<p><strong>ಮುಂಡಗೋಡ:</strong> ಹಲವು ದಶಕಗಳ ಬೇಡಿಕೆಯಾಗಿದ್ದ ಸಾರಿಗೆ ಬಸ್ ಘಟಕ, ತಾಲ್ಲೂಕಿನಲ್ಲಿ ಕಾರ್ಯಾರಂಭಿಸಿ, ವರ್ಷ ಕಳೆಯುತ್ತ ಬಂದಿದೆ. ತಾಂತ್ರಿಕ ಕಾರಣದಿಂದ ಎರಡೆರಡು ಬಾರಿ ಉದ್ಘಾಟನೆಗೊಂಡ ಇಲ್ಲಿನ ಬಸ್ ಘಟಕದಲ್ಲಿ ಸದ್ಯ 22 ಬಸ್ಗಳು ವಿವಿಧ ಮಾರ್ಗದಲ್ಲಿ ಸಂಚರಿಸುತ್ತ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ.</p>.<p>ಆದರೆ, ತಾಲ್ಲೂಕಿನ ಗ್ರಾಮೀಣ ಸಾರಿಗೆ ಸಮಸ್ಯೆ ಬಗೆಹರಿಸುವ ಸಲುವಾಗಿ ಮಾರ್ಗಗಳ ಸಂಖ್ಯೆ ಹೆಚ್ಚಿಸಬೇಕು. ಅದರಲ್ಲಿಯೂ ಹೆಚ್ಚು ವಿದ್ಯಾರ್ಥಿಗಳು, ಪ್ರಯಾಣಿಕರು ಸಂಚರಿಸುವ ಮಾರ್ಗಗಳಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಹಿಂದಿನಿಂದಲೂ ಅಧಿಕಾರಿಗಳ ಮುಂದಿಡಲಾಗುತ್ತಿದೆ. ಈವರೆಗೂ ಬೇಡಿಕೆ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ ಎಂಬುದು ಜನರ ಅಸಮಾಧಾನ.</p>.<p>ಬಸ್ ಘಟಕ ಕಾರ್ಯಾರಂಭ ಮಾಡಿದ ನಂತರವೂ, ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಬಸ್ಗಾಗಿ ಪ್ರತಿಭಟಿಸಿದ ಘಟನೆಗಳು ಜರುಗಿದ್ದವು. ಸದ್ಯ ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳ ಸಮಸ್ಯೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.</p>.<p>‘ನಿತ್ಯ ಹುಬ್ಬಳ್ಳಿಗೆ ಇಲ್ಲಿಂದ ಸಂಚರಿಸುವ ಹಲವು ಪ್ರಯಾಣಿಕರಿಗೆ ಈ ಘಟಕದಿಂದ ಹೊಸದಾಗಿ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ, ತಿಂಗಳಿಗೆ ಒಮ್ಮೆಯಾದರೂ ಬಸ್ ಗಾಗಿ ಮನವಿ ನೀಡುವುದು, ಪ್ರತಿಭಟಿಸುವ ಕೆಲಸ ನಿಂತಿದೆ. ಹೆಚ್ಚುವರಿಯಾಗಿ ಅರ್ಧ ಗಂಟೆ ಹಿಂದೆಮುಂದೆಯಾಗಿ ಮತ್ತೊಂದು ಬಸ್ ಈ ಮಾರ್ಗದಲ್ಲಿ ಸಂಚರಿಸಿದರೆ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎನ್ನುತ್ತಾರೆ ಖಾಸಗಿ ಉದ್ಯೋಗಿ ಮಂಜುನಾಥ ಹುಲಸ್ವಾರ.</p>.<p>‘ಇಲ್ಲಿನ ಘಟಕದಿಂದ ಪ್ರತಿದಿನ ಸಂಜೆ ಬೆಂಗಳೂರು ಮಾರ್ಗದಲ್ಲಿ ಬಸ್ ಓಡಿಸಬೇಕು. ಯಲ್ಲಾಪುರದಿಂದ ರಾತ್ರಿ ಬರುವ ಬಸ್ಗೆ ನಿರ್ದಿಷ್ಟ ಸಮಯ ಇಲ್ಲದಂತಾಗಿದೆ. ಅಲ್ಲದೇ, ಮೈಸೂರು, ಶಿವಮೊಗ್ಗ, ಮಂಗಳೂರಿಗೆ ಈ ಘಟಕದಿಂದ ಹೊಸದಾಗಿ ಬಸ್ ಸಂಚಾರ ಆರಂಭಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ಆಗ್ರಹಿಸಿದರು.</p>.<p>‘ಸಾರಿಗೆ ಘಟಕಕ್ಕೆ ಮತ್ತಷ್ಟು ಹೊಸ ಬಸ್ಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು. ಬೆಂಗಳೂರು, ಧರ್ಮಸ್ಥಳ, ಸವದತ್ತಿ, ಗೋವಾ ಸೇರಿದಂತೆ ದೂರ ಪ್ರಯಾಣ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಹೊಸದಾಗಿ ಬಸ್ ಸಂಚಾರ ಆರಂಭಿಸಲು ಸೂಚಿಸಿದ್ದೇನೆ. ಸಾರಿಗೆ ಸಂಸ್ಥೆಗೂ ಆದಾಯ ಬರುವಂತೆ, ಹೊಸ ಮಾರ್ಗದಲ್ಲಿ ಬಸ್ ಓಡಿಸಲಾಗುವುದು’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.</p>.