<p><strong>ಕಾರವಾರ</strong>: ಅವಧಿಗೆ ಮುನ್ನವೇ ಮಳೆ ಸುರಿಯುವ ಸಾಧ್ಯತೆ ಇದ್ದರೂ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆ ಚುರುಕಾಗಿಲ್ಲ. ಕೆಲವೆಡೆ ಚರಂಡಿ ಹೂಳೆತ್ತಲಾಗುತ್ತಿದ್ದರೂ ಕಾಟಾಚಾರದ ಕೆಲಸ ನಡೆಯುತ್ತಿದೆ ಎಂಬ ದೂರು ವ್ಯಾಪಕವಾಗಿದೆ.</p>.<p>ಬೇಸಿಗೆ ಮುಗಿಯುವ ಹೊತ್ತಿನಲ್ಲಿ ರಾಜಕಾಲುವೆ, ಚರಂಡಿ ಹೂಳೆತ್ತುವ ಕೆಲಸ ಕೈಗೊಳ್ಳಲಾಗುತ್ತದೆ. ಮಳೆಗಾಲಕ್ಕೆ ಹಲವು ತಿಂಗಳ ಮುಂಚಿತವಾಗಿ ಈ ಕೆಲಸ ನಡೆಯಬೇಕಿದ್ದರೂ ಕೊನೆ ಕ್ಷಣದಲ್ಲಿ ಕೆಲಸ ಮಾಡಿ, ಕಾಟಾಚಾರಕ್ಕೆ ಮುಗಿಸುವ ಪ್ರವೃತ್ತಿ ನಿಲ್ಲುತ್ತಿಲ್ಲ ಎಂಬುದು ಜನರ ಆರೋಪ.</p>.<p>‘ಕಾರವಾರ ನಗರದಲ್ಲಿ ಕಳೆದ ಮಳೆಗಾಲಕ್ಕೆ ಮುನ್ನ ಚರಂಡಿ ಹೂಳೆತ್ತಿಸಿದ್ದರು. ಆದರೆ, ಕೇವಲ ಕಸಕಡ್ಡಿಯನ್ನಷ್ಟೆ ತೆರವುಗೊಳಿಸಿ ಕೆಲಸ ಮುಗಿಸಲಾಗಿತ್ತು. ಮಳೆಗಾಲದ ಆರಂಭದಲ್ಲೇ ಚರಂಡಿಯಲ್ಲಿನ ಹೂಳಿನಿಂದ ನೀರು ಹರಿಯದೆ ಜಲಾವೃತ ಉಂಟಾಯಿತು. ಈ ಬಾರಿ ಅಂತಹ ತಪ್ಪು ಮರುಕಳಿಸದಂತೆ ಎಚ್ಚರವಹಿಸಲಿ’ ಎಂದು ಮುರಳೀಧರ ಮಠ ರಸ್ತೆಯ ನಿವಾಸಿ ಶೈಲಜಾ ನಾಯ್ಕ ಹೇಳಿದರು.</p>.<p>‘ಕಾರವಾರದಲ್ಲಿ 150 ಕಿ.ಮೀ ಉದ್ದದಷ್ಟು ಚರಂಡಿ, 5 ಕಿ.ಮೀ ಉದ್ದದ ರಾಜಕಾಲುವೆ ಹೂಳೆತ್ತಲು ₹45 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ರಾಜಕಾಲುವೆ ಹೂಳೆತ್ತುವ ಕೆಲಸ ಆರಂಭವಾಗಿದೆ. ಮಳೆಗಾಲಕ್ಕೆ ಮುನ್ನವೇ ತ್ಯಾಜ್ಯ, ಹೂಳು ತೆರವುಗೊಳಿಸಲಾಗುತ್ತದೆ’ ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ತಿಳಿಸಿದರು.</p>.<p>ಶಿರಸಿ ನಗರ ವ್ಯಾಪ್ತಿಯ ಬಹುತೇಕ ವಾರ್ಡ್ಗಳಲ್ಲಿ ಮಳೆಗಾಲಪೂರ್ವ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದೆ. ದುಂಡಶಿನಗರ, ದೇವಿಕೆರೆ ಕೆಳಭಾಗ, ಚಂದ್ರಾ ಲೇ ಔಟ್, ಗಣೇಶನಗರ, ರಾಜೀವನಗರ, ಕೋಟೆಕೆರೆ ಸುತ್ತಮುತ್ತ ಸೇರಿ ಹಲವು ಕಡೆ ಚರಂಡಿಗಳು ಕಸಕಡ್ಡಿಗಳಿಂದ ತುಂಬಿಕೊಂಡಿದೆ. 