<p><strong>ಶಿರಸಿ</strong>: ಅಕಾಲಿಕವಾಗಿ ಸುರಿಯುವ ಮಳೆ ಹಾಗೂ ಸುಡುವ ಬಿಸಿಲಿನ ಅಸಮತೋಲನವು ಅಡಿಕೆ ಮರಗಳ ಜೀವನಾಡಿಯಾದ ಹಿಂಗಾರದ ಮೇಲೆ ನೇರ ಪ್ರಹಾರ ಮಾಡುತ್ತಿದೆ. ಇದರಿಂದ ಹಿಂಗಾರದ ಪರಾಗಸ್ಪರ್ಶ ಪ್ರಕ್ರಿಯೆ ಸರಿಯಾಗಿ ನಡೆಯದೇ ಇಳುವರಿ ಮೇಲೆ ಭಾರಿ ಹೊಡೆತ ನೀಡುತ್ತಿರುವ ಜತೆಗೆ ಮಾರಕವಾದ ಎಲೆಚುಕ್ಕಿ ರೋಗಕ್ಕೆ ಮೂಲವಾದ ಹಿಂಗಾರ ಕೊಳೆ ರೋಗಕ್ಕೂ ಪ್ರಮುಖ ಕಾರಣವಾಗುತ್ತಿದೆ.</p>.<p>ಅಡಿಕೆ ಕೃಷಿಯಲ್ಲಿ ಹಿಂಗಾರವು ಮುಂದಿನ ಫಸಲಿನ ಆಧಾರಸ್ತಂಭ. ಆದರೆ, ಪ್ರಸ್ತುತ ಶಿರಸಿ ಭಾಗದಲ್ಲಿ ಕಂಡುಬರುತ್ತಿರುವ ಹವಾಮಾನ ವೈಪರೀತ್ಯವು ಈ ಹಿಂಗಾರದ ನೈಸರ್ಗಿಕ ಪ್ರಕ್ರಿಯೆಯನ್ನೇ ಏರುಪೇರು ಮಾಡುತ್ತಿದೆ. ಒಂದೆಡೆ ಮೈಸುಡುವ ಬಿಸಿಲು ಆವರಿಸಿದ್ದರೆ, ಇದರ ನಡುವೆ ಸುರಿದ ಒಂದೆರಡು ಮಳೆಗಳು ಅಡಿಕೆ ಮರಗಳಿಗೆ ಮಾರಕವಾಗಿದೆ.</p>.<p>‘ಬಿಸಿಲಿನ ನಡುವೆ ಸುರಿಯುವ ಅಕಾಲಿಕ ಮಳೆಯು ತೋಟಗಳನ್ನು ತಂಪು ಮಾಡುವ ಬದಲು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದೆ. ಮಳೆ ಬಂದಾಗ ಹಿಂಗಾರದ ಪಕಳೆಗಳ ನಡುವೆ ನೀರು ಸಂಗ್ರಹವಾಗುತ್ತದೆ. ಮರುದಿನವೇ ತೀವ್ರವಾದ ಬಿಸಿಲು ಬಿದ್ದಾಗ, ಈ ಸಂಗ್ರಹವಾದ ನೀರು ಬಿಸಿಯಾಗಿ ಹಿಂಗಾರದ ಮೃದುವಾದ ಅಂಗಾಂಶಗಳನ್ನು ಸುಟ್ಟು ಹಾಕುತ್ತದೆ. ಇದರಿಂದ ಹಿಂಗಾರವು ಅರಳುವ ಮುನ್ನವೇ ಕೊಳೆಯಲು ಆರಂಭಿಸುತ್ತದೆ. ಇದು ಇಳುವರಿಯ ಕುಸಿತಕ್ಕೆ ಕಾರಣವಾಗಬಹುದು. ಜೊತೆಗೆ ಎಲೆಚುಕ್ಕಿ ರೋಗ ದಾರಿ ಮಾಡಿಕೊಡುತ್ತಿದೆ’ ಎಂಬುದಾಗಿ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ಕಳೆದ ವರ್ಷದ ಅಕಾಲಿಕ ಮಳೆಯಿಂದಾಗಿ ಅನೇಕ ರೈತರಿಗೆ ಕೇವಲ ಶೇ 30ರಷ್ಟು ಮಾತ್ರ ಫಸಲು ಸಿಕ್ಕಿತ್ತು. ಈ ಬಾರಿಯೂ ಅದೇ ಮುನ್ಸೂಚನೆ ಕಾಣಿಸುತ್ತಿದೆ’ ಎನ್ನುತ್ತಾರೆ ಕಾನಗೋಡದ ಅಡಿಕೆ ಬೆಳೆಗಾರ ರಾಜಾರಾಮ ಭಟ್.