ಯಲ್ಲಾಪುರ: ರಾಜ್ಯದ ಬಿಜೆಪಿ ಸರ್ಕಾರ ಜನಪರ ಕೆಲಸಗಳ ಮೂಲಕ ಜನರ ವಿಶ್ವಾಸಗಳಿಸಿದೆ. ತೀರಾ ಹಿಂದುಳಿದ ಪ್ರದೇಶಗಳಿಗೂ ಅಭಿವೃದ್ಧಿಯ ಸ್ಪರ್ಶ ನೀಡಿದೆ' ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂಕೊಳ್ಳಿ, ಬಾರೆ ಹಾಗೂ ಬಾಸಲದಲ್ಲಿ ರವಿವಾರ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮಾಂತರ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಭೌಗೋಳಿಕವಾಗಿ ಕ್ಷೇತ್ರ ವಿಸ್ತೀರ್ಣವಾಗಿರುವ ಕಾರಣ ಸಾಕಷ್ಟು ಅಭಿವೃದ್ಧಿಕಾರ್ಯಗಳು ಇನ್ನೂ ಆಗಬೇಕಿದೆ. ಮತ್ತೊಮ್ಮೆ ಬಿಜೆಪಿಯನ್ನು ಆಯ್ಕೆ ಮಾಡುವ ಮೂಲಕ ಆಶೀರ್ವದಿಸಿ‘ ಎಂದರು.
ಈ ವೇಳೆ ಪ್ರಮುಖರಾದ ಗಜಾನನ ಗಾಂವ್ಕರ, ಸುಬ್ಬಯ್ಯ ಧೋಗಳೆ, ರಸ್ಮಾ ಕುಣಬಿ, ಮಹಾಬಲೇಶ್ವರ ಗೌಡ, ಪುಷ್ಪಾ ಭಟ್ಟ, ಗಜಾನನ ಭಟ್ಟ, ಸುಬ್ಬಣ್ಣ ಕುಂಟೆಗಳಿ, ಸುಬ್ಬಣ್ಣ ಬೋಳ್ಮನೆ ಇದ್ದರು.