ಜೊಯಿಡಾ ಕಡೆಯಿಂದ ಕಾರವಾರದತ್ತ ಬರುತ್ತಿದ್ದ ಲಾರಿಯು, ಕದ್ರಾದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮಂಗಳವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ತಿರುವಿನಲ್ಲಿ ಅಡ್ಡಲಾಗಿ ನಿಂತಿದೆ. ಬುಧವಾರ ಬೆಳಿಗ್ಗೆ ಕಾರವಾರದಿಂದ ಬೆಳಗಾವಿ, ದಾಂಡೇಲಿ ಮುಂತಾದೆಡೆಗೆ ಹೊರಟ ಬಸ್ಗಳು ಮುಂದೆ ಸಾಗಲಾಗದೇ ಹಿಂದಿರುಗಿವೆ. ಕೆಲವು ವಾಹನಗಳು ಕಾರವಾರ- ಅಂಕೋಲಾ- ಯಲ್ಲಾಪುರ ಮೂಲಕ ಸಾಗಿವೆ.