</p>.<p>‘ಹವಾಮಾನದ ಹೊಡೆತಕ್ಕೆ ಸಿಲುಕಿ ದುರ್ಬಲಗೊಂಡ ಹಿಂಗಾರಕ್ಕೆ ಶಿಲೀಂದ್ರಗಳು ಬೇಗನೆ ಅಂಟಿಕೊಳ್ಳುತ್ತವೆ. ಇದು ಹಿಂಗಾರದ ತುದಿಯಿಂದ ಆರಂಭವಾಗಿ ಇಡೀ ಗೊಂಚಲನ್ನು ಕೊಳೆಸುತ್ತದೆ. ಹಿಂಗಾರದಲ್ಲಿ ಉತ್ಪತ್ತಿಯಾಗುವ ಈ ಶಿಲೀಂದ್ರಗಳ ಬೀಜಾಣುಗಳು ಗಾಳಿ ಮತ್ತು ಮಳೆಯ ಹನಿಗಳ ಮೂಲಕ ಮರದ ಎಲೆಗಳಿಗೆ ಹರಡುತ್ತವೆ. ಹಿಂಗಾರ ಕೊಳೆ ರೋಗವು ತೀವ್ರವಾದಷ್ಟೂ, ಮರದ ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ಎಲೆಚುಕ್ಕಿ ರೋಗ ಉಲ್ಬಣಗೊಳ್ಳುತ್ತದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ ಹೆಗಡೆ.</p>.<div><blockquote>ಬದಲಾದ ಹವಾಮಾನಕ್ಕೆ ತಕ್ಕಂತೆ ಕೇವಲ ಮಳೆಗಾಲದಲ್ಲಿ ಮಾತ್ರವಲ್ಲದೆ, ಕಾಲಕಾಲಕ್ಕೆ ಶಿಲೀಂಧ್ರನಾಶಕ ಸಿಂಪಡಿಸುವ ಕಾರ್ಯ ಆಗಬೇಕು.</blockquote><span class="attribution">– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ</span></div>.<p><strong>ರೈತರಿಗೆ ಹೊರೆ</strong></p><p>‘ಹವಾಮಾನ ವೈಪರೀತ್ಯ ಕೃಷಿ ಪದ್ಧತಿ ಸಂಪೂರ್ಣವಾಗಿ ಬದಲಿಸಿದೆ. ರೈತರು ವರ್ಷವಿಡೀ ಔಷಧ ಸಿಂಪಡಣೆಯ ಮೊರೆ ಹೋಗುವುದು ಅನಿವಾರ್ಯವಾಗಿದೆ. ಹಿಂದೆ ಕೇವಲ ಮಳೆಗಾಲದಲ್ಲಿ ಬೋರ್ಡೋ ದ್ರಾವಣ ಬಳಸುತ್ತಿದ್ದ ಬೆಳೆಗಾರರು, ಈಗ ಹಿಂಗಾರು ಮೂಡುವ ಸಮಯ, ಹೂ ಕಚ್ಚುವ ಸಮಯದಲ್ಲಿಯೂ ವಿವಿಧ ಬಗೆಯ ರೋಗನಿರೋಧಕ ದ್ರಾವಣಗಳನ್ನು ಬಳಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಕಾರ್ಮಿಕರ ಕೊರತೆಯ ನಡುವೆ ಪದೇ ಪದೇ ಈ ವೆಚ್ಚದಾಯಕ ಪ್ರಕ್ರಿಯೆಗಳನ್ನು ನಡೆಸುವುದು ರೈತರಿಗೆ ಹೊರೆ’ ಎಂಬುದು ರೈತರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಅಕಾಲಿಕವಾಗಿ ಸುರಿಯುವ ಮಳೆ ಹಾಗೂ ಸುಡುವ ಬಿಸಿಲಿನ ಅಸಮತೋಲನವು ಅಡಿಕೆ ಮರಗಳ ಜೀವನಾಡಿಯಾದ ಹಿಂಗಾರದ ಮೇಲೆ ನೇರ ಪ್ರಹಾರ ಮಾಡುತ್ತಿದೆ. ಇದರಿಂದ ಹಿಂಗಾರದ ಪರಾಗಸ್ಪರ್ಶ ಪ್ರಕ್ರಿಯೆ ಸರಿಯಾಗಿ ನಡೆಯದೇ ಇಳುವರಿ ಮೇಲೆ ಭಾರಿ ಹೊಡೆತ ನೀಡುತ್ತಿರುವ ಜತೆಗೆ ಮಾರಕವಾದ ಎಲೆಚುಕ್ಕಿ ರೋಗಕ್ಕೆ ಮೂಲವಾದ ಹಿಂಗಾರ ಕೊಳೆ ರೋಗಕ್ಕೂ ಪ್ರಮುಖ ಕಾರಣವಾಗುತ್ತಿದೆ.</p>.<p>ಅಡಿಕೆ ಕೃಷಿಯಲ್ಲಿ ಹಿಂಗಾರವು ಮುಂದಿನ ಫಸಲಿನ ಆಧಾರಸ್ತಂಭ. ಆದರೆ, ಪ್ರಸ್ತುತ ಶಿರಸಿ ಭಾಗದಲ್ಲಿ ಕಂಡುಬರುತ್ತಿರುವ ಹವಾಮಾನ ವೈಪರೀತ್ಯವು ಈ ಹಿಂಗಾರದ ನೈಸರ್ಗಿಕ ಪ್ರಕ್ರಿಯೆಯನ್ನೇ ಏರುಪೇರು ಮಾಡುತ್ತಿದೆ. ಒಂದೆಡೆ ಮೈಸುಡುವ ಬಿಸಿಲು ಆವರಿಸಿದ್ದರೆ, ಇದರ ನಡುವೆ ಸುರಿದ ಒಂದೆರಡು ಮಳೆಗಳು ಅಡಿಕೆ ಮರಗಳಿಗೆ ಮಾರಕವಾಗಿದೆ.</p>.<p>‘ಬಿಸಿಲಿನ ನಡುವೆ ಸುರಿಯುವ ಅಕಾಲಿಕ ಮಳೆಯು ತೋಟಗಳನ್ನು ತಂಪು ಮಾಡುವ ಬದಲು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದೆ. ಮಳೆ ಬಂದಾಗ ಹಿಂಗಾರದ ಪಕಳೆಗಳ ನಡುವೆ ನೀರು ಸಂಗ್ರಹವಾಗುತ್ತದೆ. ಮರುದಿನವೇ ತೀವ್ರವಾದ ಬಿಸಿಲು ಬಿದ್ದಾಗ, ಈ ಸಂಗ್ರಹವಾದ ನೀರು ಬಿಸಿಯಾಗಿ ಹಿಂಗಾರದ ಮೃದುವಾದ ಅಂಗಾಂಶಗಳನ್ನು ಸುಟ್ಟು ಹಾಕುತ್ತದೆ. ಇದರಿಂದ ಹಿಂಗಾರವು ಅರಳುವ ಮುನ್ನವೇ ಕೊಳೆಯಲು ಆರಂಭಿಸುತ್ತದೆ. ಇದು ಇಳುವರಿಯ ಕುಸಿತಕ್ಕೆ ಕಾರಣವಾಗಬಹುದು. ಜೊತೆಗೆ ಎಲೆಚುಕ್ಕಿ ರೋಗ ದಾರಿ ಮಾಡಿಕೊಡುತ್ತಿದೆ’ ಎಂಬುದಾಗಿ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ಕಳೆದ ವರ್ಷದ ಅಕಾಲಿಕ ಮಳೆಯಿಂದಾಗಿ ಅನೇಕ ರೈತರಿಗೆ ಕೇವಲ ಶೇ 30ರಷ್ಟು ಮಾತ್ರ ಫಸಲು ಸಿಕ್ಕಿತ್ತು. ಈ ಬಾರಿಯೂ ಅದೇ ಮುನ್ಸೂಚನೆ ಕಾಣಿಸುತ್ತಿದೆ’ ಎನ್ನುತ್ತಾರೆ ಕಾನಗೋಡದ ಅಡಿಕೆ ಬೆಳೆಗಾರ ರಾಜಾರಾಮ ಭಟ್.