ಯಲ್ಲಾಪುರ: ತಾಲ್ಲೂಕಿನ ಸಾವಗದ್ದೆ ಸಮೀಪ ಬುಧವಾರ ಹೆಣ್ಣು ಚಿರತೆಯೊಂದರ ಮೃತ ದೇಹ ದೊರೆತಿದೆ.
ಆನಗೊಡದಿಂದ ಸಾವಗದ್ದೆಗೆ ಸಾಗುವ ಮಾರ್ಗದ ಅರಣ್ಯ ಪ್ರದೇಶದಲ್ಲಿ ಚಿರತೆ ಮೃತದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾವುದೇ ಸಂಶಯ ಕಂಡುಬಂದಿಲ್ಲ. ವಯೋಸಹಜ ಕಾಯಿಲೆಯಿಂದ ಚಿರತೆ ಮೃತಪಟ್ಟಿದ್ದಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ’ ಎಂದು ಡಿಸಿಎಫ್ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.