30ಕ್ಕೂ ಹೆಚ್ಚು ಕಡೆ ಶಾಲೆ, ಅಂಗನವಾಡಿ, ಮನೆಗಳ ಸಮೀಪದಲ್ಲಿ ಅಪಾಯಕಾರಿ ಮರಗಳಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಗೆ ತೆರವಿಗೆ ಕೋರಿದ್ದಾರೆ.</p>.<p>ಯಲ್ಲಾಪುರ ಪಟ್ಟಣದಲ್ಲಿ ಎರಡೂವರೆ ತಿಂಗಳ ಹಿಂದೆ ನಡೆದ ಗ್ರಾಮದೇವಿ ಜಾತ್ರೆಯ ಸಮಯದಲ್ಲಿ ಸ್ವಚ್ಛ ಗೊಳಿಸಲಾಗಿತ್ತು. ಈಗ ಅವು ಕಸದಿಂದ ತುಂಬಿಕೊಂಡಿವೆ. ವ್ಯವಸ್ಥಿತ ಚರಂಡಿ ಇಲ್ಲದೆ ವೈಟಿಎಸ್ಎಸ್ ಕಾಲೇಜು ಹತ್ತಿರ ಮುಂಡಗೋಡು ರಸ್ತೆಗೆ ಕೊಳಚೆ ನೀರು ಹರಿದು ಬರುತ್ತದೆ. ವಿಶ್ವದರ್ಶನ ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲುತ್ತದೆ ಎಂಬುದು ಜನರ ದೂರು.</p>.<p>ಗೋಕರ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗಯುವ ಕಾರ್ಯ ಆರಂಭವಾಗಿಲ್ಲ. ಮುಖ್ಯ ರಸ್ತೆಯಲ್ಲಂತೂ ಚರಂಡಿ ಮಣ್ಣಿನಿಂದಲೇ ತುಂಬಿದೆ. ಗಂಜಿಗದ್ದೆಯಲ್ಲಿ ಹೊಸದಾಗಿ ಚರಂಡಿ ಕಾಮಗಾರಿಯನ್ನು ಸ್ವಲ್ಪ ದೂರ ಮಾತ್ರ ಮಾಡಲಾಗಿದೆ. ಉಳಿದ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಥಬೀದಿಯಲ್ಲಿ ಚರಂಡಿ ಒತ್ತುವರಿ ಮಾಡಿ, ಅಂಗಡಿಯ ವಸ್ತುಗಳನ್ನು ಇಡಲಾಗುತ್ತಿದೆ. ಆದರೂ ಸ್ಥಳೀಯ ಆಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಸಾದ ದೂರಿದರು.</p>.<p>ಹಳಿಯಾಳ ಪಟ್ಟಣದಲ್ಲಿ 23 ವಾರ್ಡ್ಗಳ ವ್ಯಾಪ್ತಿಯಲ್ಲಿ ಎರಡು ಹಂತಗಳಲ್ಲಿ ಚರಂಡಿ ಹೂಳೆತ್ತುವ ಕೆಲಸ ನಡೆದಿದೆ. 75 ಕಿ.ಮೀ ಉದ್ದದ ಚರಂಡಿಯನ್ನು ಹೂಳೆತ್ತುವ ಕಾರ್ಯ ಚುರುಕಾಗಿ ನಡೆದಿದೆ. ಪುರಸಭೆಯ ಸಿಬ್ಬಂದಿ ಜೊತೆಗೆ ಸ್ವಚ್ಛತೆಗಾಗಿ ಹೆಚ್ಚುವರಿ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ದೂರು ಬಂದ ಕಡೆಗಳಲ್ಲಿ ಆದ್ಯತೆ ಮೇರೆಗೆ ಹೂಳೆತ್ತಿಸಲಾಗುತ್ತಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕಕುಮಾರ ಸಾಳೆನ್ನವರ ತಿಳಿಸಿದರು.