<p><strong>ಕಾರವಾರ:</strong> ತಾಲ್ಲೂಕಿನ ಚಿತ್ತಾಕುಲಾದ ಸೀಬರ್ಡ್ ಕಾಲೊನಿಯ ಸಮೀಪದ 18 ಎಕರೆ ಜಾಗದಲ್ಲಿ 245 ನಿವೇಶನಗಳನ್ನು ಬಂದರು ಜಲಸಾರಿಗೆ ಮಂಡಳಿ ಸಜ್ಜುಗೊಳಿಸುತ್ತಿದೆ. ಈ ಜಾಗಕ್ಕೆ ಇಲ್ಲಿನ ಬೈತಕೋಲದಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ.</p>.<p>ಬಂದರು ಜಲಸಾರಿಗೆ ಮಂಡಳಿಯು ತನಗೆ ಸೇರಿದ್ದ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ರಸ್ತೆ, ಚರಂಡಿ, ಇತರ ಮೂಲಸೌಕರ್ಯಗಳನ್ನು ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ.</p>.<p>‘ಚಿತ್ತಾಕುಲಾದಲ್ಲಿ ಲೇಔಟ್ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಅಲ್ಲಿ ಇಲಾಖೆಗೆ ಸೇರಿದ್ದ 20 ಎಕರೆಯಷ್ಟು ಭೂಮಿ ಇತ್ತು. ಅವುಗಳ ಪೈಕಿ 2 ಎಕರೆಯಷ್ಟು ಜಾಗ ಒತ್ತುವರಿಯಾಗಿದೆ. ಉಳಿದ 18 ಎಕರೆಯಲ್ಲಿ ನಿವೇಶನಗಳನ್ನು ರಚಿಸಿ, ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೆ, ಈ ಸ್ಥಳಕ್ಕೆ ಬೈತಕೋಲದಲ್ಲಿನ ಜನರನ್ನು ಸ್ಥಳಾಂತರಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಣಯ ಆಗಿಲ್ಲ’ ಎಂಬುದಾಗಿ ಬಂದರು ಜಲಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಸಾಗರಮಾಲಾ ಯೋಜನೆಯ ಅಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಿಸಲು ಸರ್ಕಾರ ಸಿದ್ಧವಾಗಿದೆ. ಬಂದರು ವಿಸ್ತರಣೆಯಾದರೆ ಬೈತಕೋಲ ಭಾಗದ ಜನರನ್ನು ಸ್ಥಳಾಂತರಿಸಲು ಈಗಿಂದಲೇ ಲೇಔಟ್ ನಿರ್ಮಿಸುತ್ತಿರುವ ಶಂಕೆ ಇದೆ’ ಎಂದು ಬೈತಕೋಲ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದರು.</p>.<p>ಕಾರವಾರ ವಾಣಿಜ್ಯ ಬಂದರು ಪ್ರದೇಶದ ಸುತ್ತಮುತ್ತಲಿರುವ ಬೈತಕೋಲ, ಅಲಿಗದ್ದಾದಲ್ಲಿ ಬಿಟುಮಿನ್, ಖಾದ್ಯತೈಲ ಸಂಗ್ರಹಿಸುವ ಟ್ಯಾಂಕರ್ಗಳನ್ನು ಸ್ಥಾಪಿಸಲಾಗಿದೆ. ಇದೇ ಪ್ರದೇಶದ ಸುತ್ತಮುತ್ತ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ತಲತಲಾಂತರದಿಂದಲೂ ಆಶ್ರಯ ಪಡೆದುಕೊಂಡಿವೆ. ಬಂದರು ಅಭಿವೃದ್ಧಿಗೆ ಬೈತಕೋಲ ಸುತ್ತಮುತ್ತಲಿನ ಪ್ರದೇಶವನ್ನು 1971ರ ಅವಧಿಯಲ್ಲೇ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು.</p>.<p>ಸ್ವಾಧೀನ ಪ್ರಕ್ರಿಯೆ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಪ್ರಕ್ರಿಯೆ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ಕಾರಣಕ್ಕೆ ಬೈತಕೋಲ ಪ್ರದೇಶದ ಮೂಲ ನಿವಾಸಿಗರು ಅದೇ ಪ್ರದೇಶದಲ್ಲಿ ವಾಸ ಮಾಡಿಕೊಂಡಿವೆ.</p>.<p>‘ಜನವಸತಿ ಪ್ರದೇಶದ ನಡುವೆ ಅಪಾಯಕಾರಿಯಾದ ಬಿಟುಮಿನ್, ತೈಲ ಮುಂತಾದ ಟ್ಯಾಂಕರ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಕುಟುಂಬಗಳಿಗೆ ಪುನರ್ವಸತಿ ಸಿದ್ಧತೆ ಮಾಡಿಕೊಂಡು ಭವಿಷ್ಯದಲ್ಲಿ ಸ್ಥಳಾಂತರಕ್ಕೆ ಯೋಜನೆ ಹಮ್ಮಿಕೊಳ್ಳಲೂ ಬಹುದು. ಆದರೆ, ಸದ್ಯಕ್ಕೆ ಅಂತಹ ನಿರ್ಧಾರವಂತೂ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-20-1580831343</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ತಾಲ್ಲೂಕಿನ ಚಿತ್ತಾಕುಲಾದ ಸೀಬರ್ಡ್ ಕಾಲೊನಿಯ ಸಮೀಪದ 18 ಎಕರೆ ಜಾಗದಲ್ಲಿ 245 ನಿವೇಶನಗಳನ್ನು ಬಂದರು ಜಲಸಾರಿಗೆ ಮಂಡಳಿ ಸಜ್ಜುಗೊಳಿಸುತ್ತಿದೆ. ಈ ಜಾಗಕ್ಕೆ ಇಲ್ಲಿನ ಬೈತಕೋಲದಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ.</p>.<p>ಬಂದರು ಜಲಸಾರಿಗೆ ಮಂಡಳಿಯು ತನಗೆ ಸೇರಿದ್ದ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ರಸ್ತೆ, ಚರಂಡಿ, ಇತರ ಮೂಲಸೌಕರ್ಯಗಳನ್ನು ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ.</p>.<p>‘ಚಿತ್ತಾಕುಲಾದಲ್ಲಿ ಲೇಔಟ್ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಅಲ್ಲಿ ಇಲಾಖೆಗೆ ಸೇರಿದ್ದ 20 ಎಕರೆಯಷ್ಟು ಭೂಮಿ ಇತ್ತು. ಅವುಗಳ ಪೈಕಿ 2 ಎಕರೆಯಷ್ಟು ಜಾಗ ಒತ್ತುವರಿಯಾಗಿದೆ. ಉಳಿದ 18 ಎಕರೆಯಲ್ಲಿ ನಿವೇಶನಗಳನ್ನು ರಚಿಸಿ, ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೆ, ಈ ಸ್ಥಳಕ್ಕೆ ಬೈತಕೋಲದಲ್ಲಿನ ಜನರನ್ನು ಸ್ಥಳಾಂತರಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಣಯ ಆಗಿಲ್ಲ’ ಎಂಬುದಾಗಿ ಬಂದರು ಜಲಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಸಾಗರಮಾಲಾ ಯೋಜನೆಯ ಅಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಿಸಲು ಸರ್ಕಾರ ಸಿದ್ಧವಾಗಿದೆ. ಬಂದರು ವಿಸ್ತರಣೆಯಾದರೆ ಬೈತಕೋಲ ಭಾಗದ ಜನರನ್ನು ಸ್ಥಳಾಂತರಿಸಲು ಈಗಿಂದಲೇ ಲೇಔಟ್ ನಿರ್ಮಿಸುತ್ತಿರುವ ಶಂಕೆ ಇದೆ’ ಎಂದು ಬೈತಕೋಲ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದರು.</p>.<p>ಕಾರವಾರ ವಾಣಿಜ್ಯ ಬಂದರು ಪ್ರದೇಶದ ಸುತ್ತಮುತ್ತಲಿರುವ ಬೈತಕೋಲ, ಅಲಿಗದ್ದಾದಲ್ಲಿ ಬಿಟುಮಿನ್, ಖಾದ್ಯತೈಲ ಸಂಗ್ರಹಿಸುವ ಟ್ಯಾಂಕರ್ಗಳನ್ನು ಸ್ಥಾಪಿಸಲಾಗಿದೆ. ಇದೇ ಪ್ರದೇಶದ ಸುತ್ತಮುತ್ತ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ತಲತಲಾಂತರದಿಂದಲೂ ಆಶ್ರಯ ಪಡೆದುಕೊಂಡಿವೆ. ಬಂದರು ಅಭಿವೃದ್ಧಿಗೆ ಬೈತಕೋಲ ಸುತ್ತಮುತ್ತಲಿನ ಪ್ರದೇಶವನ್ನು 1971ರ ಅವಧಿಯಲ್ಲೇ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು.</p>.<p>ಸ್ವಾಧೀನ ಪ್ರಕ್ರಿಯೆ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಪ್ರಕ್ರಿಯೆ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ಕಾರಣಕ್ಕೆ ಬೈತಕೋಲ ಪ್ರದೇಶದ ಮೂಲ ನಿವಾಸಿಗರು ಅದೇ ಪ್ರದೇಶದಲ್ಲಿ ವಾಸ ಮಾಡಿಕೊಂಡಿವೆ.</p>.<p>‘ಜನವಸತಿ ಪ್ರದೇಶದ ನಡುವೆ ಅಪಾಯಕಾರಿಯಾದ ಬಿಟುಮಿನ್, ತೈಲ ಮುಂತಾದ ಟ್ಯಾಂಕರ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಕುಟುಂಬಗಳಿಗೆ ಪುನರ್ವಸತಿ ಸಿದ್ಧತೆ ಮಾಡಿಕೊಂಡು ಭವಿಷ್ಯದಲ್ಲಿ ಸ್ಥಳಾಂತರಕ್ಕೆ ಯೋಜನೆ ಹಮ್ಮಿಕೊಳ್ಳಲೂ ಬಹುದು. ಆದರೆ, ಸದ್ಯಕ್ಕೆ ಅಂತಹ ನಿರ್ಧಾರವಂತೂ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-20-1580831343</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>