<p><strong>ಮುಂಡಗೋಡ</strong>: ಹೂವು ಬಿಡುವ ಸಮಯದಲ್ಲಿ ಬಿದ್ದ ಅಂಟು ಇಬ್ಬನಿಯು ಮಾವು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಇಳುವರಿ ಕೊರತೆ ನಡುವೆಯೂ ಕೈಗೆ ಬಂದಿರುವ ಮಾವಿನ ದರ ಇಳಿಕೆ, ವ್ಯಾಪಾರಿಗಳಿಗೆ ಕಹಿ ಅನುಭವ ನೀಡುತ್ತಿದೆ.</p>.<p>ತಾಲ್ಲೂಕಿನ ಪಾಳಾ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಆಪೂಸ್, ಪೈರಿ, ಸಿಂಧುಲಾ, ಮಲಗೋಬಾ ಸೇರಿದಂತೆ ಇನ್ನಿತರ ತಳಿಗಳ ಹಣ್ಣುಗಳನ್ನು ಈ ಭಾಗದಲ್ಲಿ ಕಾಣಬಹುದು.</p>.<p>ಒಂದು ವರ್ಷ ಅಧಿಕ ಇಳುವರಿ, ಮತ್ತೊಂದು ವರ್ಷ ಕಡಿಮೆ ಇಳುವರಿ ಸಾಮಾನ್ಯವಾಗಿದೆ. ಈ ವರ್ಷ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಇಳುವರಿ ಸಿಕ್ಕಿದೆ. ಹೊರ ಜಿಲ್ಲೆಗಳಿಂದ ತಾಲ್ಲೂಕಿನ ಮಾರುಕಟ್ಟೆಗೆ ಕಾಲಿಟ್ಟಿರುವ ಮಾವು ಸಹ ಇದಕ್ಕೆ ಕಾರಣವಾಗಿದೆ ಎಂದು ಗುತ್ತಿಗೆ ಹಿಡಿದ ಮಾವು ವ್ಯಾಪಾರಿಗಳು ಅಳಲು ತೋಡಿಕೊಂಡರು.</p>.<p>‘ಪ್ರತಿ ವರ್ಷ ಇಲ್ಲಿನ ಆಪೂಸ್ ಮಾವು, ಮುಂಬೈ ಮಾರುಕಟ್ಟೆಗೆ ಹೋಗಿ, ಅಲ್ಲಿಂದ ವಿದೇಶಕ್ಕೆ ರಫ್ತಾಗುತ್ತಿತ್ತು. ಯುದ್ಧದ ಕಾರಣ ಮಾವು ರಫ್ತಾಗುತ್ತಿಲ್ಲ. ಮುಂಬೈ ಮಾರುಕಟ್ಟೆಗೆ ಕಳುಹಿಸಿದ ಮಾವು ಕೆ.ಜಿಗೆ ₹30ರಿಂದ ₹40 ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ, ಸಾಗಾಣಿಕ ವೆಚ್ಚವೂ ಸಿಗುತ್ತಿಲ್ಲ. ವಾರ್ಷಿಕ ಗುತ್ತಿಗೆ ಹಿಡಿದವರಿಗೆ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗುತ್ತಿದೆ' ಎಂದು ವ್ಯಾಪಾರಿ ಮಹ್ಮದಜಾಫರ್ ಗೋಣೂರ ಹೇಳಿದರು.</p>.<p>‘ಈ ವರ್ಷ ಕಡಿಮೆ ಮಾವು ಇಳುವರಿಯಿಂದ ರೈತರಿಗೆ ನಷ್ಟವಾಗಿದೆ. ಕಳೆದ ವರ್ಷ ತಾಲ್ಲೂಕಿನಲ್ಲಿ ಮಾವು ಬೆಳೆಯ ವಿಮಾ ಕಂತಿನ ಹಣ ಹೆಚ್ಚಿಸಿದ್ದರಿಂದ, ಬಹುತೇಕ ಬೆಳೆಗಾರರು ವಿಮೆ ಮಾಡಿಸಲಿಲ್ಲ. ಬೇರೆ ತಾಲ್ಲೂಕುಗಳಲ್ಲಿ ಮಾವು ವಿಮಾ ಕಂತಿನ ಹಣ ಕಡಿಮೆ ಇತ್ತು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ’ ಎಂದು ಮಾವು ಬೆಳೆಗಾರ ಶಿವಜ್ಯೋತಿ ಹುದ್ಲಮನಿ ಆರೋಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-20-896843688</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ</strong>: ಹೂವು ಬಿಡುವ ಸಮಯದಲ್ಲಿ ಬಿದ್ದ ಅಂಟು ಇಬ್ಬನಿಯು ಮಾವು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಇಳುವರಿ ಕೊರತೆ ನಡುವೆಯೂ ಕೈಗೆ ಬಂದಿರುವ ಮಾವಿನ ದರ ಇಳಿಕೆ, ವ್ಯಾಪಾರಿಗಳಿಗೆ ಕಹಿ ಅನುಭವ ನೀಡುತ್ತಿದೆ.