<p><strong>ಕಾರವಾರ:</strong> ಕೃಷಿ ಚಟುವಟಿಕೆ ಯೊಂದಿಗೆ ಪಶುಸಂಗೋಪನೆಯೂ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ರೈತರು ಪರದಾಡಬೇಕಿದೆ. ಗ್ರಾಮೀಣ ಭಾಗದ ಪಶು ಚಿಕಿತ್ಸಾಲಯಗಳ ಪೈಕಿ ಬಹುತೇಕ ವರ್ಷವಿಡೀ ಮುಚ್ಚಿಕೊಂಡೇ ಇರುವ ಸ್ಥಿತಿ ಎದುರಾಗಿದೆ ಎಂಬುದು ಜನರ ದೂರು.</p>.<p>20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 4.10 ಲಕ್ಷದಷ್ಟು ಜಾನುವಾರುಗಳು, 18 ಸಾವಿರದಷ್ಟು ಮೇಕೆಗಳು, 75 ಸಾವಿರಕ್ಕೂ ಹೆಚ್ಚು ಸಾಕುನಾಯಿಗಳಿವೆ. ಗ್ರಾಮೀಣ ಪ್ರದೇಶದಲ್ಲೇ ಬಹುಪಾಲು ಜಾನುವಾರುಗಳಿವೆ. ಗ್ರಾಮೀಣ ಪ್ರದೇಶದಲ್ಲಿನ ಹೈನುಗಾರರು ಪಶು ಚಿಕಿತ್ಸಾಲಯ ಅವಲಂಭಿಸಿಕೊಂಡಿದ್ದಾರೆ.</p>.<p>ಆದರೆ, 86 ಪಶು ಆಸ್ಪತ್ರೆ 47 ಪಶು ಚಿಕಿತ್ಸಾಲಯ, 11 ಸಂಚಾರಿ ಪಶು ಚಿಕಿತ್ಸಾಲಯಗಳಿಂದ ಕೇವಲ 32 ಮಂದಿ ಪಶು ವೈದ್ಯರಿದ್ದಾರೆ. ಅವರಲ್ಲಿ 11 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು. ಪಶು ವೈದ್ಯರಿಗೆ ಪೂರಕವಾಗಿ ಕೆಲಸ ಮಾಡಲು ಬೇಕಿರುವ ಪಶು ನಿರೀಕ್ಷಕರ ಹುದ್ದೆಯೂ ಶೇ 70ರಷ್ಟು ಖಾಲಿ ಇದೆ ಎಂಬುದಾಗಿ ಪಶು ಸಂಗೋಪನೆ ಇಲಾಖೆ ಮಾಹಿತಿ ಹೇಳುತ್ತಿದೆ.</p>.<p>‘ರಾಜ್ಯದ ಗಡಿಭಾಗದಲ್ಲಿರುವುದು ಒಂದೆಯಾದರೆ, ಇನ್ನೊಂದೆಡೆ ಮಹಾನಗರಗಳಿಂದ ದೂರವಿರುವ ಕಾರಣಕ್ಕೆ ಪಶು ವೈದ್ಯರು ಉತ್ತರ ಕನ್ನಡಕ್ಕೆ ಬರಲು ಹಿಂದೇಟು ಹಾಕುತ್ತಾರೆ. ನೇಮಕಾತಿ ಆದೇಶವಾಗಿ, ಈ ಜಿಲ್ಲೆಗೆ ನೇಮಕಗೊಂಡ ನೂತನ ಪಶು ವೈದ್ಯರು ಹುದ್ದೆ ವಹಿಸಿಕೊಳ್ಳದೆ ದೂರ ಸರಿದ ಉದಾಹರಣೆ ಇದೆ. ಇಲ್ಲಿಗೆ ವರ್ಗಾವಣೆಗೊಂಡ ಕೆಲವರು ರಾಜಕೀಯ ಪ್ರಭಾವ ಬಳಸಿಕೊಂಡು ಬೇರೆ ಜಿಲ್ಲೆಗೆ ವರ್ಗಾವಣೆ ಆದೇಶ ಪಡೆದಿದ್ದೂ ಇದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಇಲಾಖೆಗೆ 619 ಹುದ್ದೆ ಮಂಜೂರಾತಿ ಇದೆ. ಆದರೆ, ಕೇವಲ ಶೇ 10ರಷ್ಟು ಮಂದಿ ಕಾಯಂ ಸಿಬ್ಬಂದಿ ಇಲ್ಲ. 133 ಪಶು ವೈದ್ಯರ ಹುದ್ದೆ ಮಂಜೂರಾತಿ ಇದ್ದರೂ ಕೇವಲ 21 ಮಂದಿ ಕಾಯಂ ವೈದ್ಯರಿದ್ದಾರೆ. 