<p><strong>ಶಿರಸಿ</strong>: ಸಾಂಪ್ರದಾಯಿಕ ಅಡಿಕೆ ಮತ್ತು ತೆಂಗಿನ ತೋಟಗಳು ಈಗ ಕೇವಲ ಹಸಿರಿನಿಂದಷ್ಟೇ ಅಲ್ಲದೆ, ವಿಶಿಷ್ಟವಾದ ಸುವಾಸನೆಯಿಂದಲೂ ಕಂಗೊಳಿಸುತ್ತಿವೆ. ಮಲೆನಾಡಿನ ಕೃಷಿ ಅಂಗಳದಲ್ಲಿ ಅಡಿಕೆಗೆ ಪರ್ಯಾಯ ಮತ್ತು ಪೂರಕವಾಗಿ ಜಾಯಿಕಾಯಿ ತನ್ನ ಬೇರುಗಳನ್ನು ಭದ್ರಪಡಿಸಿಕೊಳ್ಳುತ್ತಿದೆ.</p>.<p>ಅಡಿಕೆ ಬೆಳೆಯನ್ನು ಕಾಡುತ್ತಿರುವ ಬೆಲೆ ಏರಿಳಿತ, ರೋಗ ಬಾಧೆಯಂತಹ ಸಂಕಷ್ಟ–ಸವಾಲುಗಳ ನಡುವೆ, ಜಾಯಿಕಾಯಿಯು ರೈತರ ಪಾಲಿನ ಆಪದ್ಬಾಂಧವನಾಗಿ ಮೂಡಿಬರುತ್ತಿದೆ. ಒಂದು ಕಾಲದಲ್ಲಿ ಕುಮಟಾ, ಹೊನ್ನಾವರ, ಭಟ್ಕಳದಂತಹ ಕರಾವಳಿ ತೀರಕ್ಕಷ್ಟೇ ಸೀಮಿತವಾಗಿದ್ದ ಈ ಸಾಂಬಾರ ಬೆಳೆ, ಈಗ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರದ ಘಟ್ಟದ ಮೇಲಿನ ತೋಟಗಳಲ್ಲಿಯೂ ಸಮೃದ್ಧವಾಗಿ ಬೆಳೆಯುತ್ತಿದೆ. ಮೂರು ವರ್ಷಗಳಲ್ಲಿ 30 ಸಾವಿರಕ್ಕೂ ಹೆಚ್ಚು ಜಾಯಿಕಾಯಿ ಗಿಡಗಳನ್ನು ರೈತರು ನಾಟಿ ಮಾಡಿದ್ದಾರೆ.</p>.<p>‘ಈ ಹಿಂದೆ ಕೇವಲ ಹವ್ಯಾಸಕ್ಕಾಗಿ ಒಂದೆರಡು ಗಿಡಗಳನ್ನು ನೆಡುತ್ತಿದ್ದ ರೈತರು, ಇಂದು ವಾಣಿಜ್ಯ ದೃಷ್ಟಿಕೋನದಿಂದ ತೋಟದ ಸುತ್ತ ಮತ್ತು ಅಡಿಕೆ ಸಾಲುಗಳ ಮಧ್ಯೆ ನೂರಾರು ಜಾಯಿಕಾಯಿ ಗಿಡಗಳನ್ನು ನಾಟಿ ಮಾಡುತ್ತಿದ್ದಾರೆ. ಈ ಬೆಳೆಯ ವಿಶೇಷವೆಂದರೆ; ರೋಗಬಾಧೆ ತೀರಾ ಕಡಿಮೆ ಮತ್ತು ನಿರ್ವಹಣೆಯೂ ಸುಲಭ. ಹಣ್ಣಾದ ತಕ್ಷಣ ಕೊಯ್ಲು ಮಾಡಿದರೆ ಸಾಕು, ರೈತನಿಗೆ ಸುಲಭವಾಗಿ ಆದಾಯ ತಂದುಕೊಡುತ್ತದೆ’ ಎನ್ನುತ್ತಾರೆ ಕೃಷಿಕ ರಾಜಾರಾಮ ಭಟ್.</p>.<p>‘ಮಾರುಕಟ್ಟೆ ದೃಷ್ಟಿಯಿಂದಲೂ ಜಾಯಿಕಾಯಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಹಿಂದೆ ಕೆ.ಜಿ. ಜಾಯಿಕಾಯಿಗೆ ಕೇವಲ ₹50-₹60 ಇತ್ತು. ಈಗ ₹250ಕ್ಕೆ ಏರಿಕೆಯಾಗಿದೆ. ಇದಕ್ಕಿಂತಲೂ ಮಿಗಿಲಾಗಿ, ಕೆ.