</p>.<p>‘ಏಪ್ರಿಲ್ ತಿಂಗಳಿನಲ್ಲಿ ಅಡ್ಡ ಮಳೆ ಬೀಳುವ ಸಾಧ್ಯತೆ ಇದ್ದು ಚರಂಡಿ ಸ್ವಚ್ಛಗೊಳಿಸುವ ಕೆಲಸ ಕನಿಷ್ಠ 3 ತಿಂಗಳು ಮುಂಚಿನಿಂದಲೇ ಆರಂಭಿಸಬೇಕು’ ಎಂದು ಹೊಸೂರ ಗಲ್ಲಿಯ ಜನರು ಒತ್ತಾಯಿಸಿದರು.</p>.<p>ಹೊನ್ನಾವರ ಪಟ್ಟಣದ ಕೆಲವೆಡೆ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆದಿದ್ದು ಕೆಲಸ ಇನ್ನೂ ಬಾಕಿ ಇದೆ. ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳ ಪಕ್ಕದ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದೆ. ಮುಗ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೊಳ್ಳಿ ಮತ್ತಿತರೆಡೆಗಳಲ್ಲಿ ರಸ್ತೆ ಪಕ್ಕದ ಚರಂಡಿ ಸ್ಥಿತಿಯೂ ಹೀಗೆಯೇ ಇದೆ. ಪಟ್ಟಣದಲ್ಲಿ ಚರಂಡಿ ಒತ್ತುವರಿ ಮಾಡಿಕೊಂಡು ನಡೆಸುತ್ತಿರುವ ಅಂಗಡಿಮುಂಗಟ್ಟಗಳು ಸ್ವಚ್ಛತೆಗೆ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪಗಳಿವೆ.</p>.<p>ದಾಂಡೇಲಿ ನಗರದ ಹಳೇ ದಾಂಡೇಲಿ, ಜೆ.ಎನ್.ರಸ್ತೆ ಸೇರಿದಂತೆ ವಿವಿಧೆಡೆ ಮುಂಗಾರು ಪೂರ್ವ ಸಿದ್ಧತೆ ಕೆಲಸ ಪ್ರಗತಿಯಲ್ಲಿದೆ ಎಂದು ನಗರಸಭೆ ಆರೋಗ್ಯ ಅಧಿಕಾರಿ ವಿಲಾಸ ದೇವಕರ ತಿಳಿಸಿದ್ದಾರೆ.</p>.<p>‘ನಗರದ ಜೆ.ಎನ್.ರಸ್ತೆಯಲ್ಲಿನ ದೊಡ್ಡ ಚರಂಡಿ ಕಳೆದ ವರ್ಷ ಹಾಳಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈವರೆಗೂ ದುರಸ್ತಿ ಕೆಲಸ ನಡೆದಿಲ್ಲ. ಗಾಂಧಿನಗರ, ಅಂಬೇವಾಡಿ ಹಾಗೂ ಸುಭಾಷ ನಗರ ಸೇರಿದಂತೆ ಇತರೆ ಪ್ರದೇಶದಲ್ಲಿ ಚರಂಡಿ ಸ್ವಚ್ಛತೆ ಮಾಡುವ ಕೆಲಸ ಈವರೆಗೂ ನಡೆದಿಲ್ಲ’ ಎಂಬುದು ಜನರ ದೂರು.</p>.<p>ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಮೋಹನ ನಾಯ್ಕ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ</p>.