ದೂಳಿನ ಸಮಸ್ಯೆಯ ಕಾರಣಕ್ಕೆ ಶಿಲ್ಪವನಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆ ಆಗಿದೆ. ಶೀಘ್ರದಲ್ಲಿ ಇಲ್ಲಿನ ಕಲಾಕೃತಿಗಳು, ಪಾದಚಾರಿ ಮಾರ್ಗವನ್ನು ತೊಳೆದು ಸ್ವಚ್ಛತೆ ಕಾಯ್ದುಕೊಳ್ಳಲಿದ್ದೇವೆ
ಗಿರೀಶ, ಆರ್.ಎಫ್.ಒ. ಶಿರಸಿ.
ದೂಳಿನಿಂದ ಆರೋಗ್ಯ ಸಮಸ್ಯೆ
ರಸ್ತೆ ನಿರ್ಮಾಣದ ವೇಳೆ ಏಳುವ ದೂಳು ಕೇವಲ ಶಿಲ್ಪವನಕ್ಕೆ ಮಾತ್ರ ಸಮಸ್ಯೆಯಾಗಿಲ್ಲ. ಈ ರಸ್ತೆಯ ಚಿಪಗಿ ಕ್ರಾಸ್ನಿಂದ ಬಿಸಲಕೊಪ್ಪದವರೆಗೂ ರಸ್ತೆ ನಿರ್ಮಾಣದ ದೂಳು ಇಲ್ಲಿನ ನಿವಾಸಿಗಳಿಗೆ ಗೋಳಾಗಿದೆ. ರಸ್ತೆ ಅಕ್ಕಪಕ್ಕದ ಮನೆಗಳೆಲ್ಲ ಈಗ ದೂಳಿನಿಂದ ಕೆಂಪಾಗಿದ್ದು ಒಂದೆಡೆಯಾದರೆ ಇಲ್ಲಿಯ ನಿವಾಸಿಗಳೂ ಉಸಿರಾಟಕ್ಕೆ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂಬುದು ಸಾರ್ವಜನಿಕರ ದೂರಾಗಿದೆ.