<p>ಶಿರಸಿ: ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ಅಪರ ಕಾರ್ಯಗಳನ್ನು ನೆಮ್ಮದಿಯ ವಾತಾವರಣ, ಸುವ್ಯವಸ್ಥಿತವಾಗಿ ಹಾಗೂ ಗೌರವಯುತವಾಗಿ ನೆರವೇರಿಸಿಕೊಳ್ಳಲು ನಿರ್ಮಿಸಲಾದ ಶಿವಾಸ ಕಟ್ಟಡವನ್ನು ಭಾನುವಾರ ನಗರದ ವಿದ್ಯಾನಗರದ ನೆಮ್ಮದಿ ಆವರಣದಲ್ಲಿ ಲೋಕಾರ್ಪಣೆ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ನೇತ್ರತಜ್ಞ ಡಾ. ಶಿವರಾಮ ಕೆ.ವಿ. ಮಾತನಾಡಿ, ‘ಬದುಕಿನಲ್ಲಿ ಸಮಾಜ ನಮಗೆ ಬಹಳ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಸಮಾಜಕ್ಕೆ ಏನಾದರೂ ನೀಡಬೇಕೆಂಬ ಮನೋಭಾವದಿಂದ ಈ ಶಿವಾಸ ನಿರ್ಮಾಣದಲ್ಲಿ ಸಹಕಾರದ ಪಾಲನ್ನು ನಮ್ಮ ಕುಟುಂಬ ಮತ್ತು ಸಂಸ್ಥೆ ನೀಡಿದೆ’ ಎಂದರು.</p>.<p>‘ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ದುಃಖದ ಸಂದರ್ಭದಲ್ಲಿಯೂ ಸ್ವಲ್ಪ ನೆಮ್ಮದಿಯ ವಾತಾವರಣದಲ್ಲಿ ವಿಧಿವಿಧಾನಗಳನ್ನು ನೆರವೇರಿಸಿಕೊಳ್ಳಲು ಈ ಕಟ್ಟಡ ಸಹಕಾರಿಯಾಗಲಿ ಎಂಬುದು ನಮ್ಮ ಆಶಯ’ ಎಂದು ಹೇಳಿದರು.</p>.<p>ಕಟ್ಟಡ ಉಸ್ತುವಾರಿ ವಿ.ಪಿ.ಹೆಗಡೆ ಮಾತನಾಡಿ, ‘ಅಪರ ಕಾರ್ಯಗಳಿಗೆ ಅಗತ್ಯವಾದ ಮೂಲಸೌಕರ್ಯ, ವಿಶ್ರಾಂತಿ ವ್ಯವಸ್ಥೆ ಹಾಗೂ ಶಾಂತ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಈ ಕಟ್ಟಡವನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶವೂ ಇದೆ’ ಎಂದು ತಿಳಿಸಿದರು.</p>.<p>ನೂತನ ಶಿವಾಸ ಕಟ್ಟಡವನ್ನು ರಘುರಾಮ ಕೆ.ವಿ ಲೋಕಾರ್ಪಣೆ ಮಾಡಿದರು. ಭೀಮಣ್ಣ ನಾಯ್ಕ, ಹಿರಿಯ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಸೇರಿದಂತೆ ಹಲವರು ನೂತನ ಕಟ್ಟಡ ವೀಕ್ಷಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-20-1837512022</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ಅಪರ ಕಾರ್ಯಗಳನ್ನು ನೆಮ್ಮದಿಯ ವಾತಾವರಣ, ಸುವ್ಯವಸ್ಥಿತವಾಗಿ ಹಾಗೂ ಗೌರವಯುತವಾಗಿ ನೆರವೇರಿಸಿಕೊಳ್ಳಲು ನಿರ್ಮಿಸಲಾದ ಶಿವಾಸ ಕಟ್ಟಡವನ್ನು ಭಾನುವಾರ ನಗರದ ವಿದ್ಯಾನಗರದ ನೆಮ್ಮದಿ ಆವರಣದಲ್ಲಿ ಲೋಕಾರ್ಪಣೆ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ನೇತ್ರತಜ್ಞ ಡಾ. ಶಿವರಾಮ ಕೆ.ವಿ. ಮಾತನಾಡಿ, ‘ಬದುಕಿನಲ್ಲಿ ಸಮಾಜ ನಮಗೆ ಬಹಳ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಸಮಾಜಕ್ಕೆ ಏನಾದರೂ ನೀಡಬೇಕೆಂಬ ಮನೋಭಾವದಿಂದ ಈ ಶಿವಾಸ ನಿರ್ಮಾಣದಲ್ಲಿ ಸಹಕಾರದ ಪಾಲನ್ನು ನಮ್ಮ ಕುಟುಂಬ ಮತ್ತು ಸಂಸ್ಥೆ ನೀಡಿದೆ’ ಎಂದರು.</p>.<p>‘ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ದುಃಖದ ಸಂದರ್ಭದಲ್ಲಿಯೂ ಸ್ವಲ್ಪ ನೆಮ್ಮದಿಯ ವಾತಾವರಣದಲ್ಲಿ ವಿಧಿವಿಧಾನಗಳನ್ನು ನೆರವೇರಿಸಿಕೊಳ್ಳಲು ಈ ಕಟ್ಟಡ ಸಹಕಾರಿಯಾಗಲಿ ಎಂಬುದು ನಮ್ಮ ಆಶಯ’ ಎಂದು ಹೇಳಿದರು.</p>.<p>ಕಟ್ಟಡ ಉಸ್ತುವಾರಿ ವಿ.ಪಿ.ಹೆಗಡೆ ಮಾತನಾಡಿ, ‘ಅಪರ ಕಾರ್ಯಗಳಿಗೆ ಅಗತ್ಯವಾದ ಮೂಲಸೌಕರ್ಯ, ವಿಶ್ರಾಂತಿ ವ್ಯವಸ್ಥೆ ಹಾಗೂ ಶಾಂತ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಈ ಕಟ್ಟಡವನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶವೂ ಇದೆ’ ಎಂದು ತಿಳಿಸಿದರು.</p>.<p>ನೂತನ ಶಿವಾಸ ಕಟ್ಟಡವನ್ನು ರಘುರಾಮ ಕೆ.ವಿ ಲೋಕಾರ್ಪಣೆ ಮಾಡಿದರು. ಭೀಮಣ್ಣ ನಾಯ್ಕ, ಹಿರಿಯ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಸೇರಿದಂತೆ ಹಲವರು ನೂತನ ಕಟ್ಟಡ ವೀಕ್ಷಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-20-1837512022</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>