<div><blockquote>ಹಲವು ವರ್ಷಗಳಿಂದ ಶೇಖರಣೆಯಾದ ಹೂಳನ್ನು ಪೂರ್ಣಪ್ರಮಾಣದಲ್ಲಿ ತೆರವುಗೊಳಿಸದ ಕಾರಣ, ದೊಡ್ಡ ಕಾಲುವೆಗಳಲ್ಲಿ ಕೂಡ ನೀರು ಹರಿಯದೇ ರಸ್ತೆಯ ಮೇಲೆ ಹರಿಯುವ ಸ್ಥಿತಿಯಿದೆ </blockquote><span class="attribution">ರಾಜೇಶ ನಾಯ್ಕ, ಶಿರಸಿಯ ದುಂಡಶಿ ನಗರ ನಿವಾಸಿ</span></div>. <p><strong>‘ಮಳೆ ಸಮೀಪಿಸಿದಾಗ ತರಾತುರಿ ಕೆಲಸ’</strong></p><p>ಭಟ್ಕಳ ಪಟ್ಟಣದಲ್ಲಿ ಈವರೆಗೂ ನಗರಸಭೆಯಿಂದ ಚರಂಡಿ ಹೂಳೆತ್ತುವ ಕಾರ್ಯ ಆರಂಭ ಮಾಡಿಲ್ಲ. ರಂಗಿನಕಟ್ಟೆ, ಮಣ್ಕುಳಿ, ಶಂಸುದ್ದೀನ್ ವೃತ್ತ ಹಾಗೂ ಮುಖ್ಯ ರಸ್ತೆಯ ಮಾರ್ಗಗಳು ಜಲಾವೃತ್ತ ಪ್ರದೇಶಗಳಾಗಿವೆ. ಸಣ್ಣ ಮಳೆಗೆ ಈ ಪ್ರದೇಶದಲ್ಲಿ ನೀರು ತುಂಬಿಕೊಳ್ಳುತ್ತದೆ. ಪಟ್ಟಣ ವ್ಯಾಪ್ತಿಯಲ್ಲಿ ಐಆರ್ಬಿ ಕಂಪನಿ ತರಾತುರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದು, ಮಳೆಗಾಲದಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೆ ರಸ್ತೆಯನ್ನು ಎತ್ತರಕ್ಕೆ ಏರಿಸಿ ಡಾಂಬರೀಕರಣ ಮಾಡುತ್ತಿದೆ ಎಂಬುದು ಸಾರ್ವಜನಿಕರ ಆರೋಪ.</p><p><strong>‘ಕಸದ ತೊಟ್ಟಿಯಾದ ಚರಂಡಿ’</strong></p><p>‘ಅಂಕೋಲಾ ಪಟ್ಟಣದ ಅನೇಕ ವಾರ್ಡ್ಗಳಲ್ಲಿ ಇನ್ನೂ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿಲ್ಲ. ನಿತ್ಯ ಬೆಳಿಗ್ಗೆ ಕಸ ಸಂಗ್ರಹಿಸುವ ವಾಹನಗಳು ಬರುತ್ತಿದ್ದರೂ ಕೆಲವು ಅಂಗಡಿಕಾರರು ಹಾಗೂ ಸುತ್ತಲಿನ ನಿವಾಸಿಗಳು ನಿತ್ಯ ಕಸವನ್ನು ತಂದು ಚರಂಡಿ ಹಾಗೂ ರಸ್ತೆ ಪಕ್ಕದಲ್ಲಿ ಚೆಲ್ಲುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ನೀರು ಹರಿಯುವ ಕಾಲುವೆಗಳಲ್ಲಿ ಹೂಳು ತುಂಬಿ ನೀರು ಮುಂದೆ ಹರಿಯದೆ ಸಂಪೂರ್ಣ ಜಲಾವೃತವಾಗುತ್ತಿದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ರಾಘವೇಂದ್ರ ನಾಯ್ಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಅವಧಿಗೆ ಮುನ್ನವೇ ಮಳೆ ಸುರಿಯುವ ಸಾಧ್ಯತೆ ಇದ್ದರೂ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆ ಚುರುಕಾಗಿಲ್ಲ. ಕೆಲವೆಡೆ ಚರಂಡಿ ಹೂಳೆತ್ತಲಾಗುತ್ತಿದ್ದರೂ ಕಾಟಾಚಾರದ ಕೆಲಸ ನಡೆಯುತ್ತಿದೆ ಎಂಬ ದೂರು ವ್ಯಾಪಕವಾಗಿದೆ.</p>.<p>ಬೇಸಿಗೆ ಮುಗಿಯುವ ಹೊತ್ತಿನಲ್ಲಿ ರಾಜಕಾಲುವೆ, ಚರಂಡಿ ಹೂಳೆತ್ತುವ ಕೆಲಸ ಕೈಗೊಳ್ಳಲಾಗುತ್ತದೆ. ಮಳೆಗಾಲಕ್ಕೆ ಹಲವು ತಿಂಗಳ ಮುಂಚಿತವಾಗಿ ಈ ಕೆಲಸ ನಡೆಯಬೇಕಿದ್ದರೂ ಕೊನೆ ಕ್ಷಣದಲ್ಲಿ ಕೆಲಸ ಮಾಡಿ, ಕಾಟಾಚಾರಕ್ಕೆ ಮುಗಿಸುವ ಪ್ರವೃತ್ತಿ ನಿಲ್ಲುತ್ತಿಲ್ಲ ಎಂಬುದು ಜನರ ಆರೋಪ.</p>.<p>‘ಕಾರವಾರ ನಗರದಲ್ಲಿ ಕಳೆದ ಮಳೆಗಾಲಕ್ಕೆ ಮುನ್ನ ಚರಂಡಿ ಹೂಳೆತ್ತಿಸಿದ್ದರು. ಆದರೆ, ಕೇವಲ ಕಸಕಡ್ಡಿಯನ್ನಷ್ಟೆ ತೆರವುಗೊಳಿಸಿ ಕೆಲಸ ಮುಗಿಸಲಾಗಿತ್ತು. ಮಳೆಗಾಲದ ಆರಂಭದಲ್ಲೇ ಚರಂಡಿಯಲ್ಲಿನ ಹೂಳಿನಿಂದ ನೀರು ಹರಿಯದೆ ಜಲಾವೃತ ಉಂಟಾಯಿತು. ಈ ಬಾರಿ ಅಂತಹ ತಪ್ಪು ಮರುಕಳಿಸದಂತೆ ಎಚ್ಚರವಹಿಸಲಿ’ ಎಂದು ಮುರಳೀಧರ ಮಠ ರಸ್ತೆಯ ನಿವಾಸಿ ಶೈಲಜಾ ನಾಯ್ಕ ಹೇಳಿದರು.</p>.<p>‘ಕಾರವಾರದಲ್ಲಿ 150 ಕಿ.ಮೀ ಉದ್ದದಷ್ಟು ಚರಂಡಿ, 5 ಕಿ.ಮೀ ಉದ್ದದ ರಾಜಕಾಲುವೆ ಹೂಳೆತ್ತಲು ₹45 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ರಾಜಕಾಲುವೆ ಹೂಳೆತ್ತುವ ಕೆಲಸ ಆರಂಭವಾಗಿದೆ. ಮಳೆಗಾಲಕ್ಕೆ ಮುನ್ನವೇ ತ್ಯಾಜ್ಯ, ಹೂಳು ತೆರವುಗೊಳಿಸಲಾಗುತ್ತದೆ’ ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ತಿಳಿಸಿದರು.</p>.<p>ಶಿರಸಿ ನಗರ ವ್ಯಾಪ್ತಿಯ ಬಹುತೇಕ ವಾರ್ಡ್ಗಳಲ್ಲಿ ಮಳೆಗಾಲಪೂರ್ವ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದೆ. ದುಂಡಶಿನಗರ, ದೇವಿಕೆರೆ ಕೆಳಭಾಗ, ಚಂದ್ರಾ ಲೇ ಔಟ್, ಗಣೇಶನಗರ, ರಾಜೀವನಗರ, ಕೋಟೆಕೆರೆ ಸುತ್ತಮುತ್ತ ಸೇರಿ ಹಲವು ಕಡೆ ಚರಂಡಿಗಳು ಕಸಕಡ್ಡಿಗಳಿಂದ ತುಂಬಿಕೊಂಡಿದೆ. 