<p><strong>ಮಜೊರ್ಡಾ (ಗೋವಾ):</strong> ದೇಶದ ವಾಸ್ತುಶಿಲ್ಪ ಕ್ಷೇತ್ರದಲ್ಲಿನ ಶ್ರೇಷ್ಠ ವಿನ್ಯಾಸ, ಹೊಸ ಪ್ರಯೋಗಗಳನ್ನು ಗುರುತಿಸಿ ಗೋದ್ರೆಜ್ ಎಂಟರ್ಪ್ರೈಸಸ್ ಗ್ರೂಪ್ ತನ್ನ ಲಾಕ್ಸ್ ಮತ್ತು ಆರ್ಕಿಟೆಕ್ಚರಲ್ ಸೊಲ್ಯೂಷನ್ಸ್ ವ್ಯವಹಾರದ ಮೂಲಕ ನೀಡುವ ಪ್ರತಿಷ್ಠಿತ ‘ಗೀವೀಸ್ ಪ್ರಶಸ್ತಿ’ಯ 5ನೇ ಆವೃತ್ತಿಯ ಪ್ರದಾನ ಸಮಾರಂಭ ಈಚೆಗೆ ಇಲ್ಲಿ ಅದ್ದೂರಿಯಾಗಿ ನಡೆಯಿತು.</p>.<p>ದೇಶದ ಪ್ರಮುಖ ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕರು ಮತ್ತು ಉದ್ಯಮದ ಪ್ರಭಾವಿಗಳ ಪೈಕಿ ಅತ್ಯುನ್ನತ ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಗೋದ್ರೆಜ್ ವ್ಯಾಲ್ಯೂ ಕೋ-ಕ್ರಿಯೇಟರ್ಸ್ ಕ್ಲಬ್ನಡಿ (ಜಿವಿಸಿಸಿ) ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಸತಿ, ವಾಣಿಜ್ಯ, ಆತಿಥ್ಯ, ಸಾಂಸ್ಥಿಕ ಮತ್ತು ವಿಶೇಷ ವಿನ್ಯಾಸ ವಿಭಾಗಗಳಲ್ಲಿ ವ್ಯಾಪಿಸಿರುವ 15 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನೀಡಲಾಯಿತು.</p>.<p>ವಿವೇಕ್ ಸಿಂಗ್ ರಾಥೋಡ್, ಹಾರ್ಟ್ಮಟ್, ಯತಿನ್ ಪಟೇಲ್, ಸೌರಭ ಚಂದ್ರ, ರಾಹುಲ್ ಸಾಥೆ ಮತ್ತು ಚರಂಜಿತ್ ಸಿಂಗ್ ಶಾ ಸೇರಿ ಪ್ರಸಿದ್ಧ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸ ತಜ್ಞರನ್ನು ಒಳಗೊಂಡ ಶ್ರೇಷ್ಠ ತೀರ್ಪುಗಾರರ ಸಮಿತಿಯು ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ವಿಜೇತರನ್ನು ಆಯ್ಕೆ ಮಾಡಿತ್ತು.</p>.<p>‘ಗೀವೀಸ್ ಒಂದು ಪ್ರಬಲ ಕೈಗಾರಿಕಾ ವೇದಿಕೆಯಾಗಿ ವಿಕಸನಗೊಂಡಿದೆ. ವಾಸ್ತುಶಿಲ್ಪ ಕ್ಷೇತ್ರದ ನಾವೀನ್ಯ, ಸುಸ್ಥಿರತೆ, ವಿನೂತನ ವಿನ್ಯಾಸಗಳನ್ನು ಗುರುತಿಸಿ, ಪ್ರೋತ್ಸಾಹಿಸುವಲ್ಲಿ ಮುಂಚೂಣಿಯಲ್ಲಿದ್ದೇವೆ. ಭಾರತದ ವಾಸ್ತುಶಿಲ್ಪ ಮತ್ತು ವಿನ್ಯಾಸ ಸಮುದಾಯವನ್ನು ಸಬಲೀಕರಣಗೊಳಿಸಲು ಗೋದ್ರೆಜ್ ಎಂಟರ್ಪ್ರೈಸಸ್ ಗ್ರೂಪ್ ಬದ್ಧವಾಗಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದರು.</p>.