</p>.<p>ತಾಲ್ಲೂಕಿನ ಪಾಳಾ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಆಪೂಸ್, ಪೈರಿ, ಸಿಂಧುಲಾ, ಮಲಗೋಬಾ ಸೇರಿದಂತೆ ಇನ್ನಿತರ ತಳಿಗಳ ಹಣ್ಣುಗಳನ್ನು ಈ ಭಾಗದಲ್ಲಿ ಕಾಣಬಹುದು.</p>.<p>ಒಂದು ವರ್ಷ ಅಧಿಕ ಇಳುವರಿ, ಮತ್ತೊಂದು ವರ್ಷ ಕಡಿಮೆ ಇಳುವರಿ ಸಾಮಾನ್ಯವಾಗಿದೆ. ಈ ವರ್ಷ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಇಳುವರಿ ಸಿಕ್ಕಿದೆ. ಹೊರ ಜಿಲ್ಲೆಗಳಿಂದ ತಾಲ್ಲೂಕಿನ ಮಾರುಕಟ್ಟೆಗೆ ಕಾಲಿಟ್ಟಿರುವ ಮಾವು ಸಹ ಇದಕ್ಕೆ ಕಾರಣವಾಗಿದೆ ಎಂದು ಗುತ್ತಿಗೆ ಹಿಡಿದ ಮಾವು ವ್ಯಾಪಾರಿಗಳು ಅಳಲು ತೋಡಿಕೊಂಡರು.</p>.<p>‘ಪ್ರತಿ ವರ್ಷ ಇಲ್ಲಿನ ಆಪೂಸ್ ಮಾವು, ಮುಂಬೈ ಮಾರುಕಟ್ಟೆಗೆ ಹೋಗಿ, ಅಲ್ಲಿಂದ ವಿದೇಶಕ್ಕೆ ರಫ್ತಾಗುತ್ತಿತ್ತು. ಯುದ್ಧದ ಕಾರಣ ಮಾವು ರಫ್ತಾಗುತ್ತಿಲ್ಲ. ಮುಂಬೈ ಮಾರುಕಟ್ಟೆಗೆ ಕಳುಹಿಸಿದ ಮಾವು ಕೆ.ಜಿಗೆ ₹30ರಿಂದ ₹40 ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ, ಸಾಗಾಣಿಕ ವೆಚ್ಚವೂ ಸಿಗುತ್ತಿಲ್ಲ. ವಾರ್ಷಿಕ ಗುತ್ತಿಗೆ ಹಿಡಿದವರಿಗೆ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗುತ್ತಿದೆ' ಎಂದು ವ್ಯಾಪಾರಿ ಮಹ್ಮದಜಾಫರ್ ಗೋಣೂರ ಹೇಳಿದರು.</p>.<p>‘ಈ ವರ್ಷ ಕಡಿಮೆ ಮಾವು ಇಳುವರಿಯಿಂದ ರೈತರಿಗೆ ನಷ್ಟವಾಗಿದೆ. ಕಳೆದ ವರ್ಷ ತಾಲ್ಲೂಕಿನಲ್ಲಿ ಮಾವು ಬೆಳೆಯ ವಿಮಾ ಕಂತಿನ ಹಣ ಹೆಚ್ಚಿಸಿದ್ದರಿಂದ, ಬಹುತೇಕ ಬೆಳೆಗಾರರು ವಿಮೆ ಮಾಡಿಸಲಿಲ್ಲ. ಬೇರೆ ತಾಲ್ಲೂಕುಗಳಲ್ಲಿ ಮಾವು ವಿಮಾ ಕಂತಿನ ಹಣ ಕಡಿಮೆ ಇತ್ತು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ’ ಎಂದು ಮಾವು ಬೆಳೆಗಾರ ಶಿವಜ್ಯೋತಿ ಹುದ್ಲಮನಿ ಆರೋಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-20-896843688</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>