<p>ಶಿರಸಿ: ‘ಸಹಕಾರಿ ಸಂಘಗಳ ಮುಖಾಂತರ ರೈತರು ವ್ಯವಹಾರ ನಡೆಸಿದಾಗ ಮಾತ್ರ ಪತ್ತು ಮತ್ತು ಮಾರಾಟ ಜೋಡಣೆ ಬಲಗೊಳ್ಳಲು ಸಾಧ್ಯ’ ಎಂದು ಶಾಸಕ ಶಿವರಾಮ ಹೆಬ್ಬಾರ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ದಾಸನಕೊಪ್ಪದಲ್ಲಿ ಶನಿವಾರ ಶಿರಸಿ ಟಿ.ಎಂ.ಎಸ್.ಶಾಖೆಯ ನೂತನ ಗೋದಾಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘2017ರಲ್ಲಿ ದಾಸನಕೊಪ್ಪದಲ್ಲಿ ಟಿ.ಎಂ.ಎಸ್ ಶಾಖೆ ಪ್ರಾರಂಭವಾದಾಗ ಎದುರಾಗಿದ್ದ ವಿದ್ಯುತ್ ಸಮಸ್ಯೆ ನೀಗಿಸಲು ಸರ್ಕಾರದಿಂದ 33 ಕೆ.ವಿ. ಗ್ರಿಡ್ ಮಂಜೂರು ಮಾಡಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಪ್ರತಿಯಾಗಿ ಟಿ.ಎಂ.ಎಸ್. ಸಂಸ್ಥೆಯು ಬನವಾಸಿ ಹಾಗೂ ದಾಸನಕೊಪ್ಪ ಭಾಗದ ರೈತರಿಗೆ ರಿಯಾಯಿತಿ ದರದಲ್ಲಿ ಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಪರಿಕರಗಳನ್ನು ಪೂರೈಸುವ ಮೂಲಕ ಬೆನ್ನೆಲುಬಾಗಿ ನಿಂತಿದೆ’ ಎಂದರು.</p>.<p>ಜಾಗತಿಕ ಯುದ್ಧದ ಪರಿಣಾಮ ಪ್ರಸ್ತುತ ಡಿ.ಎ.ಪಿ. ಮತ್ತು ಯೂರಿಯಾ ಗೊಬ್ಬರಗಳ ಕೊರತೆಯಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ಅಗತ್ಯವಿರುವ ಇತರ ಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಸೂಕ್ತ ನಿರ್ದೇಶನ ನೀಡುವುದಾಗಿ ಶಾಸಕರು ಇದೇ ವೇಳೆ ಭರವಸೆ ನೀಡಿದರು.</p>.<p>ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಹಕಾರಿ ಸಂಘಗಳ ಮೂಲಕವೇ ಮಾರಾಟ ಮಾಡಿದರೆ, ಸಂಕಷ್ಟದ ಸಮಯದಲ್ಲಿ ಸಂಘಗಳು ರೈತರ ನೆರವಿಗೆ ಬರಲು ಸಾಧ್ಯವಾಗುತ್ತದೆ ಎಂ ದರು.</p>.<p>ಅಧ್ಯಕ್ಷತೆಯನ್ನು ಟಿ.ಎಂ.ಎಸ್. ಶಿರಸಿ ಅಧ್ಯಕ್ಷ ಜಿ.ಟಿ.ಹೆಗಡೆ ವಹಿಸಿದ್ದರು. ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ನಿಕಟಪೂರ್ವ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಸದಸ್ಯರಾದ ಎಂ.ಪಿ.ಹೆಗಡೆ, ಎನ್.ಡಿ.ಹೆಗಡೆ , ರವಿ ಹೆಗಡೆ, ಸಿ.ಎಸ್. ಶಾಸ್ತ್ರಿ, ಎಂ.ಎನ್.ಭಟ್, ರಾಜಶೇಖರ ಗೌಡ, ರತ್ನಾಕರ ನಾಯ್ಕ, ಇಂದಿರಾ ಹೆಗಡೆ ಇತರರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೇಮನೆ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-20-605270230</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ‘ಸಹಕಾರಿ ಸಂಘಗಳ ಮುಖಾಂತರ ರೈತರು ವ್ಯವಹಾರ ನಡೆಸಿದಾಗ ಮಾತ್ರ ಪತ್ತು ಮತ್ತು ಮಾರಾಟ ಜೋಡಣೆ ಬಲಗೊಳ್ಳಲು ಸಾಧ್ಯ’ ಎಂದು ಶಾಸಕ ಶಿವರಾಮ ಹೆಬ್ಬಾರ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ದಾಸನಕೊಪ್ಪದಲ್ಲಿ ಶನಿವಾರ ಶಿರಸಿ ಟಿ.