<p>ಶಿರಸಿ: 'ಹಾಡು, ಭಜನೆ ಮತ್ತು ಪೂಜೆಯಂತಹ ಭಕ್ತಿ ಪ್ರಧಾನ ಮಾರ್ಗಗಳಿಗೆ ಅಪರಿಮಿತ ಶಕ್ತಿಯಿದೆ. ಒಗ್ಗಟ್ಟಿನ ಹೋರಾಟದಿಂದ ನಮಗೆ ಭಾಗಶಃ ಫಲ ಸಿಕ್ಕಿದ್ದು, ನಮ್ಮ ಕಣಿವೆಗಳ ರಕ್ಷಣೆಯ ಕೂಗು ನಾಡಿನಾದ್ಯಂತ ಮೊಳಗುತ್ತಿರಬೇಕು' ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.</p>.<p>ಬೇಡ್ತಿ-ಅಘನಾಶಿನಿ ಮತ್ತು ಶರಾವತಿ ನದಿ ಕಣಿವೆಗಳ ಉಳಿವಿನ ಹೋರಾಟದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆ ನಗರದ ಯೋಗ ಮಂದಿರದಲ್ಲಿ ಭಗವತ್ಪಾದ ಪ್ರಕಾಶನ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪರಿಸರ ಗೀತೆಗಳ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಪ್ರಾಸ್ತಾವಿಕ ಮಾತನಾಡಿ, ‘ವಿಶ್ವ ಜಲದಿನದಂದು ನದಿ ಕಣಿವೆ ಕುರಿತ ಹಾಡುಗಳು ಲೋಕಾರ್ಪಣೆಗೊಂಡಿವೆ. ಈ ಹಿಂದೆ ಶಿರಸಿಯ ಮಾತೃಮಂಡಳಿಯವರು ಬೀದಿಗಳಲ್ಲಿ ಪರಿಸರ ಗೀತೆ ಹಾಡಿ ನಡೆಸಿದ ಜನಜಾಗೃತಿ ಮಾದರಿಯಾಗಿದೆ. ಸ್ಪರ್ಧೆಗೆ ಬಂದಿದ್ದ 70ಕ್ಕೂ ಹೆಚ್ಚು ಗೀತೆಗಳನ್ನು ಧ್ವನಿಮುದ್ರಿಸಿ ಪ್ರಸಾರ ಮಾಡುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಭಗವತ್ಪಾದ ಪ್ರಕಾಶನದ ನಿರ್ದೇಶಕ ಕೆ.ವಿ.ಭಟ್ ವಿಜೇತರನ್ನು ಘೋಷಿಸಿದರು. ಯಶಸ್ವಿನಿ ಅಜ್ಜಿಬಳ, ರಮೇಶ ಬಿಳೇಕಲ್, ಮಂಜುಳಾ ಉಡುಪಿ, ಗೀತಾ ಬೊಂಗಳೂರು, ಶರಾವತಿ ಶಿರ್ನಾಲಾ, ರವಿಶಂಕರ ದೊಡ್ನಳ್ಳಿ, ಗಣಪತಿ ವಜ್ರಳ್ಳಿ ಹಾಗೂ ಗುರುಪ್ರಸಾದ ಮಾಳಕೊಪ್ಪಾ ಅವರು ಬಹುಮಾನ ಪಡೆದರು.</p>.<p>ನಿರ್ಣಾಯಕಿ ಭಾಗರಥಿ ಹೆಗಡೆ, ನಿರ್ವಾಹಕಿ ಭಾರತಿ ಹೆಗಡೆ ಮತ್ತು ಆರಾಧನಾ ಭಜನಾ ತಂಡದವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-20-322836892</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: 'ಹಾಡು, ಭಜನೆ ಮತ್ತು ಪೂಜೆಯಂತಹ ಭಕ್ತಿ ಪ್ರಧಾನ ಮಾರ್ಗಗಳಿಗೆ ಅಪರಿಮಿತ ಶಕ್ತಿಯಿದೆ. ಒಗ್ಗಟ್ಟಿನ ಹೋರಾಟದಿಂದ ನಮಗೆ ಭಾಗಶಃ ಫಲ ಸಿಕ್ಕಿದ್ದು, ನಮ್ಮ ಕಣಿವೆಗಳ ರಕ್ಷಣೆಯ ಕೂಗು ನಾಡಿನಾದ್ಯಂತ ಮೊಳಗುತ್ತಿರಬೇಕು' ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.</p>.<p>ಬೇಡ್ತಿ-ಅಘನಾಶಿನಿ ಮತ್ತು ಶರಾವತಿ ನದಿ ಕಣಿವೆಗಳ ಉಳಿವಿನ ಹೋರಾಟದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆ ನಗರದ ಯೋಗ ಮಂದಿರದಲ್ಲಿ ಭಗವತ್ಪಾದ ಪ್ರಕಾಶನ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪರಿಸರ ಗೀತೆಗಳ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.</p>.<p>ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಪ್ರಾಸ್ತಾವಿಕ ಮಾತನಾಡಿ, ‘ವಿಶ್ವ ಜಲದಿನದಂದು ನದಿ ಕಣಿವೆ ಕುರಿತ ಹಾಡುಗಳು ಲೋಕಾರ್ಪಣೆಗೊಂಡಿವೆ. ಈ ಹಿಂದೆ ಶಿರಸಿಯ ಮಾತೃಮಂಡಳಿಯವರು ಬೀದಿಗಳಲ್ಲಿ ಪರಿಸರ ಗೀತೆ ಹಾಡಿ ನಡೆಸಿದ ಜನಜಾಗೃತಿ ಮಾದರಿಯಾಗಿದೆ. ಸ್ಪರ್ಧೆಗೆ ಬಂದಿದ್ದ 70ಕ್ಕೂ ಹೆಚ್ಚು ಗೀತೆಗಳನ್ನು ಧ್ವನಿಮುದ್ರಿಸಿ ಪ್ರಸಾರ ಮಾಡುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಭಗವತ್ಪಾದ ಪ್ರಕಾಶನದ ನಿರ್ದೇಶಕ ಕೆ.ವಿ.ಭಟ್ ವಿಜೇತರನ್ನು ಘೋಷಿಸಿದರು. ಯಶಸ್ವಿನಿ ಅಜ್ಜಿಬಳ, ರಮೇಶ ಬಿಳೇಕಲ್, ಮಂಜುಳಾ ಉಡುಪಿ, ಗೀತಾ ಬೊಂಗಳೂರು, ಶರಾವತಿ ಶಿರ್ನಾಲಾ, ರವಿಶಂಕರ ದೊಡ್ನಳ್ಳಿ, ಗಣಪತಿ ವಜ್ರಳ್ಳಿ ಹಾಗೂ ಗುರುಪ್ರಸಾದ ಮಾಳಕೊಪ್ಪಾ ಅವರು ಬಹುಮಾನ ಪಡೆದರು.</p>.<p>ನಿರ್ಣಾಯಕಿ ಭಾಗರಥಿ ಹೆಗಡೆ, ನಿರ್ವಾಹಕಿ ಭಾರತಿ ಹೆಗಡೆ ಮತ್ತು ಆರಾಧನಾ ಭಜನಾ ತಂಡದವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-20-322836892</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>