ಜಿ ಜಾಯಿಪತ್ರೆಗೆ ಮಾರುಕಟ್ಟೆಯಲ್ಲಿ ₹1,500ರಿಂದ ₹1,800ರವರೆಗೆ ಬೆಲೆ ಸಿಗುತ್ತಿರುವುದು ಕೃಷಿಕರ ಆರ್ಥಿಕ ಸ್ಥಿತಿಯನ್ನು ಬಲಪಡಿಸಿದೆ’ ಎನ್ನುತ್ತಾರೆ ಅವರು.</p>.<p>‘ರೈತರ ಬೆನ್ನಿಗೆ ನಿಂತಿರುವ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಘವು ಕಳೆದ ವರ್ಷವೊಂದರಲ್ಲೇ 5 ಟನ್ಗಿಂತಲೂ ಅಧಿಕ ಜಾಯಿಕಾಯಿ ಮತ್ತು ಒಂದು ಟನ್ ಜಾಯಿಪತ್ರೆಯನ್ನು ಯಶಸ್ವಿಯಾಗಿ ಮಾರಾಟ ಮಾಡುವ ಮೂಲಕ ದೊಡ್ಡ ಮಾರುಕಟ್ಟೆಯನ್ನೇ ಸೃಷ್ಟಿಸಿದೆ. ಇಲ್ಲಿನ ಸುವಾಸನೆಯುಕ್ತ ಜಾಯಿಕಾಯಿಗೆ ಹೊರರಾಜ್ಯಗಳಲ್ಲಿ, ವಿಶೇಷವಾಗಿ ಹೈದರಾಬಾದ್ನಲ್ಲಿ ಭಾರಿ ಬೇಡಿಕೆಯಿದೆ’ ಎಂದು ಸಂಘದ ಸಲಹೆಗಾರರಾದ ವಿಶ್ವೇಶ್ವರ ಭಟ್ ಕೋಟೆಮನೆ ಹೇಳಿದರು.</p>.<p><strong>ನರ್ಸರಿಗಳ ಮೇಲೆ ಒತ್ತಡ</strong></p><p>‘ಈ ಮೊದಲು ನರ್ಸರಿಗಳಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಸಸಿಗಳಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯವಿತ್ತು. ಆದರೀಗ ರೈತರು ನೂರಾರು ಸಂಖ್ಯೆಯಲ್ಲಿ ಜಾಯಿಕಾಯಿ ಸಸಿಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಅಧಿಕ ಇಳುವರಿ ನೀಡುವ ಮತ್ತು ಮಲೆನಾಡಿನ ಹವಾಮಾನಕ್ಕೆ ಹೊಂದಿಕೊಳ್ಳುವ ಕಸಿ ಗಿಡಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದರಿಂದಾಗಿ ಸ್ಥಳೀಯ ನರ್ಸರಿ ಮಾಲೀಕರು ಹೊರ ಜಿಲ್ಲೆಗಳಿಂದಲೂ ಸಸಿಗಳನ್ನು ತರಿಸಿ ಪೂರೈಸುತ್ತಿದ್ದಾರೆ’ ಎನ್ನುತ್ತಾರೆ ಗಿಡಗಳ ಮಾರಾಟಗಾರ ಮಹೇಶ ಪತ್ರೆ. </p>.<div><blockquote>ಮಲೆನಾಡಿನ ರೈತರು ಸಾಂಪ್ರದಾಯಿಕ ಬೆಳೆಗಳ ಜತೆಗೆ ಪರ್ಯಾಯ ಆದಾಯದ ಮೂಲಗಳನ್ನು ಹುಡುಕುತ್ತಿರುವುದರಿಂದ ಜಾಯಿಕಾಯಿ ಕೃಷಿಗೂ ಮಹತ್ವ ಬಂದಿದೆ </blockquote><span class="attribution">ವಿಶ್ವೇಶ್ವರ ಭಟ್, ಕದಂಬ ಸಂಸ್ಥೆ ಸಲಹೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಸಾಂಪ್ರದಾಯಿಕ ಅಡಿಕೆ ಮತ್ತು ತೆಂಗಿನ ತೋಟಗಳು ಈಗ ಕೇವಲ ಹಸಿರಿನಿಂದಷ್ಟೇ ಅಲ್ಲದೆ, ವಿಶಿಷ್ಟವಾದ ಸುವಾಸನೆಯಿಂದಲೂ ಕಂಗೊಳಿಸುತ್ತಿವೆ. ಮಲೆನಾಡಿನ ಕೃಷಿ ಅಂಗಳದಲ್ಲಿ ಅಡಿಕೆಗೆ ಪರ್ಯಾಯ ಮತ್ತು ಪೂರಕವಾಗಿ ಜಾಯಿಕಾಯಿ ತನ್ನ ಬೇರುಗಳನ್ನು ಭದ್ರಪಡಿಸಿಕೊಳ್ಳುತ್ತಿದೆ.</p>.<p>ಅಡಿಕೆ ಬೆಳೆಯನ್ನು ಕಾಡುತ್ತಿರುವ ಬೆಲೆ ಏರಿಳಿತ, ರೋಗ ಬಾಧೆಯಂತಹ ಸಂಕಷ್ಟ–ಸವಾಲುಗಳ ನಡುವೆ, ಜಾಯಿಕಾಯಿಯು ರೈತರ ಪಾಲಿನ ಆಪದ್ಬಾಂಧವನಾಗಿ ಮೂಡಿಬರುತ್ತಿದೆ. ಒಂದು ಕಾಲದಲ್ಲಿ ಕುಮಟಾ, ಹೊನ್ನಾವರ, ಭಟ್ಕಳದಂತಹ ಕರಾವಳಿ ತೀರಕ್ಕಷ್ಟೇ ಸೀಮಿತವಾಗಿದ್ದ ಈ ಸಾಂಬಾರ ಬೆಳೆ, ಈಗ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರದ ಘಟ್ಟದ ಮೇಲಿನ ತೋಟಗಳಲ್ಲಿಯೂ ಸಮೃದ್ಧವಾಗಿ ಬೆಳೆಯುತ್ತಿದೆ. ಮೂರು ವರ್ಷಗಳಲ್ಲಿ 30 ಸಾವಿರಕ್ಕೂ ಹೆಚ್ಚು ಜಾಯಿಕಾಯಿ ಗಿಡಗಳನ್ನು ರೈತರು ನಾಟಿ ಮಾಡಿದ್ದಾರೆ.</p>.<p>‘ಈ ಹಿಂದೆ ಕೇವಲ ಹವ್ಯಾಸಕ್ಕಾಗಿ ಒಂದೆರಡು ಗಿಡಗಳನ್ನು ನೆಡುತ್ತಿದ್ದ ರೈತರು, ಇಂದು ವಾಣಿಜ್ಯ ದೃಷ್ಟಿಕೋನದಿಂದ ತೋಟದ ಸುತ್ತ ಮತ್ತು ಅಡಿಕೆ ಸಾಲುಗಳ ಮಧ್ಯೆ ನೂರಾರು ಜಾಯಿಕಾಯಿ ಗಿಡಗಳನ್ನು ನಾಟಿ ಮಾಡುತ್ತಿದ್ದಾರೆ. ಈ ಬೆಳೆಯ ವಿಶೇಷವೆಂದರೆ; ರೋಗಬಾಧೆ ತೀರಾ ಕಡಿಮೆ ಮತ್ತು ನಿರ್ವಹಣೆಯೂ ಸುಲಭ. ಹಣ್ಣಾದ ತಕ್ಷಣ ಕೊಯ್ಲು ಮಾಡಿದರೆ ಸಾಕು, ರೈತನಿಗೆ ಸುಲಭವಾಗಿ ಆದಾಯ ತಂದುಕೊಡುತ್ತದೆ’ ಎನ್ನುತ್ತಾರೆ ಕೃಷಿಕ ರಾಜಾರಾಮ ಭಟ್.</p>.<p>‘ಮಾರುಕಟ್ಟೆ ದೃಷ್ಟಿಯಿಂದಲೂ ಜಾಯಿಕಾಯಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಹಿಂದೆ ಕೆ.ಜಿ. ಜಾಯಿಕಾಯಿಗೆ ಕೇವಲ ₹50-₹60 ಇತ್ತು. ಈಗ ₹250ಕ್ಕೆ ಏರಿಕೆಯಾಗಿದೆ. ಇದಕ್ಕಿಂತಲೂ ಮಿಗಿಲಾಗಿ, ಕೆ.