30ಕ್ಕೂ ಹೆಚ್ಚು ಕಡೆ ಶಾಲೆ, ಅಂಗನವಾಡಿ, ಮನೆಗಳ ಸಮೀಪದಲ್ಲಿ ಅಪಾಯಕಾರಿ ಮರಗಳಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಗೆ ತೆರವಿಗೆ ಕೋರಿದ್ದಾರೆ.</p>.<p>ಯಲ್ಲಾಪುರ ಪಟ್ಟಣದಲ್ಲಿ ಎರಡೂವರೆ ತಿಂಗಳ ಹಿಂದೆ ನಡೆದ ಗ್ರಾಮದೇವಿ ಜಾತ್ರೆಯ ಸಮಯದಲ್ಲಿ ಸ್ವಚ್ಛ ಗೊಳಿಸಲಾಗಿತ್ತು. ಈಗ ಅವು ಕಸದಿಂದ ತುಂಬಿಕೊಂಡಿವೆ. ವ್ಯವಸ್ಥಿತ ಚರಂಡಿ ಇಲ್ಲದೆ ವೈಟಿಎಸ್ಎಸ್ ಕಾಲೇಜು ಹತ್ತಿರ ಮುಂಡಗೋಡು ರಸ್ತೆಗೆ ಕೊಳಚೆ ನೀರು ಹರಿದು ಬರುತ್ತದೆ. ವಿಶ್ವದರ್ಶನ ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲುತ್ತದೆ ಎಂಬುದು ಜನರ ದೂರು.</p>.<p>ಗೋಕರ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗಯುವ ಕಾರ್ಯ ಆರಂಭವಾಗಿಲ್ಲ. ಮುಖ್ಯ ರಸ್ತೆಯಲ್ಲಂತೂ ಚರಂಡಿ ಮಣ್ಣಿನಿಂದಲೇ ತುಂಬಿದೆ. ಗಂಜಿಗದ್ದೆಯಲ್ಲಿ ಹೊಸದಾಗಿ ಚರಂಡಿ ಕಾಮಗಾರಿಯನ್ನು ಸ್ವಲ್ಪ ದೂರ ಮಾತ್ರ ಮಾಡಲಾಗಿದೆ. ಉಳಿದ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಥಬೀದಿಯಲ್ಲಿ ಚರಂಡಿ ಒತ್ತುವರಿ ಮಾಡಿ, ಅಂಗಡಿಯ ವಸ್ತುಗಳನ್ನು ಇಡಲಾಗುತ್ತಿದೆ. ಆದರೂ ಸ್ಥಳೀಯ ಆಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಸಾದ ದೂರಿದರು.</p>.<p>ಹಳಿಯಾಳ ಪಟ್ಟಣದಲ್ಲಿ 23 ವಾರ್ಡ್ಗಳ ವ್ಯಾಪ್ತಿಯಲ್ಲಿ ಎರಡು ಹಂತಗಳಲ್ಲಿ ಚರಂಡಿ ಹೂಳೆತ್ತುವ ಕೆಲಸ ನಡೆದಿದೆ. 75 ಕಿ.ಮೀ ಉದ್ದದ ಚರಂಡಿಯನ್ನು ಹೂಳೆತ್ತುವ ಕಾರ್ಯ ಚುರುಕಾಗಿ ನಡೆದಿದೆ. ಪುರಸಭೆಯ ಸಿಬ್ಬಂದಿ ಜೊತೆಗೆ ಸ್ವಚ್ಛತೆಗಾಗಿ ಹೆಚ್ಚುವರಿ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ದೂರು ಬಂದ ಕಡೆಗಳಲ್ಲಿ ಆದ್ಯತೆ ಮೇರೆಗೆ ಹೂಳೆತ್ತಿಸಲಾಗುತ್ತಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕಕುಮಾರ ಸಾಳೆನ್ನವರ ತಿಳಿಸಿದರು.