ಎಂ.ಎಸ್.ಶಾಖೆಯ ನೂತನ ಗೋದಾಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘2017ರಲ್ಲಿ ದಾಸನಕೊಪ್ಪದಲ್ಲಿ ಟಿ.ಎಂ.ಎಸ್ ಶಾಖೆ ಪ್ರಾರಂಭವಾದಾಗ ಎದುರಾಗಿದ್ದ ವಿದ್ಯುತ್ ಸಮಸ್ಯೆ ನೀಗಿಸಲು ಸರ್ಕಾರದಿಂದ 33 ಕೆ.ವಿ. ಗ್ರಿಡ್ ಮಂಜೂರು ಮಾಡಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಪ್ರತಿಯಾಗಿ ಟಿ.ಎಂ.ಎಸ್. ಸಂಸ್ಥೆಯು ಬನವಾಸಿ ಹಾಗೂ ದಾಸನಕೊಪ್ಪ ಭಾಗದ ರೈತರಿಗೆ ರಿಯಾಯಿತಿ ದರದಲ್ಲಿ ಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಪರಿಕರಗಳನ್ನು ಪೂರೈಸುವ ಮೂಲಕ ಬೆನ್ನೆಲುಬಾಗಿ ನಿಂತಿದೆ’ ಎಂದರು.</p>.<p>ಜಾಗತಿಕ ಯುದ್ಧದ ಪರಿಣಾಮ ಪ್ರಸ್ತುತ ಡಿ.ಎ.ಪಿ. ಮತ್ತು ಯೂರಿಯಾ ಗೊಬ್ಬರಗಳ ಕೊರತೆಯಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ಅಗತ್ಯವಿರುವ ಇತರ ಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಸೂಕ್ತ ನಿರ್ದೇಶನ ನೀಡುವುದಾಗಿ ಶಾಸಕರು ಇದೇ ವೇಳೆ ಭರವಸೆ ನೀಡಿದರು.</p>.<p>ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಹಕಾರಿ ಸಂಘಗಳ ಮೂಲಕವೇ ಮಾರಾಟ ಮಾಡಿದರೆ, ಸಂಕಷ್ಟದ ಸಮಯದಲ್ಲಿ ಸಂಘಗಳು ರೈತರ ನೆರವಿಗೆ ಬರಲು ಸಾಧ್ಯವಾಗುತ್ತದೆ ಎಂ ದರು.</p>.<p>ಅಧ್ಯಕ್ಷತೆಯನ್ನು ಟಿ.ಎಂ.ಎಸ್. ಶಿರಸಿ ಅಧ್ಯಕ್ಷ ಜಿ.ಟಿ.ಹೆಗಡೆ ವಹಿಸಿದ್ದರು. ಉಪಾಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ನಿಕಟಪೂರ್ವ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಸದಸ್ಯರಾದ ಎಂ.ಪಿ.ಹೆಗಡೆ, ಎನ್.ಡಿ.ಹೆಗಡೆ , ರವಿ ಹೆಗಡೆ, ಸಿ.ಎಸ್. ಶಾಸ್ತ್ರಿ, ಎಂ.ಎನ್.ಭಟ್, ರಾಜಶೇಖರ ಗೌಡ, ರತ್ನಾಕರ ನಾಯ್ಕ, ಇಂದಿರಾ ಹೆಗಡೆ ಇತರರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೇಮನೆ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-20-605270230</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>