<p>ಕಾರವಾರ: ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ನಗರದ ಹಬ್ಬುವಾಡ ಬಳಿ ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರೀಕರಣ ಮಾಡಿ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣೆ ವಿಭಾಗ (ಕೆಶಿಪ್) ಬುಧವಾರ ಡಾಂಬರು ಕೀಳುವ ಕೆಲಸ ಮಾಡಿದೆ.</p>.<p>ಜನರಿಂದ ವ್ಯಾಪಕ ಟೀಕೆ ಎದುರಾದ ಬಳಿಕ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆ ಕಂಪನಿಗೆ ಎಚ್ಚರಿಕೆ ನೀಡಿ ಡಾಂಬರು ತೆರವುಗೊಳಿಸಲು ಸೂಚಿಸಿದ್ದರು. ಇದ ರಿಂದ ಒಂದು ದಿನ ಮುಂಚೆಯಷ್ಟೆ ರಸ್ತೆಯ ಕೆಲವೆಡೆ ಮಾಡಿದ್ದ ಡಾಂಬರೀಕರಣ ಹಾಸನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.</p>.<p>ಗೀತಾಂಜಲಿ ವೃತ್ತದ ಸಮೀಪ ಸುಮಾರು 80 ಮೀಟರ್, ಇಸ್ಕಾನ್ ಕ್ರಾಸ್ ಸಮೀಪ ಸುಮಾರು 100 ಮೀಟರ್ ದೂರದವರೆಗೆ ಕಾಂಕ್ರೀಟ್ ರಸ್ತೆಯ ಮೇಲೆಯೇ ಮಂಗಳವಾರ ಡಾಂಬರೀಕರಣ ಮಾಡಲಾಗಿತ್ತು. ಈ ಕೆಲಸಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜನವಿರೋಧದಿಂದ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಕಾರ್ಮಿಕರು ತೆರಳಿದ್ದರು.</p>.<p>ಜೆಸಿಬಿ ಬಳಸಿ ಡಾಂಬರು ತೆಗೆಯುತ್ತಿರುವುದರಿಂದ ಈ ಮುಂಚೆ ಇದ್ದ ಸುಸಜ್ಜಿತ ರಸ್ತೆ ಹಾಳಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ರಾಜ್ಯ ಹೆದ್ದಾರಿಯಲ್ಲಿನ ಬ್ಲ್ಯಾಕ್ ಸ್ಪಾಟ್ಗಳಲ್ಲಿ ರಸ್ತೆ ಸುಧಾರಣೆ ಯೋಜನೆ ಭಾಗವಾಗಿ ಈ ಕಾಮಗಾರಿ ನಡೆಸಲು ಮುಂದಾಗಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಡಾಂಬರೀಕರಣ ಕೆಲಸ ಕೈಬಿಟ್ಟು, ರಸ್ತೆಗೆ ಹಾಕಿದ್ದ ಡಾಂಬರು ಹಾಸು ತೆರವು ಮಾಡುತ್ತಿದ್ದೇವೆ’ ಎಂದು ಗುತ್ತಿಗೆ ಕಂಪನಿಯ ಮೇಲ್ವಿಚಾರಕ ರೋಹಿತ್ ಪ್ರತಿಕ್ರಿಯಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-20-152726588</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರವಾರ: ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ನಗರದ ಹಬ್ಬುವಾಡ ಬಳಿ ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರೀಕರಣ ಮಾಡಿ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣೆ ವಿಭಾಗ (ಕೆಶಿಪ್) ಬುಧವಾರ ಡಾಂಬರು ಕೀಳುವ ಕೆಲಸ ಮಾಡಿದೆ.</p>.<p>ಜನರಿಂದ ವ್ಯಾಪಕ ಟೀಕೆ ಎದುರಾದ ಬಳಿಕ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆ ಕಂಪನಿಗೆ ಎಚ್ಚರಿಕೆ ನೀಡಿ ಡಾಂಬರು ತೆರವುಗೊಳಿಸಲು ಸೂಚಿಸಿದ್ದರು. ಇದ ರಿಂದ ಒಂದು ದಿನ ಮುಂಚೆಯಷ್ಟೆ ರಸ್ತೆಯ ಕೆಲವೆಡೆ ಮಾಡಿದ್ದ ಡಾಂಬರೀಕರಣ ಹಾಸನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.</p>.<p>ಗೀತಾಂಜಲಿ ವೃತ್ತದ ಸಮೀಪ ಸುಮಾರು 80 ಮೀಟರ್, ಇಸ್ಕಾನ್ ಕ್ರಾಸ್ ಸಮೀಪ ಸುಮಾರು 100 ಮೀಟರ್ ದೂರದವರೆಗೆ ಕಾಂಕ್ರೀಟ್ ರಸ್ತೆಯ ಮೇಲೆಯೇ ಮಂಗಳವಾರ ಡಾಂಬರೀಕರಣ ಮಾಡಲಾಗಿತ್ತು. ಈ ಕೆಲಸಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜನವಿರೋಧದಿಂದ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಕಾರ್ಮಿಕರು ತೆರಳಿದ್ದರು.</p>.<p>ಜೆಸಿಬಿ ಬಳಸಿ ಡಾಂಬರು ತೆಗೆಯುತ್ತಿರುವುದರಿಂದ ಈ ಮುಂಚೆ ಇದ್ದ ಸುಸಜ್ಜಿತ ರಸ್ತೆ ಹಾಳಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ರಾಜ್ಯ ಹೆದ್ದಾರಿಯಲ್ಲಿನ ಬ್ಲ್ಯಾಕ್ ಸ್ಪಾಟ್ಗಳಲ್ಲಿ ರಸ್ತೆ ಸುಧಾರಣೆ ಯೋಜನೆ ಭಾಗವಾಗಿ ಈ ಕಾಮಗಾರಿ ನಡೆಸಲು ಮುಂದಾಗಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಡಾಂಬರೀಕರಣ ಕೆಲಸ ಕೈಬಿಟ್ಟು, ರಸ್ತೆಗೆ ಹಾಕಿದ್ದ ಡಾಂಬರು ಹಾಸು ತೆರವು ಮಾಡುತ್ತಿದ್ದೇವೆ’ ಎಂದು ಗುತ್ತಿಗೆ ಕಂಪನಿಯ ಮೇಲ್ವಿಚಾರಕ ರೋಹಿತ್ ಪ್ರತಿಕ್ರಿಯಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-20-152726588</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>