215 ಪಶು ನಿರೀಕ್ಷಕ ಹುದ್ದೆ ಮಂಜೂರಾತಿ ಇದ್ದರೂ 69 ಮಂದಿ ಕೆಲಸ ಮಾಡುತ್ತಿದ್ದಾರೆ’ ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಮೋಹನ ಕುಮಾರ್ ಪ್ರತಿಕ್ರಿಯಿಸಿದರು.</p>.<p>‘ಗ್ರಾಮೀಣ ಭಾಗದ ಪಶು ಚಿಕಿತ್ಸಾಲಯಗಳಲ್ಲಿ ‘ಡಿ’ ದರ್ಜೆಯ ಸಿಬ್ಬಂದಿಯಷ್ಟೇ ಇರುತ್ತಿದ್ದಾರೆ. ಜನರಿಂದ ಬಂದ ಮಾಹಿತಿ ಆಧರಿಸಿ ಅವರು ವೈದ್ಯರಿಗೆ ಮಾಹಿತಿ ನೀಡುತ್ತಾರೆ. ಸಮೀಪದ ಆಸ್ಪತ್ರೆಯ ವೈದ್ಯರಿಗೆ ನಿಯೋಜನೆ ಮಾಡುತ್ತಿದ್ದು, ಅವರು ಪರಿಸ್ಥಿತಿ ನಿಭಾಯಿಸುತ್ತಾರೆ. ಜನರಿಗೆ ತೊಂದರೆಯಾಗದಂತೆ ಸೀಮಿತ ಸಿಬ್ಬಂದಿ ಇದ್ದರೂ ನಿರ್ವಹಣೆ ಮಾಡುತ್ತಿದ್ದೇವೆ’ ಎಂದರು.</p>.<div><blockquote>ಪಶು ವೈದ್ಯರಿಲ್ಲದೆ ಒಬ್ಬೊಬ್ಬ ವೈದ್ಯರಿಗೆ 3–4 ಪಶು ಆಸ್ಪತ್ರೆ ಜವಾಬ್ದಾರಿ ನೀಡಲಾಗುತ್ತಿದೆ. ಈಗಿರುವ ಕಾಯಂ ಸಿಬ್ಬಂದಿಯೂ ನಿವೃತ್ತಿಯಾದರೆ ಸಮಸ್ಯೆ ಬಿಗಡಾಯಿಸಬಹುದು</blockquote><span class="attribution"> ಡಾ. ಮೋಹನ ಕುಮಾರ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ</span></div>.<h2>ವೈದ್ಯರಿಗೆ ‘ಕುಗ್ರಾಮ’ದ ಭಯ</h2><h2></h2><p>‘ಉತ್ತರ ಕನ್ನಡ ಜಿಲ್ಲೆಯ ಗ್ರಾಮಿಣ ಪ್ರದೇಶಗಳಲ್ಲಿ ಹಸು, ಎಮ್ಮೆಗಳ ಚಿಕಿತ್ಸೆಗೆ ಮನೆ ಬಾಗಿಲಿಗೆ ಸಾಗುವ ಅನಿವಾರ್ಯತೆ ಇದೆ. ಅನಾರೋಗ್ಯಕ್ಕೆ ಜಾನುವಾರು ತುತ್ತಾದರೆ ವೈದ್ಯರನ್ನು ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲು ಜನರು ಮನವಿ ಮಾಡುತ್ತಾರೆ. ವಾಹನ ಸಾಗಲಾಗದ, ಸರಿಯಾದ ರಸ್ತೆಯೇ ಇಲ್ಲದ ಕುಗ್ರಾಮಗಳಿಗೂ ಪಶು ವೈದ್ಯರು ಹೋಗಬೇಕಾಗುತ್ತದೆ. ಇಂತಹ ಸ್ಥಿತಿಯಿಂದಲೂ ಈ ಜಿಲ್ಲೆಗೆ ಬರಲು ಪಶು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಿರಿಯ ಪಶು ವೈದ್ಯಾಧಿಕಾರಿಯೊಬ್ಬರು ಹೇಳಿದರು.