<p><strong>ಕಾರವಾರ:</strong> ವಂದೇ ಮಾತರಂ ಗೀತೆಯು 150 ವರ್ಷ ಪೂರೈಸಿರುವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್’ ರ್ಯಾಲಿಯ ಪಶ್ಚಿಮ ಕರಾವಳಿ ಸೈಕ್ಲೋಥಾನ್ ತಂಡವು ಸೋಮವಾರ ತಾಲ್ಲೂಕಿನ ಮಾಜಾಳಿಯಲ್ಲಿ ರಾಜ್ಯದ ಗಡಿ ಪ್ರವೇಶಿಸಿತು.</p>.<p>ಸುಮಾರು 50 ಮಹಿಳಾ ಸಿಬ್ಬಂದಿ ಸೇರಿದಂತೆ 120 ಸಿಐಎಸ್ಎಫ್ ಸಿಬ್ಬಂದಿ ಪಾಲ್ಗೊಂಡಿರುವ ಸೈಕ್ಲಿಸ್ಟ್ ತಂಡಕ್ಕೆ ಮಾಜಾಳಿ ಚೆಕ್ಪೋಸ್ಟ್ ಬಳಿ ಪುಷ್ಪವೃಷ್ಟಿ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.</p>.<p>ಜ.28ರಂದು ಗುಜರಾತ್ನ ಲಖ್ಪತ್ ಕೋಟೆಯಿಂದ ರ್ಯಾಲಿ ಆರಂಭಿಸಿರುವ ತಂಡವು ಸೋಮವಾರ ಗೋವಾದ ಮಡಗಾಂವ್ನಿಂದ ಮಾಜಾಳಿ ಮೂಲಕ ರಾಜ್ಯದ ಗಡಿ ಪ್ರವೇಶಿಸಿದೆ. ಸೈಕ್ಲಿಸ್ಟ್ಗಳನ್ನು ಸಿಐಎಸ್ಎಫ್ ಕೈಗಾ ಘಟಕದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎನ್ಸಿಸಿ ವಿದ್ಯಾರ್ಥಿಗಳು ಬರಮಾಡಿಕೊಂಡವು. ಪೊಲೀಸ್ ಬ್ಯಾಂಡ್ ಮತ್ತು ಸ್ಥಳೀಯ ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ಮೆರಗು ನೀಡಲಾಯಿತು.</p>.<p>ಸೈಕ್ಲೋಥಾನ್ ತಂಡದಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿಯನ್ನು ಗೋಟ್ನೆಭಾಗ ಕ್ರಾಸ್ನಲ್ಲಿ ಮೀನುಗಾರ ಮಹಿಳೆಯರು ತಿಲಕವಿಟ್ಟು, ಪುಷ್ಪವೃಷ್ಟಿಗೈದು ಸ್ವಾಗತಿಸಿದರು.</p>.<p>ಸಿಐಎಸ್ಎಫ್ ಕೈಗಾ ಘಟಕದ ಹಿರಿಯ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಬೆಂಗಳೂರಿನ ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆಂಟ್ ಆರ್.ಪಿ.ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯ್ಕ, ಡಿಎಸ್ಪಿ ಎಸ್.ವಿ.ಗಿರೀಶ್, ಇತರರು ಪಾಲ್ಗೊಂಡಿದ್ದರು.</p>.<p>ಮಂಗಳವಾರ ಸೈಕ್ಲೋಥಾನ್ ತಂಡವು ಮುರುಡೇಶ್ವರದ ಕಡೆಗೆ ತೆರಳಲಿದೆ. ಬಳಿಕ ಉಡುಪಿ ಜಿಲ್ಲೆ ಪ್ರವೇಶಿಸಲಿದೆ.</p>.<p><strong>ಕಡಲತೀರ ಗುಂಟ ಸೈಕ್ಲಿಂಗ್ ಸೈಕ್ಲೋಥಾನ್ ತಂಡವು ಮಾಜಾಳಿ ಚೆಕ್ಫೋಸ್ಟ್ ದಾಟಿದ ಬಳಿಕ ನೆಚಕಿನಬಾಗ ಮಾರ್ಗವಾಗಿ ಕಡಲತೀರದ ಗುಂಟ ಇರುವ ರಸ್ತೆಯಲ್ಲಿ ಸಾಗಿತು. ಹಿಪ್ಪಲಿ ದಾಂಡೇಬಾಗ ಬಾವಳ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಿ ಬಳಿಕ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ತಲುಪಿತು. ‘ಗುಜರಾತ್ನಿಂದ ಕೊಚ್ಚಿನ್ವರೆಗೆ ಸೈಕ್ಲಿಂಗ್ ರ್ಯಾಲಿ ನಡೆಸಲಾಗುತ್ತಿದೆ. ಕರಾವಳಿ ತೀರ ಪ್ರದೇಶದ ಸುರಕ್ಷತೆಗೆ ಮೀನುಗಾರರ ಸಹಕಾರ ಅಗತ್ಯವಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಅದರಲ್ಲಿಯೂ ಮೀನುಗಾರರು ಹೆಚ್ಚಿರುವ ಕಡೆಗಳಲ್ಲಿ ಸೈಕ್ಲಿಂಗ್ ಮಲಕ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಸೈಕ್ಲೋಥಾನ್ ತಂಡದಲ್ಲಿರುವ ಸಿಐಎಸ್ಎಫ್ ಕಾನ್ಸ್ಟೆಬಲ್ ರಾಹುಲ್ ತಿಳಿಸಿದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ವಂದೇ ಮಾತರಂ ಗೀತೆಯು 150 ವರ್ಷ ಪೂರೈಸಿರುವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಆಯೋಜಿಸಿರುವ ‘ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್’ ರ್ಯಾಲಿಯ ಪಶ್ಚಿಮ ಕರಾವಳಿ ಸೈಕ್ಲೋಥಾನ್ ತಂಡವು ಸೋಮವಾರ ತಾಲ್ಲೂಕಿನ ಮಾಜಾಳಿಯಲ್ಲಿ ರಾಜ್ಯದ ಗಡಿ ಪ್ರವೇಶಿಸಿತು.