<p><strong>ಜೊಯಿಡಾ</strong>: ಜಲ ಕ್ರೀಡೆಗಳಿಗೆ ಸಂಬಂಧಿಸಿದಂತೆ ದರ ಏರಿಕೆಯ ವಿಚಾರದಲ್ಲಿ ತಾಲ್ಲೂಕಿನ ಗಣೇಶಗುಡಿಯಲ್ಲಿ (ಇಳವಾ) ಜಲಕ್ರೀಡೆ ಆಯೋಜನೆ ಅಸೋಸಿಯೇಷನ್ ಮತ್ತು ಪ್ರವಾಸಿಗರನ್ನು ಕರೆತರುವ ದಲ್ಲಾಳಿಗಳ ನಡುವೆ ನಡೆದ ಮಾತಿನ ಚಕಮಕಿ ಗಲಾಟೆಯ ಸ್ವರೂಪವನ್ನು ಪಡೆದುಕೊಂಡಿದ್ದು, ಮಂಗಳವಾರ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ 8ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಜಲಕ್ರೀಡೆಗಳನ್ನು ನಡೆಸುವ ಜಟ್ಟಿದಾರರು ಮತ್ತು ಏಜೆಂಟರ ನಡುವೆ ಗಲಾಟೆ ನಡೆದಿದ್ದು ಎರಡು ತಂಡದ ತಲಾ ನಾಲ್ಕು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ದಾಂಡೇಲಿಯವರಾದ ಶ್ಯಾಮಲ, ಕರೀಮ ಖತೀಬ, ಸಂಜು ನಂದ್ಯಾಳಕರ, ಪವನ ಕೊನ್ನರ, ಉದಯ, ಜೋಸೆಫ್ ಬೈಲಾ, ಸಚಿನ ಕಾಳೋಜಿ, ಗಣೇಶಗುಡಿಯ ಚಾಂದ್ ಕುಟ್ಟಿ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>‘ಗಣೇಶಗುಡಿಯಲ್ಲಿ ಕಾಳಿ ನದಿಯಲ್ಲಿ ಸುಮಾರು 9 ಕಿ.ಮೀ ನಡೆಯುವ ರ್ಯಾಫ್ಟಿಂಗ್ ಸೇರಿದಂತೆ ಇನ್ನಿತರ ಐದು ಜಲಸಾಹಸ ಕ್ರೀಡೆಗಳಿಗೆ ಜಟ್ಟಿ ಮಾಲಿಕರು ಹಾಗೂ ಅಸೋಸಿಯೇಷನ್ನವರು ಏಕರೂಪದ ಪೋರ್ಟಲ್ ವ್ಯವಸ್ಥೆ ಜಾರಿಗೆ ತಂದಿದ್ದರು. ಯಾವುದೇ ಜಟ್ಟಿಯವರಿಗೆ ನಷ್ಟ ಆಗದಂತೆ ಜಲ ಸಾಹಸ ಕ್ರೀಡೆಗಳ ದರವನ್ನು ಹೆಚ್ಚಿಸಿ, ₹750 ರೂಪಾಯಿ ದರದಲ್ಲಿ ಒಂದೇ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದನ್ನು ವಿರೋಧಿಸಿ ಕೆಲ ದಲ್ಲಾಳಿಗಳು ಗಲಾಟೆ ನಡೆಸಿದ್ದಾರೆ’ ಎಂಬುದು ಅಸೋಸಿಯೇಶನ್ ಆರೋಪ.</p>.<p>‘ಕೆಲವರು ಅಧಿಕ ದರ, ಕೆಲವರು ಕಡಿಮೆ ದರ ನಿಗದಿಪಡಿಸಿ ಪ್ರವಾಸಿಗರನ್ನು ಸೆಳೆಯಲು ಯತ್ನಿಸಿದ್ದರು. ಅದರ ಬದಲು ಏಕರೂಪದ ದರ ನಿಗದಿಪಡಿಸಿದ್ದರಿಂದ ತಮಗೆ ಕಮೀಷನ್ ಪ್ರಮಾಣ ಕಡಿಮೆ ಆಗಬಹುದು ಎಂಬ ಕಾರಣಕ್ಕೆ ಕೆಲವರು ತಗಾದೆ ತೆಗೆದಿದ್ದಾರೆ’ ಎಂಬುದು ಅವರ ದೂರು.</p>.<p>‘ಜಲಕ್ರೀಡೆಗಳ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ದರಗಳನ್ನು ಕಡಿಮೆ ಮಾಡುವಂತೆ ಸುಪಾ ಅಸೋಸಿಯೇಷನ್ನವರು ಮನವಿ ನೀಡಿದ್ದಾರೆ. ಪ್ರತ್ಯೇಕ ಜಲಕ್ರೀಡೆಗಳಿಗೆ ಪ್ರತ್ಯೇಕ ದರಗಳನ್ನು ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದರೆ ಅದನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೊಯಿಡಾ</strong>: