ಕಾರವಾರ: ‘ಗೋವಾದಲ್ಲಿರುವ ಕುಣಬಿ ಮತ್ತು ಕರ್ನಾಟಕದಲ್ಲಿರುವ ಕುಣಬಿಗಳ ಸಾಮಾಜಿಕ ಸ್ಥಿತಿಗತಿ, ಸಂಸ್ಕೃತಿ, ಜೀವನ ಪದ್ಧತಿ ಒಂದೇ ತೆರನಾಗಿದೆ. ಎರಡೂ ರಾಜ್ಯಗಳಲ್ಲಿ ಹಂಚಿಹೋಗಿರುವ ಸಮುದಾಯದವರು ಸಹೋದರರಂತೆ. ಒಬ್ಬ ಸಹೋದರನಿಗೆ ಸಿಕ್ಕ ನ್ಯಾಯ ಇನ್ನೊಬ್ಬ ಸಹೋದರನಿಗೂ ಸಿಗಬೇಕಾಗಿದೆ. ಗೋವಾದಲ್ಲಿ ಇವರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದ್ದು, ಇಲ್ಲಿಯೂ ಸೇರಿಸಬೇಕಾಗಿದೆ’ ಎಂದು ಗೋವಾ ವಿಧಾನಸಭಾಧ್ಯಕ್ಷ ರಮೇಶ ತವಡ್ಕರ್ ಹೇಳಿದರು.