</p>.<p>‘ಹವಾಮಾನದ ಹೊಡೆತಕ್ಕೆ ಸಿಲುಕಿ ದುರ್ಬಲಗೊಂಡ ಹಿಂಗಾರಕ್ಕೆ ಶಿಲೀಂದ್ರಗಳು ಬೇಗನೆ ಅಂಟಿಕೊಳ್ಳುತ್ತವೆ. ಇದು ಹಿಂಗಾರದ ತುದಿಯಿಂದ ಆರಂಭವಾಗಿ ಇಡೀ ಗೊಂಚಲನ್ನು ಕೊಳೆಸುತ್ತದೆ. ಹಿಂಗಾರದಲ್ಲಿ ಉತ್ಪತ್ತಿಯಾಗುವ ಈ ಶಿಲೀಂದ್ರಗಳ ಬೀಜಾಣುಗಳು ಗಾಳಿ ಮತ್ತು ಮಳೆಯ ಹನಿಗಳ ಮೂಲಕ ಮರದ ಎಲೆಗಳಿಗೆ ಹರಡುತ್ತವೆ. ಹಿಂಗಾರ ಕೊಳೆ ರೋಗವು ತೀವ್ರವಾದಷ್ಟೂ, ಮರದ ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ಎಲೆಚುಕ್ಕಿ ರೋಗ ಉಲ್ಬಣಗೊಳ್ಳುತ್ತದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ ಹೆಗಡೆ.</p>.<div><blockquote>ಬದಲಾದ ಹವಾಮಾನಕ್ಕೆ ತಕ್ಕಂತೆ ಕೇವಲ ಮಳೆಗಾಲದಲ್ಲಿ ಮಾತ್ರವಲ್ಲದೆ, ಕಾಲಕಾಲಕ್ಕೆ ಶಿಲೀಂಧ್ರನಾಶಕ ಸಿಂಪಡಿಸುವ ಕಾರ್ಯ ಆಗಬೇಕು.</blockquote><span class="attribution">– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ</span></div>.<p><strong>ರೈತರಿಗೆ ಹೊರೆ</strong></p><p>‘ಹವಾಮಾನ ವೈಪರೀತ್ಯ ಕೃಷಿ ಪದ್ಧತಿ ಸಂಪೂರ್ಣವಾಗಿ ಬದಲಿಸಿದೆ. ರೈತರು ವರ್ಷವಿಡೀ ಔಷಧ ಸಿಂಪಡಣೆಯ ಮೊರೆ ಹೋಗುವುದು ಅನಿವಾರ್ಯವಾಗಿದೆ. ಹಿಂದೆ ಕೇವಲ ಮಳೆಗಾಲದಲ್ಲಿ ಬೋರ್ಡೋ ದ್ರಾವಣ ಬಳಸುತ್ತಿದ್ದ ಬೆಳೆಗಾರರು, ಈಗ ಹಿಂಗಾರು ಮೂಡುವ ಸಮಯ, ಹೂ ಕಚ್ಚುವ ಸಮಯದಲ್ಲಿಯೂ ವಿವಿಧ ಬಗೆಯ ರೋಗನಿರೋಧಕ ದ್ರಾವಣಗಳನ್ನು ಬಳಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಕಾರ್ಮಿಕರ ಕೊರತೆಯ ನಡುವೆ ಪದೇ ಪದೇ ಈ ವೆಚ್ಚದಾಯಕ ಪ್ರಕ್ರಿಯೆಗಳನ್ನು ನಡೆಸುವುದು ರೈತರಿಗೆ ಹೊರೆ’ ಎಂಬುದು ರೈತರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>