<p><strong>ಕಾರವಾರ: ಹ</strong>ಲವು ದಶಕಗಳಿಂದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೊಳೆಯುತ್ತಿದ್ದ ಕಸಗಳನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಕೆಲವೇ ತಿಂಗಳಲ್ಲಿ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ 1.46 ಲಕ್ಷ ಟನ್ ಕಸ ಕಣ್ಮರೆಯಾಗಲಿದೆ!</p>.<p>ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುಡ್ಡದ ರೂಪದಲ್ಲಿ ಇದ್ದ ಕಸಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂಬ ರಾಷ್ಟ್ರೀಯ ಹಸಿರು ಪೀಠದ (ಎನ್ಜಿಟಿ) ಆದೇಶ ಆಧರಿಸಿ, ಕಳೆದ ಒಂದು ವರ್ಷದಿಂದ ಶಿರಸಿ ಮತ್ತು ಭಟ್ಕಳ ನಗರಸಭೆ ಹಾಗೂ ಯಲ್ಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಲೇವಾರಿ ಪ್ರಕ್ರಿಯೆ ನಡೆದಿದೆ.</p>.<p>ಅದರ ಬೆನ್ನಲ್ಲೇ ಕಾರವಾರ ನಗರಸಭೆ ಮತ್ತು ಹೊನ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 95,250 ಟನ್ ಹಳೆಯ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಎರಡನೇ ಹಂತದಲ್ಲಿ ವಿಲೇವಾರಿ ಪ್ರಕ್ರಿಯೆಗೆ ₹8.50 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.</p>.<p>‘ಮೂರು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕಳೆದ ವರ್ಷದ ಏಪ್ರಿಲ್ನಲ್ಲಿ ₹11 ಕೋಟಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿತ್ತು. ಶಿರಸಿಯಲ್ಲಿ 98 ಸಾವಿರ ಟನ್, ಭಟ್ಕಳದಲ್ಲಿ 22 ಸಾವಿರ ಮತ್ತು ಯಲ್ಲಾಪುರದಲ್ಲಿ 26,750 ಟನ್ಗಳಷ್ಟು ಕಸವನ್ನು ಈ ವರ್ಷದ ಜೂನ್ ಒಳಗೆ ವಿಲೇವಾರಿಗೊಳಿಸಲು ಸೂಚನೆ ನೀಡಲಾಗಿತ್ತು. ಶೇ 40ರಷ್ಟು ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಜೂನ್ ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳಬಹುದು’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಎಇಇ ಕೆ.ಎಸ್. ಕಮ್ಮಾರ ತಿಳಿಸಿದರು.</p>.<p>‘ಹಳೆಯ ತ್ಯಾಜ್ಯಗಳು ಮಣ್ಣಿನೊಂದಿಗೆ ಸೇರಿ ಗುಡ್ಡದಂತೆ ಕಾಣುತ್ತಿವೆ. ಅವುಗಳನ್ನು ತೆರವುಗೊಳಿಸಿ, ಯಂತ್ರೋಪಕರಣಗಳನ್ನು ಬಳಸಿ ಮೂರು ವಿಧವಾಗಿ ವಿಂಗಡಿಸಲಾಗುತ್ತಿದೆ. ಕರಗದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಸಿಮೆಂಟ್ ಕಾರ್ಖಾನೆಗೆ ರವಾನೆ ಮಾಡಲಾಗುತ್ತದೆ. ಕರಗಬಹುದಾದ ಕಸಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಹಸಿ ಕಸ ಬೆರೆತುಕೊಂಡಿರುವ ಮಣ್ಣು ಸಂಸ್ಕರಿಸಿ ಗೊಬ್ಬರವಾಗಿ ತಯಾರಿಸಲಾಗುವುದು. ಹೀಗೆ ಮೂರು ಹಂತದಲ್ಲಿ ವಿಂಗಡಿಸಿ, ವಿಲೇವಾರಿಗೊಳಿಸುವ ಕೆಲಸ ಸಂಪೂರ್ಣ ವೈಜ್ಞಾನಿಕ ಪ್ರಕ್ರಿಯೆಗಳಿಂದ ನಡೆಯುತ್ತಿದೆ’ ಎಂದು ವಿವರಿಸಿದರು.