</p>.<p>‘ಏಪ್ರಿಲ್ ತಿಂಗಳಿನಲ್ಲಿ ಅಡ್ಡ ಮಳೆ ಬೀಳುವ ಸಾಧ್ಯತೆ ಇದ್ದು ಚರಂಡಿ ಸ್ವಚ್ಛಗೊಳಿಸುವ ಕೆಲಸ ಕನಿಷ್ಠ 3 ತಿಂಗಳು ಮುಂಚಿನಿಂದಲೇ ಆರಂಭಿಸಬೇಕು’ ಎಂದು ಹೊಸೂರ ಗಲ್ಲಿಯ ಜನರು ಒತ್ತಾಯಿಸಿದರು.</p>.<p>ಹೊನ್ನಾವರ ಪಟ್ಟಣದ ಕೆಲವೆಡೆ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆದಿದ್ದು ಕೆಲಸ ಇನ್ನೂ ಬಾಕಿ ಇದೆ. ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳ ಪಕ್ಕದ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದೆ. ಮುಗ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೊಳ್ಳಿ ಮತ್ತಿತರೆಡೆಗಳಲ್ಲಿ ರಸ್ತೆ ಪಕ್ಕದ ಚರಂಡಿ ಸ್ಥಿತಿಯೂ ಹೀಗೆಯೇ ಇದೆ. ಪಟ್ಟಣದಲ್ಲಿ ಚರಂಡಿ ಒತ್ತುವರಿ ಮಾಡಿಕೊಂಡು ನಡೆಸುತ್ತಿರುವ ಅಂಗಡಿಮುಂಗಟ್ಟಗಳು ಸ್ವಚ್ಛತೆಗೆ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪಗಳಿವೆ.</p>.<p>ದಾಂಡೇಲಿ ನಗರದ ಹಳೇ ದಾಂಡೇಲಿ, ಜೆ.ಎನ್.ರಸ್ತೆ ಸೇರಿದಂತೆ ವಿವಿಧೆಡೆ ಮುಂಗಾರು ಪೂರ್ವ ಸಿದ್ಧತೆ ಕೆಲಸ ಪ್ರಗತಿಯಲ್ಲಿದೆ ಎಂದು ನಗರಸಭೆ ಆರೋಗ್ಯ ಅಧಿಕಾರಿ ವಿಲಾಸ ದೇವಕರ ತಿಳಿಸಿದ್ದಾರೆ.</p>.<p>‘ನಗರದ ಜೆ.ಎನ್.ರಸ್ತೆಯಲ್ಲಿನ ದೊಡ್ಡ ಚರಂಡಿ ಕಳೆದ ವರ್ಷ ಹಾಳಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈವರೆಗೂ ದುರಸ್ತಿ ಕೆಲಸ ನಡೆದಿಲ್ಲ. ಗಾಂಧಿನಗರ, ಅಂಬೇವಾಡಿ ಹಾಗೂ ಸುಭಾಷ ನಗರ ಸೇರಿದಂತೆ ಇತರೆ ಪ್ರದೇಶದಲ್ಲಿ ಚರಂಡಿ ಸ್ವಚ್ಛತೆ ಮಾಡುವ ಕೆಲಸ ಈವರೆಗೂ ನಡೆದಿಲ್ಲ’ ಎಂಬುದು ಜನರ ದೂರು.</p>.<p>ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಮೋಹನ ನಾಯ್ಕ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ</p>.