<p><strong>ಗೋಕರ್ಣ</strong>: ಮೂರು ವರ್ಷಗಳ ಹಿಂದೆ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಭದ್ರಕಾಳಿ ಕಾಲೇಜಿನ ಎದುರಿನಿಂದ ಓಂ ಬೀಚ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆ, ಕಳಪೆ ಕಾಮಗಾರಿಯಿಂದ ಸ್ವಲ್ಪ ಭಾಗ ಕುಸಿದುಬಿದ್ದಿತ್ತು. ಕೆಲವು ದಿನಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಅದನ್ನು ದುರಸ್ತಿಮಾಡಿದ್ದರೂ ಈಗ ಮತ್ತೆ ರಸ್ತೆ ಬಿರುಕು ಬಿಟ್ಟಿದ್ದು, ನಾಗರಿಕರ ಆತಂಕಕ್ಕೆ ಕಾರಣವಾಗಿದೆ.</p>.<p>ಓಂ ಬೀಚಿಗೆ ಹೋಗಲು ಸಮೀಪ ಮತ್ತು ಪದೇ ಪದೇ ಆಗುವ ಟ್ರಾಫಿಕ್ ಜಾಮ್ಗೆ ಪರಿಹಾರವಾಗಿ ಭದ್ರಕಾಳಿ ಕಾಲೇಜಿನ ಎದುರಿನಿಂದ ಓಂ ಬೀಚಿಗೆ ₹ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮಳೆಯ ಅಬ್ಬರಕ್ಕೆ ಅದು ಪುನಃ ಒಂದೇ ವರ್ಷದಲ್ಲಿ ಕುಸಿದು ಬಿದ್ದಿತ್ತು. ಅಲ್ಲದೇ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಸಮರ್ಪಕವಾಗಿ ಆಗದ ಕಾರಣ ಮಣ್ಣು, ಕಲ್ಲುಗಳ ರಾಶಿಯೇ ಬಿದ್ದಿತ್ತು. ನಂತರ ವರ್ಷಗಳ ಕಾಲ ಅಪಾಯದ ರಸ್ತೆಯಲ್ಲೇ ವಾಹನ ಸಂಚರಿಸುತ್ತಿತ್ತು. ಬಳಿಕ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ₹ 15 ಲಕ್ಷ ಮಂಜೂರಿ ಮಾಡಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿತ್ತು.</p>.<p>‘ರಸ್ತೆ ಬಿರುಕು ಬಿಟ್ಟ ಕಡೆಯಲ್ಲಿ ತಡಗೋಡೆ ನಿರ್ಮಿಸಲಾಗಿದೆ. ಇಲ್ಲಿ ಮಣ್ಣು ತುಂಬಿ ಸಮತಟ್ಟು ಮಾಡಿರುವುದು ಮಳೆಯ ನೀರಿಗೆ ಕೊಚ್ಚಿ ಹೋಗಿದೆ. ಕೆಲವೆಡೆ ಕಂದಕ ಬಿದ್ದಿದೆ. ಅಲ್ಲದೇ ಚರಂಡಿಯಲ್ಲಿ ತುಂಬಿದ ಮಣ್ಣಿನ ರಾಶಿಯನ್ನು ಸಹ ತೆಗೆಯದೇ ಬಿಡಲಾಗಿದೆ. ಮಳೆಗಾಲದಲ್ಲಿ ಅವಘಡ ಸಂಭವಿಸುವ ಅಪಾಯವಿದೆ. ರಸ್ತೆ ಅಂಚು ಕುಸಿದು ಕಂದಕ ನಿರ್ಮಾಣವಾಗಿದೆ. ಪುನಃ ನಡೆದ ದುರಸ್ತಿ ಕಾಮಗಾರಿಯೂ ಕಳಪೆಯಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲೇ ಸರಿಪಡಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-20-598151804</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ</strong>: ಮೂರು ವರ್ಷಗಳ ಹಿಂದೆ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಭದ್ರಕಾಳಿ ಕಾಲೇಜಿನ ಎದುರಿನಿಂದ ಓಂ ಬೀಚ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆ, ಕಳಪೆ ಕಾಮಗಾರಿಯಿಂದ ಸ್ವಲ್ಪ ಭಾಗ ಕುಸಿದುಬಿದ್ದಿತ್ತು. ಕೆಲವು ದಿನಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಅದನ್ನು ದುರಸ್ತಿಮಾಡಿದ್ದರೂ ಈಗ ಮತ್ತೆ ರಸ್ತೆ ಬಿರುಕು ಬಿಟ್ಟಿದ್ದು, ನಾಗರಿಕರ ಆತಂಕಕ್ಕೆ ಕಾರಣವಾಗಿದೆ.</p>.<p>ಓಂ ಬೀಚಿಗೆ ಹೋಗಲು ಸಮೀಪ ಮತ್ತು ಪದೇ ಪದೇ ಆಗುವ ಟ್ರಾಫಿಕ್ ಜಾಮ್ಗೆ ಪರಿಹಾರವಾಗಿ ಭದ್ರಕಾಳಿ ಕಾಲೇಜಿನ ಎದುರಿನಿಂದ ಓಂ ಬೀಚಿಗೆ ₹ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮಳೆಯ ಅಬ್ಬರಕ್ಕೆ ಅದು ಪುನಃ ಒಂದೇ ವರ್ಷದಲ್ಲಿ ಕುಸಿದು ಬಿದ್ದಿತ್ತು. ಅಲ್ಲದೇ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಸಮರ್ಪಕವಾಗಿ ಆಗದ ಕಾರಣ ಮಣ್ಣು, ಕಲ್ಲುಗಳ ರಾಶಿಯೇ ಬಿದ್ದಿತ್ತು. ನಂತರ ವರ್ಷಗಳ ಕಾಲ ಅಪಾಯದ ರಸ್ತೆಯಲ್ಲೇ ವಾಹನ ಸಂಚರಿಸುತ್ತಿತ್ತು. ಬಳಿಕ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ₹ 15 ಲಕ್ಷ ಮಂಜೂರಿ ಮಾಡಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿತ್ತು.</p>.<p>‘ರಸ್ತೆ ಬಿರುಕು ಬಿಟ್ಟ ಕಡೆಯಲ್ಲಿ ತಡಗೋಡೆ ನಿರ್ಮಿಸಲಾಗಿದೆ. ಇಲ್ಲಿ ಮಣ್ಣು ತುಂಬಿ ಸಮತಟ್ಟು ಮಾಡಿರುವುದು ಮಳೆಯ ನೀರಿಗೆ ಕೊಚ್ಚಿ ಹೋಗಿದೆ. ಕೆಲವೆಡೆ ಕಂದಕ ಬಿದ್ದಿದೆ. ಅಲ್ಲದೇ ಚರಂಡಿಯಲ್ಲಿ ತುಂಬಿದ ಮಣ್ಣಿನ ರಾಶಿಯನ್ನು ಸಹ ತೆಗೆಯದೇ ಬಿಡಲಾಗಿದೆ. ಮಳೆಗಾಲದಲ್ಲಿ ಅವಘಡ ಸಂಭವಿಸುವ ಅಪಾಯವಿದೆ. ರಸ್ತೆ ಅಂಚು ಕುಸಿದು ಕಂದಕ ನಿರ್ಮಾಣವಾಗಿದೆ. ಪುನಃ ನಡೆದ ದುರಸ್ತಿ ಕಾಮಗಾರಿಯೂ ಕಳಪೆಯಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲೇ ಸರಿಪಡಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-20-598151804</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>