</p>.<h2>5 ಕಡೆ ಸುಧಾರಿತ ತಂತ್ರಜ್ಞಾನ</h2><p>‘ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹಳೆಯ ತ್ಯಾಜ್ಯಗಳ ದಾಸ್ತಾನು ಇದೆ. ಶಿರಸಿ, ಕಾರವಾರ, ಭಟ್ಕಳ, ಯಲ್ಲಾಪುರ ಮತ್ತು ಹೊನ್ನಾವರದಲ್ಲಿ ವ್ಯಾಪಕ ಪ್ರಮಾಣದ ತ್ಯಾಜ್ಯಗಳು ಉಳಿದುಕೊಂಡಿವೆ. ಅವುಗಳನ್ನು ವಿಲೇವಾರಿಗೊಳಿಸಲು ಸುಧಾರಿತ ತಂತ್ರಜ್ಞಾನ ಅಗತ್ಯವಿದ್ದ ಕಾರಣಕ್ಕೆ ಹೆಚ್ಚು ವೆಚ್ಚ ತಗಲುತ್ತಿದೆ. ತ್ಯಾಜ್ಯಗಳ ವಿಂಗಡಣೆಗೆ ಅತ್ಯಾಧುನಿಕ ಯಂತ್ರೋಪಕರಣ ಬಳಕೆ ಮಡಲಾಗುತ್ತಿದೆ. ಈ ಯಂತ್ರವು ಪ್ರತಿ ಗಂಟೆಗೆ ಸರಾಸರಿ 100 ಟನ್ ಕಸ ವಿಂಗಡಣೆ ಮಾಡುತ್ತಿದೆ’ ಎಂದು ನಗರಾಭಿವೃದ್ಧಿ ಕೋಶದ ಕಾರ್ತೀಕ ನಾಯ್ಕ ತಿಳಿಸಿದರು.</p>.<div><blockquote>ಮೊದಲ ಹಂತದಲ್ಲಿನ 1.46 ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಬೆನ್ನಲ್ಲೇ ಕಾರವಾರ ಮತ್ತು ಹೊನ್ನಾವರದಲ್ಲಿ 95 ಸಾವಿರ ಟನ್ ತ್ಯಾಜ್ಯ ವಿಲೇವಾರಿಗೊಳಿಸುವ ಪ್ರಕ್ರಿಯೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ </blockquote><span class="attribution">ಕೆ.ಎಸ್.ಕಮ್ಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260402-20-183139863</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: ಹ</strong>ಲವು ದಶಕಗಳಿಂದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೊಳೆಯುತ್ತಿದ್ದ ಕಸಗಳನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಕೆಲವೇ ತಿಂಗಳಲ್ಲಿ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ 1.46 ಲಕ್ಷ ಟನ್ ಕಸ ಕಣ್ಮರೆಯಾಗಲಿದೆ!</p>.<p>ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುಡ್ಡದ ರೂಪದಲ್ಲಿ ಇದ್ದ ಕಸಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂಬ ರಾಷ್ಟ್ರೀಯ ಹಸಿರು ಪೀಠದ (ಎನ್ಜಿಟಿ) ಆದೇಶ ಆಧರಿಸಿ, ಕಳೆದ ಒಂದು ವರ್ಷದಿಂದ ಶಿರಸಿ ಮತ್ತು ಭಟ್ಕಳ ನಗರಸಭೆ ಹಾಗೂ ಯಲ್ಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಲೇವಾರಿ ಪ್ರಕ್ರಿಯೆ ನಡೆದಿದೆ.</p>.<p>ಅದರ ಬೆನ್ನಲ್ಲೇ ಕಾರವಾರ ನಗರಸಭೆ ಮತ್ತು ಹೊನ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 95,250 ಟನ್ ಹಳೆಯ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಎರಡನೇ ಹಂತದಲ್ಲಿ ವಿಲೇವಾರಿ ಪ್ರಕ್ರಿಯೆಗೆ ₹8.50 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.</p>.