‘ಶಂಭು ಭಟ್ಟರ ಹಿರಿಯ ಪುತ್ರ ಶ್ರೀಧರ ಭಟ್ಟ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಮಗ ತೀರಿದ ಬಳಿಕ ಸೊಸೆ ಇಲ್ಲಿಯೇ ಇದ್ದರು. ಆಕೆಯ ಸಹೋದರ ವಿನಯ ಆಗಾಗ ಹಾಡುವಳ್ಳಿಗೆ ಬಂದು ಆಸ್ತಿಯಲ್ಲಿ ಪಾಲು ಕೊಡುವಂತೆ ಜಗಳ ತೆಗೆಯುತ್ತಿದ್ದ. ಇದರಿಂದ ನೊಂದಿದ್ದ ಶಂಭು ಭಟ್ಟರು, ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳಿಗೆ ಹಾಗೂ ತಮ್ಮ ನಡುವೆ ಆಸ್ತಿ ಭಾಗ ಮಾಡಿ ನೀಡಿದ್ದರು. ತಮಗೆ ಕೊಟ್ಟ ಪಾಲಿನಲ್ಲಿ ಕೆರೆ ಇಲ್ಲ ಎನ್ನುವ ತಕರಾರಿನೊಂದಿಗೆ ಜಗಳ ನಡೆಯುತ್ತಿತ್ತು’ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.