<div><blockquote>ಹಲವು ವರ್ಷಗಳಿಂದ ಶೇಖರಣೆಯಾದ ಹೂಳನ್ನು ಪೂರ್ಣಪ್ರಮಾಣದಲ್ಲಿ ತೆರವುಗೊಳಿಸದ ಕಾರಣ, ದೊಡ್ಡ ಕಾಲುವೆಗಳಲ್ಲಿ ಕೂಡ ನೀರು ಹರಿಯದೇ ರಸ್ತೆಯ ಮೇಲೆ ಹರಿಯುವ ಸ್ಥಿತಿಯಿದೆ </blockquote><span class="attribution">ರಾಜೇಶ ನಾಯ್ಕ, ಶಿರಸಿಯ ದುಂಡಶಿ ನಗರ ನಿವಾಸಿ</span></div>. <p><strong>‘ಮಳೆ ಸಮೀಪಿಸಿದಾಗ ತರಾತುರಿ ಕೆಲಸ’</strong></p><p>ಭಟ್ಕಳ ಪಟ್ಟಣದಲ್ಲಿ ಈವರೆಗೂ ನಗರಸಭೆಯಿಂದ ಚರಂಡಿ ಹೂಳೆತ್ತುವ ಕಾರ್ಯ ಆರಂಭ ಮಾಡಿಲ್ಲ. ರಂಗಿನಕಟ್ಟೆ, ಮಣ್ಕುಳಿ, ಶಂಸುದ್ದೀನ್ ವೃತ್ತ ಹಾಗೂ ಮುಖ್ಯ ರಸ್ತೆಯ ಮಾರ್ಗಗಳು ಜಲಾವೃತ್ತ ಪ್ರದೇಶಗಳಾಗಿವೆ. ಸಣ್ಣ ಮಳೆಗೆ ಈ ಪ್ರದೇಶದಲ್ಲಿ ನೀರು ತುಂಬಿಕೊಳ್ಳುತ್ತದೆ. ಪಟ್ಟಣ ವ್ಯಾಪ್ತಿಯಲ್ಲಿ ಐಆರ್ಬಿ ಕಂಪನಿ ತರಾತುರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದು, ಮಳೆಗಾಲದಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೆ ರಸ್ತೆಯನ್ನು ಎತ್ತರಕ್ಕೆ ಏರಿಸಿ ಡಾಂಬರೀಕರಣ ಮಾಡುತ್ತಿದೆ ಎಂಬುದು ಸಾರ್ವಜನಿಕರ ಆರೋಪ.</p><p><strong>‘ಕಸದ ತೊಟ್ಟಿಯಾದ ಚರಂಡಿ’</strong></p><p>‘ಅಂಕೋಲಾ ಪಟ್ಟಣದ ಅನೇಕ ವಾರ್ಡ್ಗಳಲ್ಲಿ ಇನ್ನೂ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿಲ್ಲ. ನಿತ್ಯ ಬೆಳಿಗ್ಗೆ ಕಸ ಸಂಗ್ರಹಿಸುವ ವಾಹನಗಳು ಬರುತ್ತಿದ್ದರೂ ಕೆಲವು ಅಂಗಡಿಕಾರರು ಹಾಗೂ ಸುತ್ತಲಿನ ನಿವಾಸಿಗಳು ನಿತ್ಯ ಕಸವನ್ನು ತಂದು ಚರಂಡಿ ಹಾಗೂ ರಸ್ತೆ ಪಕ್ಕದಲ್ಲಿ ಚೆಲ್ಲುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ನೀರು ಹರಿಯುವ ಕಾಲುವೆಗಳಲ್ಲಿ ಹೂಳು ತುಂಬಿ ನೀರು ಮುಂದೆ ಹರಿಯದೆ ಸಂಪೂರ್ಣ ಜಲಾವೃತವಾಗುತ್ತಿದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ರಾಘವೇಂದ್ರ ನಾಯ್ಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>