ಕುಮಟಾ: 'ಬಿಜೆಪಿಯಲ್ಲಿ ತಾನು ಮುಂದುವರೆಯಲು ಸಾಧ್ಯವೇ ಇಲ್ಲ. ಮಂತ್ರಿ ಸ್ಥಾನ ಕೊಡುವುದಾದರೆ ಜೆಡಿಎಸ್ ಸೇರುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಆಪ್ತರೊಬ್ಬರ ಮೂಲಕ ಚೀಟಿ ಕಳುಹಿಸಿಕೊಟ್ಟಿದ್ದರು. ಆದರೆ, ಅವರ ರಾಜಕೀಯ ಇಮೇಜ್ ಉಳಿಸಲು ಅವರನ್ನು ಬಿಜೆಪಿಯಲ್ಲೇ ಮುಂದುವರೆಯಲು ಹೇಳಿದೆ. ಸರ್ಕಾರ ರಚನೆಗೂ ಅವಕಾಶ ಮಾಡಿಕೊಟ್ಟೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.