ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಆಟದ ಮೈದಾನ ಅತಿಕ್ರಮಣ ಆಗುತ್ತಿದೆ ಎಂಬ ಮಾಹಿತಿ ಮೇರೆಗೆ ಈಗಾಗಲೇ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಗಣೇಶನಗರದ ಪಕ್ಕದಲ್ಲಿರುವ ಸ್ಮಶಾನ ಜಾಗಕ್ಕೆ ಹೊಂದಿಕೊಂಡ ಅರಣ್ಯ ಜಾಗ ರಕ್ಷಣೆಗೂ ಅರಣ್ಯ ಇಲಾಖೆ ಕ್ರಮವಹಿಸಿದೆ. ಇದೇ ರೀತಿ ನಗರದ ಗಡಿ ಹಂಚಿಕೊಂಡ ಇಸಳೂರು, ದೊಡ್ನಳ್ಳಿ, ಸದಾಶಿವಳ್ಳಿ, ಯಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರಣ್ಯ ಖಾಲಿ ಜಾಗಗಳ ರಕ್ಷಣೆಗೆ ಕ್ರಮವಹಿಸುತ್ತಿದೆ.