<p>ಹಳಿಯಾಳ: ಇಲ್ಲಿನ ತಿಲಕ ರಸ್ತೆಯಲ್ಲಿರುವ ಪರಮಾತ್ಮನಿಕೇತನ ಶ್ರೀ ಹರಿ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಈಶ್ವರ ಮಂದಿರದಲ್ಲಿ ಈಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ಶೃದ್ಧಾ–ಭಕ್ತಿಯಿಂದ ನಡೆಯಿತು.</p>.<p>ಗಣಪತಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಕಳಶ ಪೂಜೆ, ಕಲಾವೃದ್ಧಿ ಹವನ, ಪೂರ್ಣಾಹುತಿ, ದೇವತಾ ಸ್ಥಾಪನೆ, ಈಶ್ವರ ಗಣಪತಿ ನಂದೀಶ್ವರರ ಪೂಜೆ ನಡೆಯಿತು.</p>.<p>ಶಾಸಕ ಆರ್.ವಿ. ದೇಶಪಾಂಡೆ, ವಿಕಾಸ ಕಾನೇಟಕರ ಹಾಗೂ ಕುಟುಂಬಸ್ಥರು, ಕಲಾವತಿ ಹರಿ ಮಂದಿರದ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಿತು.</p>.<p>ಪ್ರಧಾನ ಅರ್ಚಕರಾದ ಉದಯ ಹರ್ಷಲಕರ ನೇತೃತ್ವದಲ್ಲಿ ಮೋಹನ ಭಟ್, ಮರಾಠೆ, ರಾಮಚಂದ್ರ ಭಟ, ಪ್ರಶಾಂತ ಜೋಶಿ, ಅಚ್ಯುತ ಪಾಠಕ, ರಮೇಶ ಪುರೋಹಿತ ಪೂಜಾ ವಿಧಿ ವಿಧಾನ ನೆರವೇರಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-20-934511051</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಳಿಯಾಳ: ಇಲ್ಲಿನ ತಿಲಕ ರಸ್ತೆಯಲ್ಲಿರುವ ಪರಮಾತ್ಮನಿಕೇತನ ಶ್ರೀ ಹರಿ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಈಶ್ವರ ಮಂದಿರದಲ್ಲಿ ಈಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ಶೃದ್ಧಾ–ಭಕ್ತಿಯಿಂದ ನಡೆಯಿತು.</p>.<p>ಗಣಪತಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಕಳಶ ಪೂಜೆ, ಕಲಾವೃದ್ಧಿ ಹವನ, ಪೂರ್ಣಾಹುತಿ, ದೇವತಾ ಸ್ಥಾಪನೆ, ಈಶ್ವರ ಗಣಪತಿ ನಂದೀಶ್ವರರ ಪೂಜೆ ನಡೆಯಿತು.</p>.<p>ಶಾಸಕ ಆರ್.ವಿ. ದೇಶಪಾಂಡೆ, ವಿಕಾಸ ಕಾನೇಟಕರ ಹಾಗೂ ಕುಟುಂಬಸ್ಥರು, ಕಲಾವತಿ ಹರಿ ಮಂದಿರದ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಿತು.</p>.<p>ಪ್ರಧಾನ ಅರ್ಚಕರಾದ ಉದಯ ಹರ್ಷಲಕರ ನೇತೃತ್ವದಲ್ಲಿ ಮೋಹನ ಭಟ್, ಮರಾಠೆ, ರಾಮಚಂದ್ರ ಭಟ, ಪ್ರಶಾಂತ ಜೋಶಿ, ಅಚ್ಯುತ ಪಾಠಕ, ರಮೇಶ ಪುರೋಹಿತ ಪೂಜಾ ವಿಧಿ ವಿಧಾನ ನೆರವೇರಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-20-934511051</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>