<p>ಶಿರಸಿ: ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ತಾಲ್ಲೂಕಿನ ಅಮ್ಮಿನಳ್ಳಿಯ ದಿನೇಶ ಮಡಿವಾಳ ಅವರಿಗೆ ಪ್ರತಿಷ್ಠಿತ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಗೌರವ ಲಭಿಸಿದೆ.</p>.<p>ಸೂರ್ಯೋದಯವನ್ನೇ ಮೂಲ ವಸ್ತುವಾಗಿಟ್ಟುಕೊಂಡು ದಿನೇಶ ಅವರು 1,750 ಕವಿತೆಗಳನ್ನು ರಚಿಸಿ ಈ ದಾಖಲೆ ಬರೆದಿದ್ದಾರೆ. ಇವುಗಳಲ್ಲಿ ಸೂರ್ಯನ ವಿವಿಧ ಹೆಸರುಗಳನ್ನು 3,327 ಬಾರಿ ಬಳಸಲಾಗಿದ್ದು, ಒಟ್ಟು 35,038 ಸಾಲುಗಳ ಬೃಹತ್ ಸಾಹಿತ್ಯ ಭಂಡಾರವನ್ನೇ ಸೃಜಿಸಿದ್ದಾರೆ.</p>.<p>ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಬಳಸಿ ರಚಿಸಿದ ಕಾವ್ಯ ಹಾಗೂ 307 ಸಾಲುಗಳ ಸುದೀರ್ಘ ಸೂರ್ಯ ಸಿರಿ ಕವಿತೆ ಇವರ ಸಾಹಿತ್ಯದ ವಿಶೇಷತೆ. ಈ ಹಿಂದೆ ಇವರ ಸ್ವರ್ಗ ನಿಸರ್ಗ ಕವನ ಸಂಕಲನ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿತ್ತು. ಆಕಾಶವಾಣಿಯಲ್ಲಿ ಕವನ ವಾಚನ ಹಾಗೂ ಕನ್ನಡ ಸಾಹಿತ್ಯ ಭೂಷಣ ರಾಷ್ಟ್ರೀಯ ಪ್ರಶಸ್ತಿಗೂ ದಿನೇಶ ಅವರು ಭಾಜನರಾಗಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-20-1381097453</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ತಾಲ್ಲೂಕಿನ ಅಮ್ಮಿನಳ್ಳಿಯ ದಿನೇಶ ಮಡಿವಾಳ ಅವರಿಗೆ ಪ್ರತಿಷ್ಠಿತ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಗೌರವ ಲಭಿಸಿದೆ.</p>.<p>ಸೂರ್ಯೋದಯವನ್ನೇ ಮೂಲ ವಸ್ತುವಾಗಿಟ್ಟುಕೊಂಡು ದಿನೇಶ ಅವರು 1,750 ಕವಿತೆಗಳನ್ನು ರಚಿಸಿ ಈ ದಾಖಲೆ ಬರೆದಿದ್ದಾರೆ. ಇವುಗಳಲ್ಲಿ ಸೂರ್ಯನ ವಿವಿಧ ಹೆಸರುಗಳನ್ನು 3,327 ಬಾರಿ ಬಳಸಲಾಗಿದ್ದು, ಒಟ್ಟು 35,038 ಸಾಲುಗಳ ಬೃಹತ್ ಸಾಹಿತ್ಯ ಭಂಡಾರವನ್ನೇ ಸೃಜಿಸಿದ್ದಾರೆ.</p>.<p>ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಬಳಸಿ ರಚಿಸಿದ ಕಾವ್ಯ ಹಾಗೂ 307 ಸಾಲುಗಳ ಸುದೀರ್ಘ ಸೂರ್ಯ ಸಿರಿ ಕವಿತೆ ಇವರ ಸಾಹಿತ್ಯದ ವಿಶೇಷತೆ. ಈ ಹಿಂದೆ ಇವರ ಸ್ವರ್ಗ ನಿಸರ್ಗ ಕವನ ಸಂಕಲನ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿತ್ತು. ಆಕಾಶವಾಣಿಯಲ್ಲಿ ಕವನ ವಾಚನ ಹಾಗೂ ಕನ್ನಡ ಸಾಹಿತ್ಯ ಭೂಷಣ ರಾಷ್ಟ್ರೀಯ ಪ್ರಶಸ್ತಿಗೂ ದಿನೇಶ ಅವರು ಭಾಜನರಾಗಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-20-1381097453</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>