ಸಾಗರ ಮತ್ಸ್ಯಾಲಯಕ್ಕೆ ಕ್ರಿಯಾಯೋಜನೆ ಸಿದ್ಧ
‘ಟ್ಯಾಗೋರ್ ಕಡಲತೀರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾಗರ ಮತ್ಸ್ಯಾಲಯ ಕಟ್ಟಡ ನವೀಕರಣಗೊಳಿಸಿ ಎರಡು ಮಹಡಿಯ ಹೊಸ ಮತ್ಸ್ಯಾಲಯ ರೂಪಿಸಲು ₹7 ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ನೆಲಮಹಡಿಯನ್ನು ಮೀನುಗಾರಿಕೆ ಇಲಾಖೆ, ಮೊದಲ ಮಹಡಿಯನ್ನು ಪ್ರವಾಸೋದ್ಯಮ ಇಲಾಖೆ ನಿರ್ಮಿಸಿ ನಿರ್ವಹಿಸಲು ನಿರ್ಧರಿಸಲಾಗಿದೆ. ರಾಜ್ಯ ಬಜೆಟ್ಗೆ ಮುನ್ನವೇ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮುಂಬರುವ ಬಜೆಟ್ನೊಳಗೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಭಟ್ ತಿಳಿಸಿದರು.