</p><p>‘ಮನೆ ಬಾಗಿಲಿಗೆ ಭೇಟಿ ನೀಡಲು ಸಂಚಾರಿ ಪಶು ಚಿಕಿತ್ಸಾಲಯಗಳಿಂದ ತಕ್ಕಮಟ್ಟಿಗೆ ಸಮಸ್ಯೆ ನಿಭಾಯಿಸಬಹುದಿತ್ತು. ಆದರೆ, ವಾಹನಗಳಿಲ್ಲದೆ ಜೊಯಿಡಾ, ಹಳಿಯಾಳ, ಯಲ್ಲಾಪುರದಲ್ಲಿ ಈ ಸೌಲಭ್ಯ ನಿಂತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಕೃಷಿ ಚಟುವಟಿಕೆ ಯೊಂದಿಗೆ ಪಶುಸಂಗೋಪನೆಯೂ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ರೈತರು ಪರದಾಡಬೇಕಿದೆ. ಗ್ರಾಮೀಣ ಭಾಗದ ಪಶು ಚಿಕಿತ್ಸಾಲಯಗಳ ಪೈಕಿ ಬಹುತೇಕ ವರ್ಷವಿಡೀ ಮುಚ್ಚಿಕೊಂಡೇ ಇರುವ ಸ್ಥಿತಿ ಎದುರಾಗಿದೆ ಎಂಬುದು ಜನರ ದೂರು.</p>.<p>20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 4.10 ಲಕ್ಷದಷ್ಟು ಜಾನುವಾರುಗಳು, 18 ಸಾವಿರದಷ್ಟು ಮೇಕೆಗಳು, 75 ಸಾವಿರಕ್ಕೂ ಹೆಚ್ಚು ಸಾಕುನಾಯಿಗಳಿವೆ. ಗ್ರಾಮೀಣ ಪ್ರದೇಶದಲ್ಲೇ ಬಹುಪಾಲು ಜಾನುವಾರುಗಳಿವೆ. ಗ್ರಾಮೀಣ ಪ್ರದೇಶದಲ್ಲಿನ ಹೈನುಗಾರರು ಪಶು ಚಿಕಿತ್ಸಾಲಯ ಅವಲಂಭಿಸಿಕೊಂಡಿದ್ದಾರೆ.</p>.<p>ಆದರೆ, 86 ಪಶು ಆಸ್ಪತ್ರೆ 47 ಪಶು ಚಿಕಿತ್ಸಾಲಯ, 11 ಸಂಚಾರಿ ಪಶು ಚಿಕಿತ್ಸಾಲಯಗಳಿಂದ ಕೇವಲ 32 ಮಂದಿ ಪಶು ವೈದ್ಯರಿದ್ದಾರೆ. ಅವರಲ್ಲಿ 11 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು. ಪಶು ವೈದ್ಯರಿಗೆ ಪೂರಕವಾಗಿ ಕೆಲಸ ಮಾಡಲು ಬೇಕಿರುವ ಪಶು ನಿರೀಕ್ಷಕರ ಹುದ್ದೆಯೂ ಶೇ 70ರಷ್ಟು ಖಾಲಿ ಇದೆ ಎಂಬುದಾಗಿ ಪಶು ಸಂಗೋಪನೆ ಇಲಾಖೆ ಮಾಹಿತಿ ಹೇಳುತ್ತಿದೆ.</p>.<p>‘ರಾಜ್ಯದ ಗಡಿಭಾಗದಲ್ಲಿರುವುದು ಒಂದೆಯಾದರೆ, ಇನ್ನೊಂದೆಡೆ ಮಹಾನಗರಗಳಿಂದ ದೂರವಿರುವ ಕಾರಣಕ್ಕೆ ಪಶು ವೈದ್ಯರು ಉತ್ತರ ಕನ್ನಡಕ್ಕೆ ಬರಲು ಹಿಂದೇಟು ಹಾಕುತ್ತಾರೆ. ನೇಮಕಾತಿ ಆದೇಶವಾಗಿ, ಈ ಜಿಲ್ಲೆಗೆ ನೇಮಕಗೊಂಡ ನೂತನ ಪಶು ವೈದ್ಯರು ಹುದ್ದೆ ವಹಿಸಿಕೊಳ್ಳದೆ ದೂರ ಸರಿದ ಉದಾಹರಣೆ ಇದೆ. ಇಲ್ಲಿಗೆ ವರ್ಗಾವಣೆಗೊಂಡ ಕೆಲವರು ರಾಜಕೀಯ ಪ್ರಭಾವ ಬಳಸಿಕೊಂಡು ಬೇರೆ ಜಿಲ್ಲೆಗೆ ವರ್ಗಾವಣೆ ಆದೇಶ ಪಡೆದಿದ್ದೂ ಇದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಇಲಾಖೆಗೆ 619 ಹುದ್ದೆ ಮಂಜೂರಾತಿ ಇದೆ. ಆದರೆ, ಕೇವಲ ಶೇ 10ರಷ್ಟು ಮಂದಿ ಕಾಯಂ ಸಿಬ್ಬಂದಿ ಇಲ್ಲ. 133 ಪಶು ವೈದ್ಯರ ಹುದ್ದೆ ಮಂಜೂರಾತಿ ಇದ್ದರೂ ಕೇವಲ 21 ಮಂದಿ ಕಾಯಂ ವೈದ್ಯರಿದ್ದಾರೆ. 