<p><strong>ಕಾರವಾರ</strong>: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಸೆಕೆಯಿಂದ ಬಸವಳಿದಿದ್ದ ಜನರಿಗೆ ತುಸು ತಂಪೆನಿಸಿದರೂ, ಜನಜೀವನ ಅಸ್ತವ್ಯಸ್ತಗೊಂಡಿತು.</p>.<p>ಸಂಜೆಯ ವೇಳೆಗೆ ಗುಡುಗು ಮಿಂಚು ಸಹಿತ ದಿಢೀರಾಗಿ ರಭಸದಿಂದ ಗಾಳಿ ಬೀಸತೊಡಗಿತು. ಗಾಳಿಯೊಂದಿಗೆ ಹಾರಿದ ದೂಳಿನಿಂದ ಜನರು ಕಂಗೆಟ್ಟರು. ಅದರ ಬೆನ್ನಿಗೆ ಮಳೆ ಸುರಿಯತೊಡಗಿದ್ದರಿಂದ ಜನ ನಿರಾಳರಾದರು. ಕಳೆದ ಕೆಲ ದಿನಗಳಿಂದ ವಿಪರೀತ ಸೆಕೆಗೆ ಜಿಲ್ಲೆಯ ಕರಾವಳಿ ಸೇರಿದಂತೆ ಘಟ್ಟದ ಮೇಲಿನ ಭಾಗದ ಜನರು ಕಂಗೆಟ್ಟಿದ್ದರು.</p>.<p>ವೇಗದ ಗಾಳಿಯ ಪರಿಣಾಮ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮರಗಳು ಧರಾಶಾಹಿಯಾದವು. ಇಲ್ಲಿನ ದೈವಜ್ಞ ಭವನ, ಸೋನಾರವಾಡಾ, ಕೋಡಿಬಾಗ, ಬೈತಕೋಲ ಸೇರಿದಂತೆ ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿ ಬಿದ್ದವು. ಇದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಬಿದ್ದ ಮರ, ಮರದ ಟೊಂಗೆಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.</p>.<p>ಕೋಡಿಬಾಗದಲ್ಲಿ ಮನೆಯ ಪಕ್ಕದಲ್ಲಿ ಮರದ ಟೊಂಗೆ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು. ರಭಸದ ಗಾಳಿಯಿಂದಾಗಿ ಹಲವೆಡೆ ಮನೆ, ಇತರ ಕಟ್ಟಡಗಳ ಚಾವಣಿಗಳ ಶೀಟುಗಳು ಹಾರಿಹೋದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-20-1638429777</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಸೆಕೆಯಿಂದ ಬಸವಳಿದಿದ್ದ ಜನರಿಗೆ ತುಸು ತಂಪೆನಿಸಿದರೂ, ಜನಜೀವನ ಅಸ್ತವ್ಯಸ್ತಗೊಂಡಿತು.</p>.<p>ಸಂಜೆಯ ವೇಳೆಗೆ ಗುಡುಗು ಮಿಂಚು ಸಹಿತ ದಿಢೀರಾಗಿ ರಭಸದಿಂದ ಗಾಳಿ ಬೀಸತೊಡಗಿತು. ಗಾಳಿಯೊಂದಿಗೆ ಹಾರಿದ ದೂಳಿನಿಂದ ಜನರು ಕಂಗೆಟ್ಟರು. ಅದರ ಬೆನ್ನಿಗೆ ಮಳೆ ಸುರಿಯತೊಡಗಿದ್ದರಿಂದ ಜನ ನಿರಾಳರಾದರು. ಕಳೆದ ಕೆಲ ದಿನಗಳಿಂದ ವಿಪರೀತ ಸೆಕೆಗೆ ಜಿಲ್ಲೆಯ ಕರಾವಳಿ ಸೇರಿದಂತೆ ಘಟ್ಟದ ಮೇಲಿನ ಭಾಗದ ಜನರು ಕಂಗೆಟ್ಟಿದ್ದರು.</p>.<p>ವೇಗದ ಗಾಳಿಯ ಪರಿಣಾಮ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮರಗಳು ಧರಾಶಾಹಿಯಾದವು. ಇಲ್ಲಿನ ದೈವಜ್ಞ ಭವನ, ಸೋನಾರವಾಡಾ, ಕೋಡಿಬಾಗ, ಬೈತಕೋಲ ಸೇರಿದಂತೆ ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿ ಬಿದ್ದವು. ಇದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಬಿದ್ದ ಮರ, ಮರದ ಟೊಂಗೆಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.</p>.<p>ಕೋಡಿಬಾಗದಲ್ಲಿ ಮನೆಯ ಪಕ್ಕದಲ್ಲಿ ಮರದ ಟೊಂಗೆ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು. ರಭಸದ ಗಾಳಿಯಿಂದಾಗಿ ಹಲವೆಡೆ ಮನೆ, ಇತರ ಕಟ್ಟಡಗಳ ಚಾವಣಿಗಳ ಶೀಟುಗಳು ಹಾರಿಹೋದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-20-1638429777</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>