ಜಲ ಕ್ರೀಡೆಗಳಿಗೆ ಸಂಬಂಧಿಸಿದಂತೆ ದರ ಏರಿಕೆಯ ವಿಚಾರದಲ್ಲಿ ತಾಲ್ಲೂಕಿನ ಗಣೇಶಗುಡಿಯಲ್ಲಿ (ಇಳವಾ) ಜಲಕ್ರೀಡೆ ಆಯೋಜನೆ ಅಸೋಸಿಯೇಷನ್ ಮತ್ತು ಪ್ರವಾಸಿಗರನ್ನು ಕರೆತರುವ ದಲ್ಲಾಳಿಗಳ ನಡುವೆ ನಡೆದ ಮಾತಿನ ಚಕಮಕಿ ಗಲಾಟೆಯ ಸ್ವರೂಪವನ್ನು ಪಡೆದುಕೊಂಡಿದ್ದು, ಮಂಗಳವಾರ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ 8ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಜಲಕ್ರೀಡೆಗಳನ್ನು ನಡೆಸುವ ಜಟ್ಟಿದಾರರು ಮತ್ತು ಏಜೆಂಟರ ನಡುವೆ ಗಲಾಟೆ ನಡೆದಿದ್ದು ಎರಡು ತಂಡದ ತಲಾ ನಾಲ್ಕು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ದಾಂಡೇಲಿಯವರಾದ ಶ್ಯಾಮಲ, ಕರೀಮ ಖತೀಬ, ಸಂಜು ನಂದ್ಯಾಳಕರ, ಪವನ ಕೊನ್ನರ, ಉದಯ, ಜೋಸೆಫ್ ಬೈಲಾ, ಸಚಿನ ಕಾಳೋಜಿ, ಗಣೇಶಗುಡಿಯ ಚಾಂದ್ ಕುಟ್ಟಿ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>‘ಗಣೇಶಗುಡಿಯಲ್ಲಿ ಕಾಳಿ ನದಿಯಲ್ಲಿ ಸುಮಾರು 9 ಕಿ.ಮೀ ನಡೆಯುವ ರ್ಯಾಫ್ಟಿಂಗ್ ಸೇರಿದಂತೆ ಇನ್ನಿತರ ಐದು ಜಲಸಾಹಸ ಕ್ರೀಡೆಗಳಿಗೆ ಜಟ್ಟಿ ಮಾಲಿಕರು ಹಾಗೂ ಅಸೋಸಿಯೇಷನ್ನವರು ಏಕರೂಪದ ಪೋರ್ಟಲ್ ವ್ಯವಸ್ಥೆ ಜಾರಿಗೆ ತಂದಿದ್ದರು. ಯಾವುದೇ ಜಟ್ಟಿಯವರಿಗೆ ನಷ್ಟ ಆಗದಂತೆ ಜಲ ಸಾಹಸ ಕ್ರೀಡೆಗಳ ದರವನ್ನು ಹೆಚ್ಚಿಸಿ, ₹750 ರೂಪಾಯಿ ದರದಲ್ಲಿ ಒಂದೇ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದನ್ನು ವಿರೋಧಿಸಿ ಕೆಲ ದಲ್ಲಾಳಿಗಳು ಗಲಾಟೆ ನಡೆಸಿದ್ದಾರೆ’ ಎಂಬುದು ಅಸೋಸಿಯೇಶನ್ ಆರೋಪ.</p>.<p>‘ಕೆಲವರು ಅಧಿಕ ದರ, ಕೆಲವರು ಕಡಿಮೆ ದರ ನಿಗದಿಪಡಿಸಿ ಪ್ರವಾಸಿಗರನ್ನು ಸೆಳೆಯಲು ಯತ್ನಿಸಿದ್ದರು. ಅದರ ಬದಲು ಏಕರೂಪದ ದರ ನಿಗದಿಪಡಿಸಿದ್ದರಿಂದ ತಮಗೆ ಕಮೀಷನ್ ಪ್ರಮಾಣ ಕಡಿಮೆ ಆಗಬಹುದು ಎಂಬ ಕಾರಣಕ್ಕೆ ಕೆಲವರು ತಗಾದೆ ತೆಗೆದಿದ್ದಾರೆ’ ಎಂಬುದು ಅವರ ದೂರು.</p>.<p>‘ಜಲಕ್ರೀಡೆಗಳ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ದರಗಳನ್ನು ಕಡಿಮೆ ಮಾಡುವಂತೆ ಸುಪಾ ಅಸೋಸಿಯೇಷನ್ನವರು ಮನವಿ ನೀಡಿದ್ದಾರೆ. ಪ್ರತ್ಯೇಕ ಜಲಕ್ರೀಡೆಗಳಿಗೆ ಪ್ರತ್ಯೇಕ ದರಗಳನ್ನು ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದರೆ ಅದನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>