ಜಿ ಜಾಯಿಪತ್ರೆಗೆ ಮಾರುಕಟ್ಟೆಯಲ್ಲಿ ₹1,500ರಿಂದ ₹1,800ರವರೆಗೆ ಬೆಲೆ ಸಿಗುತ್ತಿರುವುದು ಕೃಷಿಕರ ಆರ್ಥಿಕ ಸ್ಥಿತಿಯನ್ನು ಬಲಪಡಿಸಿದೆ’ ಎನ್ನುತ್ತಾರೆ ಅವರು.</p>.<p>‘ರೈತರ ಬೆನ್ನಿಗೆ ನಿಂತಿರುವ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಘವು ಕಳೆದ ವರ್ಷವೊಂದರಲ್ಲೇ 5 ಟನ್ಗಿಂತಲೂ ಅಧಿಕ ಜಾಯಿಕಾಯಿ ಮತ್ತು ಒಂದು ಟನ್ ಜಾಯಿಪತ್ರೆಯನ್ನು ಯಶಸ್ವಿಯಾಗಿ ಮಾರಾಟ ಮಾಡುವ ಮೂಲಕ ದೊಡ್ಡ ಮಾರುಕಟ್ಟೆಯನ್ನೇ ಸೃಷ್ಟಿಸಿದೆ. ಇಲ್ಲಿನ ಸುವಾಸನೆಯುಕ್ತ ಜಾಯಿಕಾಯಿಗೆ ಹೊರರಾಜ್ಯಗಳಲ್ಲಿ, ವಿಶೇಷವಾಗಿ ಹೈದರಾಬಾದ್ನಲ್ಲಿ ಭಾರಿ ಬೇಡಿಕೆಯಿದೆ’ ಎಂದು ಸಂಘದ ಸಲಹೆಗಾರರಾದ ವಿಶ್ವೇಶ್ವರ ಭಟ್ ಕೋಟೆಮನೆ ಹೇಳಿದರು.</p>.<p><strong>ನರ್ಸರಿಗಳ ಮೇಲೆ ಒತ್ತಡ</strong></p><p>‘ಈ ಮೊದಲು ನರ್ಸರಿಗಳಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಸಸಿಗಳಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯವಿತ್ತು. ಆದರೀಗ ರೈತರು ನೂರಾರು ಸಂಖ್ಯೆಯಲ್ಲಿ ಜಾಯಿಕಾಯಿ ಸಸಿಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಅಧಿಕ ಇಳುವರಿ ನೀಡುವ ಮತ್ತು ಮಲೆನಾಡಿನ ಹವಾಮಾನಕ್ಕೆ ಹೊಂದಿಕೊಳ್ಳುವ ಕಸಿ ಗಿಡಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದರಿಂದಾಗಿ ಸ್ಥಳೀಯ ನರ್ಸರಿ ಮಾಲೀಕರು ಹೊರ ಜಿಲ್ಲೆಗಳಿಂದಲೂ ಸಸಿಗಳನ್ನು ತರಿಸಿ ಪೂರೈಸುತ್ತಿದ್ದಾರೆ’ ಎನ್ನುತ್ತಾರೆ ಗಿಡಗಳ ಮಾರಾಟಗಾರ ಮಹೇಶ ಪತ್ರೆ. </p>.<div><blockquote>ಮಲೆನಾಡಿನ ರೈತರು ಸಾಂಪ್ರದಾಯಿಕ ಬೆಳೆಗಳ ಜತೆಗೆ ಪರ್ಯಾಯ ಆದಾಯದ ಮೂಲಗಳನ್ನು ಹುಡುಕುತ್ತಿರುವುದರಿಂದ ಜಾಯಿಕಾಯಿ ಕೃಷಿಗೂ ಮಹತ್ವ ಬಂದಿದೆ </blockquote><span class="attribution">ವಿಶ್ವೇಶ್ವರ ಭಟ್, ಕದಂಬ ಸಂಸ್ಥೆ ಸಲಹೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>