<p>ಶಿರಸಿ: ಸೋದೆ ಅರಸರ ಕಾಲದ ಐತಿಹಾಸಿಕ ಹಿನ್ನೆಲೆಯುಳ್ಳ ಸೋಂದಾ ಹಳೆಯೂರು ಮಜರೆಯ ಶಂಕರನಾರಾಯಣ ದೇವಸ್ಥಾನದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಅಷ್ಟಬಂಧ ಮತ್ತು ಜೀವಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.</p>.<p>16ನೇ ಶತಮಾನದ ಈ ಶಿಲಾ ದೇವಾಲಯವು ಶೈವ– ವೈಷ್ಣವ ಸಮನ್ವಯದ ಅಪರೂಪದ ಸಂಕೇತವಾಗಿದ್ದು, ದಕ್ಷಿಣ ಭಾರತದಲ್ಲಿಯೇ ವಿಶಿಷ್ಟವೆನಿಸಿದೆ. ಅವಸಾನದ ಅಂಚಿನಲ್ಲಿದ್ದ ಈ ಗುಡಿಯನ್ನು ಸೋಂದಾ ಜಾಗೃತ ವೇದಿಕೆ, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದಿಂದ ಜೀರ್ಣೋದ್ಧಾರಗೊಳಿಸಲಾಗಿತ್ತು. ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶಯದಂತೆ 22 ವರ್ಷಗಳ ನಂತರ ದೇವತಾ ಶಕ್ತಿ ವೃದ್ಧಿಗಾಗಿ ಪುನಃ ಅಷ್ಟಬಂಧ ಕಾರ್ಯ ಹಮ್ಮಿಕೊಳ್ಳಲಾಗಿದೆ.</p>.<p>ಮಾರ್ಚ್ 31ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಏ.1ರಂದು ಮಧ್ಯಾಹ್ನ 12.23ರ ಮುಹೂರ್ತದಲ್ಲಿ ಅಷ್ಟಬಂಧ–ಜೀವಕುಂಭಾಭಿಷೇಕ ನಡೆಯಲಿದೆ. ಏ.2ರಂದು ಹನುಮ ಜಯಂತಿಯಂದು ಸತ್ಯನಾರಾಯಣ ವ್ರತ ಹಾಗೂ ಸ್ವರ್ಣವಲ್ಲೀ ಸ್ವಾಮೀಜಿ ಅವರಿಂದ ದೇವರಿಗೆ ಬೆಳ್ಳಿ ಆಭರಣ ಸಮರ್ಪಣೆ ಮತ್ತು ಆಶೀರ್ವಚನ ಜರುಗಲಿದೆ. ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿ ಕೋರಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-20-1591208949</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಸೋದೆ ಅರಸರ ಕಾಲದ ಐತಿಹಾಸಿಕ ಹಿನ್ನೆಲೆಯುಳ್ಳ ಸೋಂದಾ ಹಳೆಯೂರು ಮಜರೆಯ ಶಂಕರನಾರಾಯಣ ದೇವಸ್ಥಾನದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಅಷ್ಟಬಂಧ ಮತ್ತು ಜೀವಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.</p>.<p>16ನೇ ಶತಮಾನದ ಈ ಶಿಲಾ ದೇವಾಲಯವು ಶೈವ– ವೈಷ್ಣವ ಸಮನ್ವಯದ ಅಪರೂಪದ ಸಂಕೇತವಾಗಿದ್ದು, ದಕ್ಷಿಣ ಭಾರತದಲ್ಲಿಯೇ ವಿಶಿಷ್ಟವೆನಿಸಿದೆ. ಅವಸಾನದ ಅಂಚಿನಲ್ಲಿದ್ದ ಈ ಗುಡಿಯನ್ನು ಸೋಂದಾ ಜಾಗೃತ ವೇದಿಕೆ, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದಿಂದ ಜೀರ್ಣೋದ್ಧಾರಗೊಳಿಸಲಾಗಿತ್ತು. ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶಯದಂತೆ 22 ವರ್ಷಗಳ ನಂತರ ದೇವತಾ ಶಕ್ತಿ ವೃದ್ಧಿಗಾಗಿ ಪುನಃ ಅಷ್ಟಬಂಧ ಕಾರ್ಯ ಹಮ್ಮಿಕೊಳ್ಳಲಾಗಿದೆ.</p>.<p>ಮಾರ್ಚ್ 31ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಏ.1ರಂದು ಮಧ್ಯಾಹ್ನ 12.23ರ ಮುಹೂರ್ತದಲ್ಲಿ ಅಷ್ಟಬಂಧ–ಜೀವಕುಂಭಾಭಿಷೇಕ ನಡೆಯಲಿದೆ. ಏ.2ರಂದು ಹನುಮ ಜಯಂತಿಯಂದು ಸತ್ಯನಾರಾಯಣ ವ್ರತ ಹಾಗೂ ಸ್ವರ್ಣವಲ್ಲೀ ಸ್ವಾಮೀಜಿ ಅವರಿಂದ ದೇವರಿಗೆ ಬೆಳ್ಳಿ ಆಭರಣ ಸಮರ್ಪಣೆ ಮತ್ತು ಆಶೀರ್ವಚನ ಜರುಗಲಿದೆ. ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿ ಕೋರಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-20-1591208949</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>