ಇಲ್ಲಿನ ಅಟಲ್ ಸಭಾಂಗಣದಲ್ಲಿ ಗಣಪತಿ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ನಾಗರಾಜ ನಾಯ್ಕ, ‘ಲೀಸ್ ಅವಧಿ ಮುಗಿದ ಜಾಗವನ್ನು ಲೀಸ್ ದಾರರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವಧಿ ಮುಗಿದ ಜಾಗವನ್ನು ಲೀಸ್ದಾರರಿಂದ ಹಿಂಪಡೆದು ನಿವೇಶನ ರಹಿತರಿಗೆ ಮನೆ ನಿರ್ಮಾಣಕ್ಕೆ ನೀಡಲು ಕ್ರಮವಾಗಲಿ’ ಎಂದರು.