<p>‘ಮೂರು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕಳೆದ ವರ್ಷದ ಏಪ್ರಿಲ್ನಲ್ಲಿ ₹11 ಕೋಟಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿತ್ತು. ಶಿರಸಿಯಲ್ಲಿ 98 ಸಾವಿರ ಟನ್, ಭಟ್ಕಳದಲ್ಲಿ 22 ಸಾವಿರ ಮತ್ತು ಯಲ್ಲಾಪುರದಲ್ಲಿ 26,750 ಟನ್ಗಳಷ್ಟು ಕಸವನ್ನು ಈ ವರ್ಷದ ಜೂನ್ ಒಳಗೆ ವಿಲೇವಾರಿಗೊಳಿಸಲು ಸೂಚನೆ ನೀಡಲಾಗಿತ್ತು. ಶೇ 40ರಷ್ಟು ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಜೂನ್ ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳಬಹುದು’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಎಇಇ ಕೆ.ಎಸ್. ಕಮ್ಮಾರ ತಿಳಿಸಿದರು.</p>.<p>‘ಹಳೆಯ ತ್ಯಾಜ್ಯಗಳು ಮಣ್ಣಿನೊಂದಿಗೆ ಸೇರಿ ಗುಡ್ಡದಂತೆ ಕಾಣುತ್ತಿವೆ. ಅವುಗಳನ್ನು ತೆರವುಗೊಳಿಸಿ, ಯಂತ್ರೋಪಕರಣಗಳನ್ನು ಬಳಸಿ ಮೂರು ವಿಧವಾಗಿ ವಿಂಗಡಿಸಲಾಗುತ್ತಿದೆ. ಕರಗದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಸಿಮೆಂಟ್ ಕಾರ್ಖಾನೆಗೆ ರವಾನೆ ಮಾಡಲಾಗುತ್ತದೆ. ಕರಗಬಹುದಾದ ಕಸಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಹಸಿ ಕಸ ಬೆರೆತುಕೊಂಡಿರುವ ಮಣ್ಣು ಸಂಸ್ಕರಿಸಿ ಗೊಬ್ಬರವಾಗಿ ತಯಾರಿಸಲಾಗುವುದು. ಹೀಗೆ ಮೂರು ಹಂತದಲ್ಲಿ ವಿಂಗಡಿಸಿ, ವಿಲೇವಾರಿಗೊಳಿಸುವ ಕೆಲಸ ಸಂಪೂರ್ಣ ವೈಜ್ಞಾನಿಕ ಪ್ರಕ್ರಿಯೆಗಳಿಂದ ನಡೆಯುತ್ತಿದೆ’ ಎಂದು ವಿವರಿಸಿದರು.</p>.<h2>5 ಕಡೆ ಸುಧಾರಿತ ತಂತ್ರಜ್ಞಾನ</h2><p>‘ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹಳೆಯ ತ್ಯಾಜ್ಯಗಳ ದಾಸ್ತಾನು ಇದೆ. ಶಿರಸಿ, ಕಾರವಾರ, ಭಟ್ಕಳ, ಯಲ್ಲಾಪುರ ಮತ್ತು ಹೊನ್ನಾವರದಲ್ಲಿ ವ್ಯಾಪಕ ಪ್ರಮಾಣದ ತ್ಯಾಜ್ಯಗಳು ಉಳಿದುಕೊಂಡಿವೆ. ಅವುಗಳನ್ನು ವಿಲೇವಾರಿಗೊಳಿಸಲು ಸುಧಾರಿತ ತಂತ್ರಜ್ಞಾನ ಅಗತ್ಯವಿದ್ದ ಕಾರಣಕ್ಕೆ ಹೆಚ್ಚು ವೆಚ್ಚ ತಗಲುತ್ತಿದೆ. ತ್ಯಾಜ್ಯಗಳ ವಿಂಗಡಣೆಗೆ ಅತ್ಯಾಧುನಿಕ ಯಂತ್ರೋಪಕರಣ ಬಳಕೆ ಮಡಲಾಗುತ್ತಿದೆ. ಈ ಯಂತ್ರವು ಪ್ರತಿ ಗಂಟೆಗೆ ಸರಾಸರಿ 100 ಟನ್ ಕಸ ವಿಂಗಡಣೆ ಮಾಡುತ್ತಿದೆ’ ಎಂದು ನಗರಾಭಿವೃದ್ಧಿ ಕೋಶದ ಕಾರ್ತೀಕ ನಾಯ್ಕ ತಿಳಿಸಿದರು.</p>.<div><blockquote>ಮೊದಲ ಹಂತದಲ್ಲಿನ 1.46 ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಬೆನ್ನಲ್ಲೇ ಕಾರವಾರ ಮತ್ತು ಹೊನ್ನಾವರದಲ್ಲಿ 95 ಸಾವಿರ ಟನ್ ತ್ಯಾಜ್ಯ ವಿಲೇವಾರಿಗೊಳಿಸುವ ಪ್ರಕ್ರಿಯೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ </blockquote><span class="attribution">ಕೆ.ಎಸ್.ಕಮ್ಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260402-20-183139863</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>