‘ಗ್ರಾಮದ ಸರ್ವೆ ನಂಬರ್ 79, 20 ‘ಬಿ’, 5 ‘ಎ’, 58ನೇ ಬ್ಲಾಕ್ನಲ್ಲಿ 1,460 ಎಕರೆ ಜಮೀನನ್ನು ರೈತರಿಗೆ ಮಂಜೂರು ಮಾಡಲಾಗಿದೆ. ಕಾಳಗಿನಕೊಪ್ಪ, ಅಜಮನಾಳ, ಅಜಮನಾಳ ತಾಂಡಾ, ಗುಂಡೊಳ್ಳಿ ಗ್ರಾಮಗಳಲ್ಲಿ ಜಮೀನನ್ನು ರೈತರು ದಶಕಗಳಿಂದ ಉಳುಮೆ ಮಾಡುತ್ತಿದ್ದಾರೆ. ಆದರೆ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದು ಇತ್ಯರ್ಥ ಆಗುವ ತನಕ ಗಡಿ ಗುರುತಿಸಲು ಜಮೀನು ಅಳತೆ ಮಾಡದಂತೆ ನಿರ್ದೇಶಿಸಬೇಕು’ ಎಂದು ಒತ್ತಾಯಿಸಿದ್ದಾಗಿ ರೈತ ಸಂಜಯ್ ಶಿವಪ್ಪ ಮೇಟಿ ಸುದ್ದಿಗಾರರಿಗೆ ತಿಳಿಸಿದರು.