ಎಂದು ಹೋಟೆಲ್ವೊಂದರ ಮಾಲೀಕರೊಬ್ಬರು ಸಮಸ್ಯೆ ಹೇಳಿಕೊಂಡರು.</p>.<p>‘ಪ್ರವಾಸಿ ಸೀಸನ್ ಆಗಿದ್ದರಿಂದ ಮುಂಗಡವಾಗಿ ಕೊಠಡಿ ಕಾಯ್ದಿರಿಸಿದ್ದ ಪ್ರವಾಸಿಗರು ಹೋಟೆಲ್ನಲ್ಲಿ ತಿನಿಸು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕೊಠಡಿ ರದ್ದುಪಡಿಸುತ್ತಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದ ಬಿಸಿ ಇಲ್ಲಿನ ಆತಿಥ್ಯ ವಲಯಕ್ಕೆ ತಟ್ಟಿದೆ’ ಎಂದು ಉದ್ಯಮಿ ಮಾರುತಿ ರಾಣೆ ಪ್ರತಿಕ್ರಿಯಿಸಿದರು.</p>.<div><blockquote>ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ವಾಣಿಜ್ಯ ಸಿಲಿಂಡರ್ ಪೂರೈಕೆ ಸದ್ಯ ಇದೆ. ಆದರೆ ಈ ಮುಂಚಿನಂತೆ ಹೋಟೆಲ್ನವರು ಕೇಳಿದಷ್ಟು ಸಿಲಿಂಡರ್ ಪೂರೈಸುವುದು ಕಷ್ಟ. </blockquote><span class="attribution"> ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ</span></div>.<div><blockquote>ಸಿಲಿಂಡರ್ ಕೊರತೆಯಿಂದಾಗಿ ಹೋಟೆಲ್ನವರು ಪರ್ಯಾಯ ಮಾರ್ಗದ ಮೊರೆ ಹೋಗುವುದು ಅನಿವಾರ್ಯ. ತಿನಿಸುಗಳ ದರವನ್ನೂ ಏರಿಕೆ ಮಾಡಲಾಗಿದೆ. </blockquote><span class="attribution">ಶ್ಯಾಮ ಬಸ್ರೂರು ಖಾರಾ ಅಧ್ಯಕ್ಷ</span></div>.<p>ಗಡಿಯಲ್ಲಿ ಬಿಗು ತಪಾಸಣೆ ಗೋವಾದಿಂದ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ ಮೂಲಕ ಗೃಹಬಳಕೆ ವಾಣಿಜ್ಯ ಸಿಲಿಂಡರ್ ಅಕ್ರಮವಾಗಿ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಜಾಳಿಯ ಚೆಕ್ಪೋಸ್ಟ್ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ‘ಸಿಲಿಂಡರ್ ಅಕ್ರಮ ಸಾಗಣೆ ತಡೆಯಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ನಿತ್ಯವೂ ಅಲ್ಲಿ ನಿಗಾ ಇರಿಸುತ್ತಿದ್ದೇವೆ. ಪ್ರತಿ ವಾಹನಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಲು ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>