<p>ಗೋದ್ರೆಜ್ ಲಾಕ್ಸ್, ಆರ್ಕಿಟೆಕ್ಚರಲ್ ಫಿಟ್ಟಿಂಗ್ಸ್ ಮತ್ತು ಸಿಸ್ಟಮ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮೊಟ್ವಾನಿ ಮತ್ತು ಇತರ ಗಣ್ಯರು ಪಾಲ್ಗೊಂಡಿದ್ದರು.</p>.<h2>ಪ್ರಶಸ್ತಿ ಪುರಸ್ಕೃತರು </h2>.<p>ಗೀವೀಸ್ ಪ್ರಶಸ್ತಿಗೆ ಸಾಂಸ್ಥಿಕ ಶೈಕ್ಷಣಿಕ ಆರೋಗ್ಯ ವಸತಿ ಸೇರಿದಂತೆ ವಿವಿಧ ವಿಭಾಗದ ನಿರ್ಮಾಣ ಕ್ಷೇತ್ರದಲ್ಲಿ 15 ಪ್ರತ್ಯೇಕ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಿಲನಾ ಮಲಾಡ್ಕರ್ ಅರವಿಂದ ಜಗನ್ನಾಥನ್ ಶ್ರೇಯಾ ಸಾಂಘ್ವಿ ವಿಫುಲ್ ಸಾಂಘ್ವಿ ಮನೋಜ ಪಟೇಲ್ ಪ್ರಚಿ ವೋರಾ ವಿನೀತ್ ವೋರಾ ರೋನಕ್ ಪಟೇಲ್ ಓಂಕಾರ ವೈಂಗಣಕರ ಮನೀಶ ಬ್ಯಾಂಕರ್ ಶ್ರವಣ ಪ್ರದೀಪ ಮೇಘಾ ನಾಣಯ್ಯ ಸ್ನೇಹಾ ಒಸ್ತವಾಲ್ ದೀಪಿಕಾ ಸೇಠಿ ಬಿಜೊಯ್ ರಾಮಚಂದ್ರನ್ ಸುನೀತಾ ಕೊಂಡೂರ ಪ್ರನ್ವಿ ಜೈನ್ ಧ್ರುವ್ ಡಿ.ವಿ ಕಫಲ ತ್ರಿವೇದಿ ಮಾಳವಿಕ ಮಹೇಶ ರಾಹುಲ ಕುಮಾರ ಪ್ರಶಸ್ತಿಗೆ ಪಾತ್ರರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಜೊರ್ಡಾ (ಗೋವಾ):</strong> ದೇಶದ ವಾಸ್ತುಶಿಲ್ಪ ಕ್ಷೇತ್ರದಲ್ಲಿನ ಶ್ರೇಷ್ಠ ವಿನ್ಯಾಸ, ಹೊಸ ಪ್ರಯೋಗಗಳನ್ನು ಗುರುತಿಸಿ ಗೋದ್ರೆಜ್ ಎಂಟರ್ಪ್ರೈಸಸ್ ಗ್ರೂಪ್ ತನ್ನ ಲಾಕ್ಸ್ ಮತ್ತು ಆರ್ಕಿಟೆಕ್ಚರಲ್ ಸೊಲ್ಯೂಷನ್ಸ್ ವ್ಯವಹಾರದ ಮೂಲಕ ನೀಡುವ ಪ್ರತಿಷ್ಠಿತ ‘ಗೀವೀಸ್ ಪ್ರಶಸ್ತಿ’ಯ 5ನೇ ಆವೃತ್ತಿಯ ಪ್ರದಾನ ಸಮಾರಂಭ ಈಚೆಗೆ ಇಲ್ಲಿ ಅದ್ದೂರಿಯಾಗಿ ನಡೆಯಿತು.</p>.<p>ದೇಶದ ಪ್ರಮುಖ ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕರು ಮತ್ತು ಉದ್ಯಮದ ಪ್ರಭಾವಿಗಳ ಪೈಕಿ ಅತ್ಯುನ್ನತ ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಗೋದ್ರೆಜ್ ವ್ಯಾಲ್ಯೂ ಕೋ-ಕ್ರಿಯೇಟರ್ಸ್ ಕ್ಲಬ್ನಡಿ (ಜಿವಿಸಿಸಿ) ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಸತಿ, ವಾಣಿಜ್ಯ, ಆತಿಥ್ಯ, ಸಾಂಸ್ಥಿಕ ಮತ್ತು ವಿಶೇಷ ವಿನ್ಯಾಸ ವಿಭಾಗಗಳಲ್ಲಿ ವ್ಯಾಪಿಸಿರುವ 15 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನೀಡಲಾಯಿತು.</p>.<p>ವಿವೇಕ್ ಸಿಂಗ್ ರಾಥೋಡ್, ಹಾರ್ಟ್ಮಟ್, ಯತಿನ್ ಪಟೇಲ್, ಸೌರಭ ಚಂದ್ರ, ರಾಹುಲ್ ಸಾಥೆ ಮತ್ತು ಚರಂಜಿತ್ ಸಿಂಗ್ ಶಾ ಸೇರಿ ಪ್ರಸಿದ್ಧ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸ ತಜ್ಞರನ್ನು ಒಳಗೊಂಡ ಶ್ರೇಷ್ಠ ತೀರ್ಪುಗಾರರ ಸಮಿತಿಯು ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ವಿಜೇತರನ್ನು ಆಯ್ಕೆ ಮಾಡಿತ್ತು.</p>.<p>‘ಗೀವೀಸ್ ಒಂದು ಪ್ರಬಲ ಕೈಗಾರಿಕಾ ವೇದಿಕೆಯಾಗಿ ವಿಕಸನಗೊಂಡಿದೆ. ವಾಸ್ತುಶಿಲ್ಪ ಕ್ಷೇತ್ರದ ನಾವೀನ್ಯ, ಸುಸ್ಥಿರತೆ, ವಿನೂತನ ವಿನ್ಯಾಸಗಳನ್ನು ಗುರುತಿಸಿ, ಪ್ರೋತ್ಸಾಹಿಸುವಲ್ಲಿ ಮುಂಚೂಣಿಯಲ್ಲಿದ್ದೇವೆ. ಭಾರತದ ವಾಸ್ತುಶಿಲ್ಪ ಮತ್ತು ವಿನ್ಯಾಸ ಸಮುದಾಯವನ್ನು ಸಬಲೀಕರಣಗೊಳಿಸಲು ಗೋದ್ರೆಜ್ ಎಂಟರ್ಪ್ರೈಸಸ್ ಗ್ರೂಪ್ ಬದ್ಧವಾಗಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದರು.</p>.<p>ಗೋದ್ರೆಜ್ ಲಾಕ್ಸ್, ಆರ್ಕಿಟೆಕ್ಚರಲ್ ಫಿಟ್ಟಿಂಗ್ಸ್ ಮತ್ತು ಸಿಸ್ಟಮ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮೊಟ್ವಾನಿ ಮತ್ತು ಇತರ ಗಣ್ಯರು ಪಾಲ್ಗೊಂಡಿದ್ದರು.</p>.<h2>ಪ್ರಶಸ್ತಿ ಪುರಸ್ಕೃತರು </h2>.<p>ಗೀವೀಸ್ ಪ್ರಶಸ್ತಿಗೆ ಸಾಂಸ್ಥಿಕ ಶೈಕ್ಷಣಿಕ ಆರೋಗ್ಯ ವಸತಿ ಸೇರಿದಂತೆ ವಿವಿಧ ವಿಭಾಗದ ನಿರ್ಮಾಣ ಕ್ಷೇತ್ರದಲ್ಲಿ 15 ಪ್ರತ್ಯೇಕ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಿಲನಾ ಮಲಾಡ್ಕರ್ ಅರವಿಂದ ಜಗನ್ನಾಥನ್ ಶ್ರೇಯಾ ಸಾಂಘ್ವಿ ವಿಫುಲ್ ಸಾಂಘ್ವಿ ಮನೋಜ ಪಟೇಲ್ ಪ್ರಚಿ ವೋರಾ ವಿನೀತ್ ವೋರಾ ರೋನಕ್ ಪಟೇಲ್ ಓಂಕಾರ ವೈಂಗಣಕರ ಮನೀಶ ಬ್ಯಾಂಕರ್ ಶ್ರವಣ ಪ್ರದೀಪ ಮೇಘಾ ನಾಣಯ್ಯ ಸ್ನೇಹಾ ಒಸ್ತವಾಲ್ ದೀಪಿಕಾ ಸೇಠಿ ಬಿಜೊಯ್ ರಾಮಚಂದ್ರನ್ ಸುನೀತಾ ಕೊಂಡೂರ ಪ್ರನ್ವಿ ಜೈನ್ ಧ್ರುವ್ ಡಿ.ವಿ ಕಫಲ ತ್ರಿವೇದಿ ಮಾಳವಿಕ ಮಹೇಶ ರಾಹುಲ ಕುಮಾರ ಪ್ರಶಸ್ತಿಗೆ ಪಾತ್ರರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>