</p>.<p>ಸುಮಾರು 50 ಮಹಿಳಾ ಸಿಬ್ಬಂದಿ ಸೇರಿದಂತೆ 120 ಸಿಐಎಸ್ಎಫ್ ಸಿಬ್ಬಂದಿ ಪಾಲ್ಗೊಂಡಿರುವ ಸೈಕ್ಲಿಸ್ಟ್ ತಂಡಕ್ಕೆ ಮಾಜಾಳಿ ಚೆಕ್ಪೋಸ್ಟ್ ಬಳಿ ಪುಷ್ಪವೃಷ್ಟಿ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.</p>.<p>ಜ.28ರಂದು ಗುಜರಾತ್ನ ಲಖ್ಪತ್ ಕೋಟೆಯಿಂದ ರ್ಯಾಲಿ ಆರಂಭಿಸಿರುವ ತಂಡವು ಸೋಮವಾರ ಗೋವಾದ ಮಡಗಾಂವ್ನಿಂದ ಮಾಜಾಳಿ ಮೂಲಕ ರಾಜ್ಯದ ಗಡಿ ಪ್ರವೇಶಿಸಿದೆ. ಸೈಕ್ಲಿಸ್ಟ್ಗಳನ್ನು ಸಿಐಎಸ್ಎಫ್ ಕೈಗಾ ಘಟಕದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎನ್ಸಿಸಿ ವಿದ್ಯಾರ್ಥಿಗಳು ಬರಮಾಡಿಕೊಂಡವು. ಪೊಲೀಸ್ ಬ್ಯಾಂಡ್ ಮತ್ತು ಸ್ಥಳೀಯ ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ಮೆರಗು ನೀಡಲಾಯಿತು.</p>.<p>ಸೈಕ್ಲೋಥಾನ್ ತಂಡದಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿಯನ್ನು ಗೋಟ್ನೆಭಾಗ ಕ್ರಾಸ್ನಲ್ಲಿ ಮೀನುಗಾರ ಮಹಿಳೆಯರು ತಿಲಕವಿಟ್ಟು, ಪುಷ್ಪವೃಷ್ಟಿಗೈದು ಸ್ವಾಗತಿಸಿದರು.</p>.<p>ಸಿಐಎಸ್ಎಫ್ ಕೈಗಾ ಘಟಕದ ಹಿರಿಯ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಬೆಂಗಳೂರಿನ ಸ್ಯಾಟಲೈಟ್ ಕೇಂದ್ರದ ಸೀನಿಯರ್ ಕಮಾಂಡೆಂಟ್ ಆರ್.ಪಿ.ಸಿಂಗ್, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯ್ಕ, ಡಿಎಸ್ಪಿ ಎಸ್.ವಿ.ಗಿರೀಶ್, ಇತರರು ಪಾಲ್ಗೊಂಡಿದ್ದರು.</p>.<p>ಮಂಗಳವಾರ ಸೈಕ್ಲೋಥಾನ್ ತಂಡವು ಮುರುಡೇಶ್ವರದ ಕಡೆಗೆ ತೆರಳಲಿದೆ. ಬಳಿಕ ಉಡುಪಿ ಜಿಲ್ಲೆ ಪ್ರವೇಶಿಸಲಿದೆ.</p>.<p><strong>ಕಡಲತೀರ ಗುಂಟ ಸೈಕ್ಲಿಂಗ್ ಸೈಕ್ಲೋಥಾನ್ ತಂಡವು ಮಾಜಾಳಿ ಚೆಕ್ಫೋಸ್ಟ್ ದಾಟಿದ ಬಳಿಕ ನೆಚಕಿನಬಾಗ ಮಾರ್ಗವಾಗಿ ಕಡಲತೀರದ ಗುಂಟ ಇರುವ ರಸ್ತೆಯಲ್ಲಿ ಸಾಗಿತು. ಹಿಪ್ಪಲಿ ದಾಂಡೇಬಾಗ ಬಾವಳ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಿ ಬಳಿಕ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ತಲುಪಿತು. ‘ಗುಜರಾತ್ನಿಂದ ಕೊಚ್ಚಿನ್ವರೆಗೆ ಸೈಕ್ಲಿಂಗ್ ರ್ಯಾಲಿ ನಡೆಸಲಾಗುತ್ತಿದೆ. ಕರಾವಳಿ ತೀರ ಪ್ರದೇಶದ ಸುರಕ್ಷತೆಗೆ ಮೀನುಗಾರರ ಸಹಕಾರ ಅಗತ್ಯವಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಅದರಲ್ಲಿಯೂ ಮೀನುಗಾರರು ಹೆಚ್ಚಿರುವ ಕಡೆಗಳಲ್ಲಿ ಸೈಕ್ಲಿಂಗ್ ಮಲಕ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಸೈಕ್ಲೋಥಾನ್ ತಂಡದಲ್ಲಿರುವ ಸಿಐಎಸ್ಎಫ್ ಕಾನ್ಸ್ಟೆಬಲ್ ರಾಹುಲ್ ತಿಳಿಸಿದರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>