‘ಆಳಸಮುದ್ರದ ಗಿಲ್ನೆಟ್, ಲಾಂಗ್ನೆಟ್ ದೋಣಿಗಳಿಗೆ ಮಾತ್ರ ಸಹಾಯಧನ ನೀಡುವುದಾಗಿ ತಿಳಿಸಲಾಗುತ್ತಿದೆ. ಉತ್ತರ ಕನ್ನಡ ಭಾಗದಲ್ಲಿ ಅಂತಹ ದೋಣಿ ಬಳಕೆ ಮಾಡಲು ಮೀನುಗಾರರು ಒಪ್ಪುವುದಿಲ್ಲ. ಪರ್ಸಿನ್ ದೋಣಿಗಳ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಮುಂದಾಗಬೇಕು. ಈ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಬೇಕು. ಕಾಟಾಚಾರಕ್ಕೆ ಯೋಜನೆ ಘೋಷಿಸಬಾರದು’ ಎನ್ನುತ್ತಾರೆ ಮೀನು ಮಾರಾಟಗಾರರ ಸಹಕಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್.