<p><strong>ಮುಂಡಗೋಡ</strong>: ಮುಂಗಾರು ಆಗಮನದ ನಿರೀಕ್ಷೆಯಲ್ಲಿರುವ ರೈತರು, ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲು ಈಗಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಯೂರಿಯಾ ಬಳಕೆಯಾಗುತ್ತಿದ್ದು, ಯೂರಿಯಾ ಗೊಬ್ಬರಕ್ಕಾಗಿ ರೈತರಿಂದ ಹೆಚ್ಚಿನ ಬೇಡಿಕೆ ಇರುವುದಾಗಿ ಅಧಿಕಾರಿಗಳು ಹೇಳುತ್ತಾರೆ.</p>.<p>ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ರಸಗೊಬ್ಬರ ಮತ್ತಷ್ಟು ಕೊರತೆಯಾಗಬಹುದು ಎಂಬ ಲೆಕ್ಕಾಚಾರ ಒಂದೆಡೆಯಾದರೇ, ಬೇಡಿಕೆಯಷ್ಟು ಸಿಗುತ್ತದೆ ಇಲ್ಲವೋ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.</p>.<p>ತಾಲ್ಲೂಕಿನಲ್ಲಿ 14 ವ್ಯವಸಾಯ ಸೇವಾ ಸಹಕಾರ ಸಂಘ, 1 ರೈತ ಉತ್ಪಾದಕ ಕೇಂದ್ರ ಮತ್ತು 28 ಖಾಸಗಿ ಅಂಗಡಿಗಳಲ್ಲಿ ಯೂರಿಯಾ, ರಸಗೊಬ್ಬರಗಳ ಮಾರಾಟ ನಡೆಯುತ್ತಿದೆ.</p>.<p>‘ಬಿತ್ತನೆ ಸಮಯದಲ್ಲಿ ಡಿಎಪಿ ಗೊಬ್ಬರ ಹಾಗೂ ಬಿತ್ತನೆಯಾಗಿ ಮಿರಗನ ಮಳೆ ಬೀಳುವ ಸಮಯದಲ್ಲಿ (ಮೇಲು ಗೊಬ್ಬರವಾಗಿ) ಯೂರಿಯಾ ಗೊಬ್ಬರದ ಅವಶ್ಯಕತೆ ಇರುತ್ತದೆ. ಎಫ್ಐಡಿ ಮೂಲಕ ಯೂರಿಯಾ ವಿತರಣೆ ಮಾಡುವುದರಿಂದ, ಖಾತೆದಾರ ರೈತರಿಗೆ ಮಾತ್ರ ಗೊಬ್ಬರ ಸಿಗಲಿದೆ. ಅತಿಕ್ರಮಣ ರೈತರು ಯೂರಿಯಾ ಪಡೆಯಲು ಅಡ್ಡಿಯಾಗಬಹುದು. ಗೊಬ್ಬರ ವಿತರಣೆ ಅಂಗಡಿಗಳಲ್ಲಿ ದಿನ ನಿತ್ಯದ ವ್ಯಾಪಾರ ಹಾಗೂ ಸಂಗ್ರಹದ ಮೇಲೆ ಸಂಬಂಧಿಸಿದವರು ನಿಗಾ ವಹಿಸಬೇಕು’ ಎಂದು ರೈತ ಮುಖಂಡ ನಿಂಗಪ್ಪ ಬಾಚಣಕಿ ಒತ್ತಾಯಿಸಿದರು.</p>.<p>‘ಆ್ಯಪ್ ಮೂಲಕ ಯೂರಿಯಾ ವಿತರಿಸುವಂತೆ ಹಾಗೂ ಬಿಲ್ ಇಲ್ಲದೆಯೇ ಮಾರಾಟ ಮಾಡದಂತೆ ಈಗಾಗಲೇ ಎಲ್ಲ ರಸಗೊಬ್ಬರ ವಿತರಣಾ ಅಂಗಡಿಕಾರರಿಗೆ ತಿಳಿಸಲಾಗಿದೆ. ಬಿಲ್ ಇಲ್ಲದೆಯೇ ರಾತ್ರಿ ಸಮಯದಲ್ಲಿ ರಸಗೊಬ್ಬರ ಸಾಗಾಟ ಮಾಡಿರುವ ಆರೋಪದ ಕುರಿತು, ಸಂಬಂಧಿಸಿದ ಅಂಗಡಿಗೆ ನೋಟಿಸ್ ನೀಡಿ, ಪ್ರತಿಕ್ರಿಯೆ ಕೇಳಲಾಗಿದೆ. ಬೇರೆ ತಾಲ್ಲೂಕಿಗೆ ಗೊಬ್ಬರ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎನ್.ಮಹಾರೆಡ್ಡಿ ಪ್ರತಿಕ್ರಿಯಿಸಿದರು.</p>.<p><strong>ಬೇರೆ ಕಡೆಗೆ ಸರಬರಾಜು!</strong></p><p>‘ತಾಲ್ಲೂಕಿನ ಕೆಲವು ಅಂಗಡಿಗಳಿಂದ ಯೂರಿಯಾ ಗೊಬ್ಬರವು ಬೇರೆ ತಾಲ್ಲೂಕಿಗೆ ಸರಬರಾಜು ಆಗುತ್ತದೆ ಎಂಬ ಆರೋಪವಿದೆ. ಬಿಲ್ ಇಲ್ಲದೆಯೇ ರಾತ್ರಿ ಸಮಯದಲ್ಲಿ ಲೋಡ್ ಕಳಿಸಿರುವ ಕುರಿತು, ಈಗಾಗಲೇ ಕೃಷಿ ಅಧಿಕಾರಿಯ ಗಮನಕ್ಕೆ ತರಲಾಗಿದೆ. ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ. ಯೂರಿಯಾ ಗೊಬ್ಬರದ ದಾಸ್ತಾನು ಹಾಗೂ ಪೂರೈಕೆಯಲ್ಲಿ ಪಾರದರ್ಶಕತೆಯ ಅಗತ್ಯವಿದೆ’ ಎಂದು ವಕೀಲ ಗುಡ್ಡಪ್ಪ ಕಾತೂರ ಹೇಳಿದರು.</p>.<div><blockquote>ನಿಯಮ ಮೀರಿ ಮಾರಾಟ ಮಾಡಿರುವುದು ಕಂಡುಬಂದರೆ, ಮಾರಾಟದ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು.</blockquote><span class="attribution">ಕೆ.ಎನ್.ಮಹಾರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ</strong>: ಮುಂಗಾರು ಆಗಮನದ ನಿರೀಕ್ಷೆಯಲ್ಲಿರುವ ರೈತರು, ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲು ಈಗಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಯೂರಿಯಾ ಬಳಕೆಯಾಗುತ್ತಿದ್ದು, ಯೂರಿಯಾ ಗೊಬ್ಬರಕ್ಕಾಗಿ ರೈತರಿಂದ ಹೆಚ್ಚಿನ ಬೇಡಿಕೆ ಇರುವುದಾಗಿ ಅಧಿಕಾರಿಗಳು ಹೇಳುತ್ತಾರೆ.</p>.<p>ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ರಸಗೊಬ್ಬರ ಮತ್ತಷ್ಟು ಕೊರತೆಯಾಗಬಹುದು ಎಂಬ ಲೆಕ್ಕಾಚಾರ ಒಂದೆಡೆಯಾದರೇ, ಬೇಡಿಕೆಯಷ್ಟು ಸಿಗುತ್ತದೆ ಇಲ್ಲವೋ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.</p>.<p>ತಾಲ್ಲೂಕಿನಲ್ಲಿ 14 ವ್ಯವಸಾಯ ಸೇವಾ ಸಹಕಾರ ಸಂಘ, 1 ರೈತ ಉತ್ಪಾದಕ ಕೇಂದ್ರ ಮತ್ತು 28 ಖಾಸಗಿ ಅಂಗಡಿಗಳಲ್ಲಿ ಯೂರಿಯಾ, ರಸಗೊಬ್ಬರಗಳ ಮಾರಾಟ ನಡೆಯುತ್ತಿದೆ.</p>.