<div><blockquote>ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಆಗದಂತೆ, ಬಸ್ ಓಡಿಸಲು ಘಟಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ </blockquote><span class="attribution">ಶಿವರಾಮ ಹೆಬ್ಬಾರ ,ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ:</strong> ಹಲವು ದಶಕಗಳ ಬೇಡಿಕೆಯಾಗಿದ್ದ ಸಾರಿಗೆ ಬಸ್ ಘಟಕ, ತಾಲ್ಲೂಕಿನಲ್ಲಿ ಕಾರ್ಯಾರಂಭಿಸಿ, ವರ್ಷ ಕಳೆಯುತ್ತ ಬಂದಿದೆ. ತಾಂತ್ರಿಕ ಕಾರಣದಿಂದ ಎರಡೆರಡು ಬಾರಿ ಉದ್ಘಾಟನೆಗೊಂಡ ಇಲ್ಲಿನ ಬಸ್ ಘಟಕದಲ್ಲಿ ಸದ್ಯ 22 ಬಸ್ಗಳು ವಿವಿಧ ಮಾರ್ಗದಲ್ಲಿ ಸಂಚರಿಸುತ್ತ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ.</p>.<p>ಆದರೆ, ತಾಲ್ಲೂಕಿನ ಗ್ರಾಮೀಣ ಸಾರಿಗೆ ಸಮಸ್ಯೆ ಬಗೆಹರಿಸುವ ಸಲುವಾಗಿ ಮಾರ್ಗಗಳ ಸಂಖ್ಯೆ ಹೆಚ್ಚಿಸಬೇಕು. ಅದರಲ್ಲಿಯೂ ಹೆಚ್ಚು ವಿದ್ಯಾರ್ಥಿಗಳು, ಪ್ರಯಾಣಿಕರು ಸಂಚರಿಸುವ ಮಾರ್ಗಗಳಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಹಿಂದಿನಿಂದಲೂ ಅಧಿಕಾರಿಗಳ ಮುಂದಿಡಲಾಗುತ್ತಿದೆ. ಈವರೆಗೂ ಬೇಡಿಕೆ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ ಎಂಬುದು ಜನರ ಅಸಮಾಧಾನ.</p>.<p>ಬಸ್ ಘಟಕ ಕಾರ್ಯಾರಂಭ ಮಾಡಿದ ನಂತರವೂ, ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಬಸ್ಗಾಗಿ ಪ್ರತಿಭಟಿಸಿದ ಘಟನೆಗಳು ಜರುಗಿದ್ದವು. ಸದ್ಯ ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳ ಸಮಸ್ಯೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.</p>.<p>‘ನಿತ್ಯ ಹುಬ್ಬಳ್ಳಿಗೆ ಇಲ್ಲಿಂದ ಸಂಚರಿಸುವ ಹಲವು ಪ್ರಯಾಣಿಕರಿಗೆ ಈ ಘಟಕದಿಂದ ಹೊಸದಾಗಿ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ, ತಿಂಗಳಿಗೆ ಒಮ್ಮೆಯಾದರೂ ಬಸ್ ಗಾಗಿ ಮನವಿ ನೀಡುವುದು, ಪ್ರತಿಭಟಿಸುವ ಕೆಲಸ ನಿಂತಿದೆ. ಹೆಚ್ಚುವರಿಯಾಗಿ ಅರ್ಧ ಗಂಟೆ ಹಿಂದೆಮುಂದೆಯಾಗಿ ಮತ್ತೊಂದು ಬಸ್ ಈ ಮಾರ್ಗದಲ್ಲಿ ಸಂಚರಿಸಿದರೆ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎನ್ನುತ್ತಾರೆ ಖಾಸಗಿ ಉದ್ಯೋಗಿ ಮಂಜುನಾಥ ಹುಲಸ್ವಾರ.</p>.<p>‘ಇಲ್ಲಿನ ಘಟಕದಿಂದ ಪ್ರತಿದಿನ ಸಂಜೆ ಬೆಂಗಳೂರು ಮಾರ್ಗದಲ್ಲಿ ಬಸ್ ಓಡಿಸಬೇಕು. ಯಲ್ಲಾಪುರದಿಂದ ರಾತ್ರಿ ಬರುವ ಬಸ್ಗೆ ನಿರ್ದಿಷ್ಟ ಸಮಯ ಇಲ್ಲದಂತಾಗಿದೆ. ಅಲ್ಲದೇ, ಮೈಸೂರು, ಶಿವಮೊಗ್ಗ, ಮಂಗಳೂರಿಗೆ ಈ ಘಟಕದಿಂದ ಹೊಸದಾಗಿ ಬಸ್ ಸಂಚಾರ ಆರಂಭಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ಆಗ್ರಹಿಸಿದರು.</p>.<p>‘ಸಾರಿಗೆ ಘಟಕಕ್ಕೆ ಮತ್ತಷ್ಟು ಹೊಸ ಬಸ್ಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು. ಬೆಂಗಳೂರು, ಧರ್ಮಸ್ಥಳ, ಸವದತ್ತಿ, ಗೋವಾ ಸೇರಿದಂತೆ ದೂರ ಪ್ರಯಾಣ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಹೊಸದಾಗಿ ಬಸ್ ಸಂಚಾರ ಆರಂಭಿಸಲು ಸೂಚಿಸಿದ್ದೇನೆ. ಸಾರಿಗೆ ಸಂಸ್ಥೆಗೂ ಆದಾಯ ಬರುವಂತೆ, ಹೊಸ ಮಾರ್ಗದಲ್ಲಿ ಬಸ್ ಓಡಿಸಲಾಗುವುದು’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.</p>.<div><blockquote>ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಆಗದಂತೆ, ಬಸ್ ಓಡಿಸಲು ಘಟಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ </blockquote><span class="attribution">ಶಿವರಾಮ ಹೆಬ್ಬಾರ ,ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>