<p><strong>ಕಾರವಾರ</strong>: ಕಾಳಿ ನದಿಗೆ ಹೊಸದಾಗಿ ಸೇತುವೆ ನಿರ್ಮಿಸಲು ಕೈಗೊಂಡಿರುವ ಪೈಲಿಂಗ್ ಪರೀಕ್ಷೆ ಪ್ರಕ್ರಿಯೆಗೆ ಹಲವು ಸವಾಲುಗಳು ಎದುರಾಗಿವೆ. ಇದರಿಂದ ಸೇತುವೆ ನಿರ್ಮಾಣ ತಡವಾಗಬಹುದು ಎಂಬ ಶಂಕೆ ಉಂಟಾಗಿದೆ.</p>.<p>ಉಕ್ಕಿನ ಕಮಾನು ಮಾದರಿಯ ಸೇತುವೆ ನಿರ್ಮಿಸಲು ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ 7 ತಿಂಗಳ ಹಿಂದೆಯೇ ಸೇತುವೆ ನಿರ್ಮಾಣಕ್ಕೆ ಪೈಲಿಂಗ್ ಪರೀಕ್ಷೆ ಕೈಗೊಳ್ಳುವ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ, ಈವರೆಗೂ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.</p>.<p>‘ಸೇತುವೆ ನಿರ್ಮಾಣಕ್ಕೆ ಮುನ್ನ ಕಾಮಗಾರಿ ನಡೆಸುವ ಜಾಗದ ಆಳದಲ್ಲಿನ ಮಣ್ಣು, ಕಲ್ಲುಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಲು ಪೈಲಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಕಾಳಿ ನದಿಯಲ್ಲಿ 40 ಮೀಟರ್ ಆಳದವರೆಗೆ ಈ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮೊದಲ ಪೈಲಿಂಗ್ ನಡೆಸುವ ವೇಳೆ 27 ಮೀಟರ್ ಆಳದಲ್ಲಿಯೇ ಕಲ್ಲಿನ ಪದರ ಸಿಕ್ಕಿದ್ದರಿಂದ ಸ್ಥಳ ಬದಲಿಸಲಾಯಿತು. ಎರಡನೇ ಜಾಗದಲ್ಲಿ 30 ಮೀ. ಆಳದವರೆಗೆ ಪೈಲಿಂಗ್ ಪರೀಕ್ಷೆ ಮುಗಿದಿದೆ. ಇನ್ನೂ 10 ಮೀ. ಬಾಕಿ ಉಳಿದುಕೊಂಡಿದೆ’ ಎಂದು ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಪೊದ್ದಾರ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘30 ಮೀ. ಆಳದ ಬಳಿಕ ಕಲ್ಲಿನ ಪದರುಗಳು ಸಿಗುತ್ತಿವೆ. ಅವುಗಳನ್ನು ತೆರವುಗೊಳಿಸಿಕೊಂಡು ಇನ್ನಷ್ಟು ಆಳದವರೆಗೆ ಪೈಲಿಂಗ್ ಪರೀಕ್ಷೆ ನಡೆಸಲು ಸಮಯಾವಕಾಶ ತಗುಲಲಿದೆ. ನೆಲ ಕೊರೆಯುವ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದಲೂ ಸ್ವಲ್ಪ ಸಮಯ ಹಿಡಿಯಿತು’ ಎಂದರು.</p>.<p>‘ಸೇತುವೆ ನಿರ್ಮಾಣಕ್ಕೆ ಪೈಲಿಂಗ್ ಪರೀಕ್ಷೆಯೇ ಮುಖ್ಯ ಆಧಾರ. ಇದು ಸೇತುವೆಯ ಭಾರ ಹೊರುವ ಸಾಮರ್ಥ್ಯವನ್ನೂ ನಿರ್ಧರಿಸುತ್ತದೆ. ಪೈಲಿಂಗ್ ಪರೀಕ್ಷೆಯಿಂದ ಸೇತುವೆಗೆ ಎಷ್ಟು ಆಳದವರೆಗೆ ಕಂಬಗಳನ್ನು ನಿರ್ಮಿಸಬೇಕು, ಎಷ್ಟು ಪ್ರಮಾಣದ ಕಾಂಕ್ರೀಟ್ ಬಳಕೆ ಮಾಡಬಹುದು ಎಂಬುದನ್ನು ಅರಿಯಲು ಸಹಾಯವಾಗುತ್ತದೆ. ಪರೀಕ್ಷಾರ್ಥ ಪೈಲಿಂಗ್ ಮುಗಿದ ಬಳಿಕ ಪ್ರತಿ ಕಂಬಗಳ ಅಡಿಪಾಯಕ್ಕೆ ಕನಿಷ್ಠ ನಾಲ್ಕೈದು ಪೈಲಿಂಗ್ ನಡೆಸಬೇಕಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದರು.</p><p><strong>ಎರಡು ವರ್ಷದ ಗಡುವು</strong></p><p>‘ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣ ಪೂರ್ಣಗೊಳಿಸಲು ಗುತ್ತಿಗೆ ಕಂಪನಿ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ಗೆ ಎರಡು ವರ್ಷದ ಗಡುವು ನೀಡಲಾಗಿದೆ. ಅಷ್ಟರೊಳಗೆ ಉಕ್ಕಿನ ಕಮಾನಿನ ಸೇತುವೆ ನಿರ್ಮಾಣ ಕೆಲಸ ಪೂರ್ಣಗೊಳಿಸಬೇಕಿದೆ. ಸದ್ಯ ಒಂದೇ ಸೇತುವೆಯ ಮೇಲೆ ವಾಹನ ಸಂಚಾರ ಹೆಚ್ಚಿರುವುದರಿಂದ ಸಹಜವಾಗಿ ಅದರ ಮೇಲೆ ಒತ್ತಡ ಹೆಚ್ಚಬಹುದು. 2042ರವರೆಗೂ ಹೆದ್ದಾರಿ ನಿರ್ವಹಣೆ ಹೊಣೆ ಕಂಪನಿಗೆ ಇರುವುದರಿಂದ ಅವರು ನಿರ್ದಿಷ್ಟ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ಎನ್ಎಚ್ಎಐ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.</p>.<div><blockquote>ಸೇತುವೆ ನಿರ್ಮಾಣದಲ್ಲಿ ಪೈಲಿಂಗ್ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆ ಬಳಿಕದ ಕಾಮಗಾರಿಗಳು ವೇಗವಾಗಿ ನಡೆಯಬಹುದು </blockquote><span class="attribution">ಕೆ.ಶಿವಕುಮಾರ್ ಎನ್ಎಚ್ಎಐ ಯೋಜನಾ ನಿರ್ದೇಶಕ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-20-1340943003</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಕಾಳಿ ನದಿಗೆ ಹೊಸದಾಗಿ ಸೇತುವೆ ನಿರ್ಮಿಸಲು ಕೈಗೊಂಡಿರುವ ಪೈಲಿಂಗ್ ಪರೀಕ್ಷೆ ಪ್ರಕ್ರಿಯೆಗೆ ಹಲವು ಸವಾಲುಗಳು ಎದುರಾಗಿವೆ. ಇದರಿಂದ ಸೇತುವೆ ನಿರ್ಮಾಣ ತಡವಾಗಬಹುದು ಎಂಬ ಶಂಕೆ ಉಂಟಾಗಿದೆ.</p>.<p>ಉಕ್ಕಿನ ಕಮಾನು ಮಾದರಿಯ ಸೇತುವೆ ನಿರ್ಮಿಸಲು ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ 7 ತಿಂಗಳ ಹಿಂದೆಯೇ ಸೇತುವೆ ನಿರ್ಮಾಣಕ್ಕೆ ಪೈಲಿಂಗ್ ಪರೀಕ್ಷೆ ಕೈಗೊಳ್ಳುವ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ, ಈವರೆಗೂ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.</p>.<p>‘ಸೇತುವೆ ನಿರ್ಮಾಣಕ್ಕೆ ಮುನ್ನ ಕಾಮಗಾರಿ ನಡೆಸುವ ಜಾಗದ ಆಳದಲ್ಲಿನ ಮಣ್ಣು, ಕಲ್ಲುಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಲು ಪೈಲಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಕಾಳಿ ನದಿಯಲ್ಲಿ 40 ಮೀಟರ್ ಆಳದವರೆಗೆ ಈ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮೊದಲ ಪೈಲಿಂಗ್ ನಡೆಸುವ ವೇಳೆ 27 ಮೀಟರ್ ಆಳದಲ್ಲಿಯೇ ಕಲ್ಲಿನ ಪದರ ಸಿಕ್ಕಿದ್ದರಿಂದ ಸ್ಥಳ ಬದಲಿಸಲಾಯಿತು. ಎರಡನೇ ಜಾಗದಲ್ಲಿ 30 ಮೀ. ಆಳದವರೆಗೆ ಪೈಲಿಂಗ್ ಪರೀಕ್ಷೆ ಮುಗಿದಿದೆ. ಇನ್ನೂ 10 ಮೀ. ಬಾಕಿ ಉಳಿದುಕೊಂಡಿದೆ’ ಎಂದು ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಪೊದ್ದಾರ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘30 ಮೀ. ಆಳದ ಬಳಿಕ ಕಲ್ಲಿನ ಪದರುಗಳು ಸಿಗುತ್ತಿವೆ. ಅವುಗಳನ್ನು ತೆರವುಗೊಳಿಸಿಕೊಂಡು ಇನ್ನಷ್ಟು ಆಳದವರೆಗೆ ಪೈಲಿಂಗ್ ಪರೀಕ್ಷೆ ನಡೆಸಲು ಸಮಯಾವಕಾಶ ತಗುಲಲಿದೆ. ನೆಲ ಕೊರೆಯುವ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದಲೂ ಸ್ವಲ್ಪ ಸಮಯ ಹಿಡಿಯಿತು’ ಎಂದರು.</p>.<p>‘ಸೇತುವೆ ನಿರ್ಮಾಣಕ್ಕೆ ಪೈಲಿಂಗ್ ಪರೀಕ್ಷೆಯೇ ಮುಖ್ಯ ಆಧಾರ. ಇದು ಸೇತುವೆಯ ಭಾರ ಹೊರುವ ಸಾಮರ್ಥ್ಯವನ್ನೂ ನಿರ್ಧರಿಸುತ್ತದೆ. ಪೈಲಿಂಗ್ ಪರೀಕ್ಷೆಯಿಂದ ಸೇತುವೆಗೆ ಎಷ್ಟು ಆಳದವರೆಗೆ ಕಂಬಗಳನ್ನು ನಿರ್ಮಿಸಬೇಕು, ಎಷ್ಟು ಪ್ರಮಾಣದ ಕಾಂಕ್ರೀಟ್ ಬಳಕೆ ಮಾಡಬಹುದು ಎಂಬುದನ್ನು ಅರಿಯಲು ಸಹಾಯವಾಗುತ್ತದೆ. ಪರೀಕ್ಷಾರ್ಥ ಪೈಲಿಂಗ್ ಮುಗಿದ ಬಳಿಕ ಪ್ರತಿ ಕಂಬಗಳ ಅಡಿಪಾಯಕ್ಕೆ ಕನಿಷ್ಠ ನಾಲ್ಕೈದು ಪೈಲಿಂಗ್ ನಡೆಸಬೇಕಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದರು.</p><p><strong>ಎರಡು ವರ್ಷದ ಗಡುವು</strong></p><p>‘ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣ ಪೂರ್ಣಗೊಳಿಸಲು ಗುತ್ತಿಗೆ ಕಂಪನಿ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ಗೆ ಎರಡು ವರ್ಷದ ಗಡುವು ನೀಡಲಾಗಿದೆ. ಅಷ್ಟರೊಳಗೆ ಉಕ್ಕಿನ ಕಮಾನಿನ ಸೇತುವೆ ನಿರ್ಮಾಣ ಕೆಲಸ ಪೂರ್ಣಗೊಳಿಸಬೇಕಿದೆ. ಸದ್ಯ ಒಂದೇ ಸೇತುವೆಯ ಮೇಲೆ ವಾಹನ ಸಂಚಾರ ಹೆಚ್ಚಿರುವುದರಿಂದ ಸಹಜವಾಗಿ ಅದರ ಮೇಲೆ ಒತ್ತಡ ಹೆಚ್ಚಬಹುದು. 2042ರವರೆಗೂ ಹೆದ್ದಾರಿ ನಿರ್ವಹಣೆ ಹೊಣೆ ಕಂಪನಿಗೆ ಇರುವುದರಿಂದ ಅವರು ನಿರ್ದಿಷ್ಟ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ಎನ್ಎಚ್ಎಐ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.</p>.<div><blockquote>ಸೇತುವೆ ನಿರ್ಮಾಣದಲ್ಲಿ ಪೈಲಿಂಗ್ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆ ಬಳಿಕದ ಕಾಮಗಾರಿಗಳು ವೇಗವಾಗಿ ನಡೆಯಬಹುದು </blockquote><span class="attribution">ಕೆ.ಶಿವಕುಮಾರ್ ಎನ್ಎಚ್ಎಐ ಯೋಜನಾ ನಿರ್ದೇಶಕ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-20-1340943003</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>