<p>‘ಬಿತ್ತನೆ ಸಮಯದಲ್ಲಿ ಡಿಎಪಿ ಗೊಬ್ಬರ ಹಾಗೂ ಬಿತ್ತನೆಯಾಗಿ ಮಿರಗನ ಮಳೆ ಬೀಳುವ ಸಮಯದಲ್ಲಿ (ಮೇಲು ಗೊಬ್ಬರವಾಗಿ) ಯೂರಿಯಾ ಗೊಬ್ಬರದ ಅವಶ್ಯಕತೆ ಇರುತ್ತದೆ. ಎಫ್ಐಡಿ ಮೂಲಕ ಯೂರಿಯಾ ವಿತರಣೆ ಮಾಡುವುದರಿಂದ, ಖಾತೆದಾರ ರೈತರಿಗೆ ಮಾತ್ರ ಗೊಬ್ಬರ ಸಿಗಲಿದೆ. ಅತಿಕ್ರಮಣ ರೈತರು ಯೂರಿಯಾ ಪಡೆಯಲು ಅಡ್ಡಿಯಾಗಬಹುದು. ಗೊಬ್ಬರ ವಿತರಣೆ ಅಂಗಡಿಗಳಲ್ಲಿ ದಿನ ನಿತ್ಯದ ವ್ಯಾಪಾರ ಹಾಗೂ ಸಂಗ್ರಹದ ಮೇಲೆ ಸಂಬಂಧಿಸಿದವರು ನಿಗಾ ವಹಿಸಬೇಕು’ ಎಂದು ರೈತ ಮುಖಂಡ ನಿಂಗಪ್ಪ ಬಾಚಣಕಿ ಒತ್ತಾಯಿಸಿದರು.</p>.<p>‘ಆ್ಯಪ್ ಮೂಲಕ ಯೂರಿಯಾ ವಿತರಿಸುವಂತೆ ಹಾಗೂ ಬಿಲ್ ಇಲ್ಲದೆಯೇ ಮಾರಾಟ ಮಾಡದಂತೆ ಈಗಾಗಲೇ ಎಲ್ಲ ರಸಗೊಬ್ಬರ ವಿತರಣಾ ಅಂಗಡಿಕಾರರಿಗೆ ತಿಳಿಸಲಾಗಿದೆ. ಬಿಲ್ ಇಲ್ಲದೆಯೇ ರಾತ್ರಿ ಸಮಯದಲ್ಲಿ ರಸಗೊಬ್ಬರ ಸಾಗಾಟ ಮಾಡಿರುವ ಆರೋಪದ ಕುರಿತು, ಸಂಬಂಧಿಸಿದ ಅಂಗಡಿಗೆ ನೋಟಿಸ್ ನೀಡಿ, ಪ್ರತಿಕ್ರಿಯೆ ಕೇಳಲಾಗಿದೆ. ಬೇರೆ ತಾಲ್ಲೂಕಿಗೆ ಗೊಬ್ಬರ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎನ್.ಮಹಾರೆಡ್ಡಿ ಪ್ರತಿಕ್ರಿಯಿಸಿದರು.</p>.<p><strong>ಬೇರೆ ಕಡೆಗೆ ಸರಬರಾಜು!</strong></p><p>‘ತಾಲ್ಲೂಕಿನ ಕೆಲವು ಅಂಗಡಿಗಳಿಂದ ಯೂರಿಯಾ ಗೊಬ್ಬರವು ಬೇರೆ ತಾಲ್ಲೂಕಿಗೆ ಸರಬರಾಜು ಆಗುತ್ತದೆ ಎಂಬ ಆರೋಪವಿದೆ. ಬಿಲ್ ಇಲ್ಲದೆಯೇ ರಾತ್ರಿ ಸಮಯದಲ್ಲಿ ಲೋಡ್ ಕಳಿಸಿರುವ ಕುರಿತು, ಈಗಾಗಲೇ ಕೃಷಿ ಅಧಿಕಾರಿಯ ಗಮನಕ್ಕೆ ತರಲಾಗಿದೆ. ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ. ಯೂರಿಯಾ ಗೊಬ್ಬರದ ದಾಸ್ತಾನು ಹಾಗೂ ಪೂರೈಕೆಯಲ್ಲಿ ಪಾರದರ್ಶಕತೆಯ ಅಗತ್ಯವಿದೆ’ ಎಂದು ವಕೀಲ ಗುಡ್ಡಪ್ಪ ಕಾತೂರ ಹೇಳಿದರು.</p>.<div><blockquote>ನಿಯಮ ಮೀರಿ ಮಾರಾಟ ಮಾಡಿರುವುದು ಕಂಡುಬಂದರೆ, ಮಾರಾಟದ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು.</blockquote><span class="attribution">ಕೆ.ಎನ್.ಮಹಾರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>