215 ಪಶು ನಿರೀಕ್ಷಕ ಹುದ್ದೆ ಮಂಜೂರಾತಿ ಇದ್ದರೂ 69 ಮಂದಿ ಕೆಲಸ ಮಾಡುತ್ತಿದ್ದಾರೆ’ ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಮೋಹನ ಕುಮಾರ್ ಪ್ರತಿಕ್ರಿಯಿಸಿದರು.</p>.<p>‘ಗ್ರಾಮೀಣ ಭಾಗದ ಪಶು ಚಿಕಿತ್ಸಾಲಯಗಳಲ್ಲಿ ‘ಡಿ’ ದರ್ಜೆಯ ಸಿಬ್ಬಂದಿಯಷ್ಟೇ ಇರುತ್ತಿದ್ದಾರೆ. ಜನರಿಂದ ಬಂದ ಮಾಹಿತಿ ಆಧರಿಸಿ ಅವರು ವೈದ್ಯರಿಗೆ ಮಾಹಿತಿ ನೀಡುತ್ತಾರೆ. ಸಮೀಪದ ಆಸ್ಪತ್ರೆಯ ವೈದ್ಯರಿಗೆ ನಿಯೋಜನೆ ಮಾಡುತ್ತಿದ್ದು, ಅವರು ಪರಿಸ್ಥಿತಿ ನಿಭಾಯಿಸುತ್ತಾರೆ. ಜನರಿಗೆ ತೊಂದರೆಯಾಗದಂತೆ ಸೀಮಿತ ಸಿಬ್ಬಂದಿ ಇದ್ದರೂ ನಿರ್ವಹಣೆ ಮಾಡುತ್ತಿದ್ದೇವೆ’ ಎಂದರು.</p>.<div><blockquote>ಪಶು ವೈದ್ಯರಿಲ್ಲದೆ ಒಬ್ಬೊಬ್ಬ ವೈದ್ಯರಿಗೆ 3–4 ಪಶು ಆಸ್ಪತ್ರೆ ಜವಾಬ್ದಾರಿ ನೀಡಲಾಗುತ್ತಿದೆ. ಈಗಿರುವ ಕಾಯಂ ಸಿಬ್ಬಂದಿಯೂ ನಿವೃತ್ತಿಯಾದರೆ ಸಮಸ್ಯೆ ಬಿಗಡಾಯಿಸಬಹುದು</blockquote><span class="attribution"> ಡಾ. ಮೋಹನ ಕುಮಾರ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ</span></div>.<h2>ವೈದ್ಯರಿಗೆ ‘ಕುಗ್ರಾಮ’ದ ಭಯ</h2><h2></h2><p>‘ಉತ್ತರ ಕನ್ನಡ ಜಿಲ್ಲೆಯ ಗ್ರಾಮಿಣ ಪ್ರದೇಶಗಳಲ್ಲಿ ಹಸು, ಎಮ್ಮೆಗಳ ಚಿಕಿತ್ಸೆಗೆ ಮನೆ ಬಾಗಿಲಿಗೆ ಸಾಗುವ ಅನಿವಾರ್ಯತೆ ಇದೆ. ಅನಾರೋಗ್ಯಕ್ಕೆ ಜಾನುವಾರು ತುತ್ತಾದರೆ ವೈದ್ಯರನ್ನು ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲು ಜನರು ಮನವಿ ಮಾಡುತ್ತಾರೆ. ವಾಹನ ಸಾಗಲಾಗದ, ಸರಿಯಾದ ರಸ್ತೆಯೇ ಇಲ್ಲದ ಕುಗ್ರಾಮಗಳಿಗೂ ಪಶು ವೈದ್ಯರು ಹೋಗಬೇಕಾಗುತ್ತದೆ. ಇಂತಹ ಸ್ಥಿತಿಯಿಂದಲೂ ಈ ಜಿಲ್ಲೆಗೆ ಬರಲು ಪಶು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಿರಿಯ ಪಶು ವೈದ್ಯಾಧಿಕಾರಿಯೊಬ್ಬರು ಹೇಳಿದರು.</p><p>‘ಮನೆ ಬಾಗಿಲಿಗೆ ಭೇಟಿ ನೀಡಲು ಸಂಚಾರಿ ಪಶು ಚಿಕಿತ್ಸಾಲಯಗಳಿಂದ ತಕ್ಕಮಟ್ಟಿಗೆ ಸಮಸ್ಯೆ ನಿಭಾಯಿಸಬಹುದಿತ್ತು. ಆದರೆ, ವಾಹನಗಳಿಲ್ಲದೆ ಜೊಯಿಡಾ, ಹಳಿಯಾಳ, ಯಲ್ಲಾಪುರದಲ್ಲಿ ಈ ಸೌಲಭ್ಯ ನಿಂತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>