ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದಕ್ಕೆ ವಿರೋಧ ಯಾಕೆ ವ್ಯಕ್ತವಾಯಿತು ಎಂದು ಗೊತ್ತಿಲ್ಲ. ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳು, 830 ಕ್ರೈಸ್ ಶಾಲೆಗಳು ಮತ್ತು ಬೇರೆ ಬೇರೆ ವಸತಿ ನಿಲಯಗಳಿಗೆ ಈಗ ರಜೆಯಿದೆ. ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಸೇವೆ ಯೋಜನೆಯ ಕಾರ್ಯಕ್ರಮ, ದೇಶಭಕ್ತಿಗೀತೆ, ವಂದೇ ಮಾತರಂ, ಸಂಗೀತ ಪಾಠ ಅಥವಾ ದೇಶ ಮೊದಲು ಎಂದು ಹೇಳುವ ಯಾವುದೇ ಕಾರ್ಯಕ್ರಮ ಮಾಡುತ್ತಿದ್ದರೂ ಅನುಮತಿ ಕೊಡುವ ಪರಿಪಾಠವಿದೆ. ಆದರೆ, ನಿಷೇಧಿತ ಸಂಸ್ಥೆಗಳು ಮತ್ತು ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ’ ಎಂದರು.