<p>ಕುಮಟಾ: ಜರ್ಮನಿಯ ಕಾನ್ಸುಲೇಟ್ ಜನರಲ್ ಫೆಡರಲ್ ರಿಪಬ್ಲಿಕ್ ಸಂಸ್ಥೆ ಹಾಗೂ ಶಿರಸಿಯ ಸ್ಕೊಡ್ವೆಸ್ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ತಾಲ್ಲೂಕಿನ ಕಾಗಾಲದಲ್ಲಿ ಪ್ರಗತಿಪರ ಭತ್ತ ಕೃಷಿಕ ನಾಗರಾಜ ನಾಯ್ಕ ಸ್ಥಾಪಿಸಿರುವ ಸಮುದಾಯ ಬೀಜ ಬ್ಯಾಂಕ್ ಮಾರ್ಚ್ 25ರಂದು ಉದ್ಘಾಟನೆಗೊಳ್ಳಲಿದೆ.</p>.<p>‘ದೇಸಿ ಭತ್ತದ ತಳಿ ಬೀಜಗಳು ವಿದ್ಯಾರ್ಥಿಗಳಿಗೆ, ರೈತರಿಗೆ ಸಿಗುವಂಥ ಸಮುದಾಯ ಬ್ಯಾಂಕ್ ಸ್ಥಾಪಿಸುವ ಕನಸು ನನಸಾಗುತ್ತಿದೆ. ಯಾವ ಕಾಲಕ್ಕೂ ಹಾಳಾಗದಂತೆ 600ಕ್ಕೂ ಹೆಚ್ಚು ತಳಿ ಭತ್ತದ ಬೀಜಗಳನ್ನು ಅಕ್ರಾಲಿಕ್ ಗಾಜಿನ ಬುರುಡೆಯೊಳಗೆ ಶೇಖರಿಸಿಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ನಾಗರಾಜ ನಾಯ್ಕ ತಿಳಿಸಿದ್ದಾರೆ.</p>.<p>‘ಸುಮಾರು ₹15 ಲಕ್ಷ ವೆಚ್ಚದಲ್ಲಿ ಬೀಜಬ್ಯಾಂಕ್ ನಿರ್ಮಾಣಗೊಂಡಿದ್ದು, ಜರ್ಮನಿಯ ಕಾನ್ಸುಲೇಟ್ ಜನರಲ್ ಫೆಡರಲ್ ರಿಪಬ್ಲಿಕ್ ಸಂಸ್ಥೆ ಶೇ 80 ಹಾಗೂ ಸ್ಕೊಡ್ವೆಸ್ ಸಂಸ್ಥೆ ಶೇ 20ರಷ್ಟು ವೆಚ್ಚ ಭರಿಸುತ್ತಿದೆ’ ಎಂದು ಸ್ಕೊಡ್ವೆಸ್ ಸಂಸ್ಥೆಯ ಕೃಷಿ ವಿಭಾಗ ಮುಖ್ಯಸ್ಥ ಪ್ರಶಾಂತ ನಾಯ್ಕ ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-20-784694914</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಮಟಾ: ಜರ್ಮನಿಯ ಕಾನ್ಸುಲೇಟ್ ಜನರಲ್ ಫೆಡರಲ್ ರಿಪಬ್ಲಿಕ್ ಸಂಸ್ಥೆ ಹಾಗೂ ಶಿರಸಿಯ ಸ್ಕೊಡ್ವೆಸ್ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ತಾಲ್ಲೂಕಿನ ಕಾಗಾಲದಲ್ಲಿ ಪ್ರಗತಿಪರ ಭತ್ತ ಕೃಷಿಕ ನಾಗರಾಜ ನಾಯ್ಕ ಸ್ಥಾಪಿಸಿರುವ ಸಮುದಾಯ ಬೀಜ ಬ್ಯಾಂಕ್ ಮಾರ್ಚ್ 25ರಂದು ಉದ್ಘಾಟನೆಗೊಳ್ಳಲಿದೆ.</p>.<p>‘ದೇಸಿ ಭತ್ತದ ತಳಿ ಬೀಜಗಳು ವಿದ್ಯಾರ್ಥಿಗಳಿಗೆ, ರೈತರಿಗೆ ಸಿಗುವಂಥ ಸಮುದಾಯ ಬ್ಯಾಂಕ್ ಸ್ಥಾಪಿಸುವ ಕನಸು ನನಸಾಗುತ್ತಿದೆ. ಯಾವ ಕಾಲಕ್ಕೂ ಹಾಳಾಗದಂತೆ 600ಕ್ಕೂ ಹೆಚ್ಚು ತಳಿ ಭತ್ತದ ಬೀಜಗಳನ್ನು ಅಕ್ರಾಲಿಕ್ ಗಾಜಿನ ಬುರುಡೆಯೊಳಗೆ ಶೇಖರಿಸಿಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ನಾಗರಾಜ ನಾಯ್ಕ ತಿಳಿಸಿದ್ದಾರೆ.</p>.<p>‘ಸುಮಾರು ₹15 ಲಕ್ಷ ವೆಚ್ಚದಲ್ಲಿ ಬೀಜಬ್ಯಾಂಕ್ ನಿರ್ಮಾಣಗೊಂಡಿದ್ದು, ಜರ್ಮನಿಯ ಕಾನ್ಸುಲೇಟ್ ಜನರಲ್ ಫೆಡರಲ್ ರಿಪಬ್ಲಿಕ್ ಸಂಸ್ಥೆ ಶೇ 80 ಹಾಗೂ ಸ್ಕೊಡ್ವೆಸ್ ಸಂಸ್ಥೆ ಶೇ 20ರಷ್ಟು ವೆಚ್ಚ ಭರಿಸುತ್ತಿದೆ’ ಎಂದು ಸ್ಕೊಡ್ವೆಸ್ ಸಂಸ್ಥೆಯ ಕೃಷಿ ವಿಭಾಗ ಮುಖ್ಯಸ್ಥ ಪ್ರಶಾಂತ ನಾಯ್ಕ ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-20-784694914</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>