<p>ಕಾರವಾರ: ಮಹಾ ಶಿವರಾತ್ರಿ ಅಂಗವಾಗಿ ಶನಿವಾರ ಜಿಲ್ಲೆಯ ಶಿವತಾಣಗಳಿಗೆ ಭಕ್ತ ಸಾಗರ ಹರಿದು ಬಂದಿತ್ತು. ಅಭಿಷೇಕ ನೆರವೇರಿಸಿ, ಬಿಲ್ವಪತ್ರೆ ಅರ್ಪಿಸಿ ಕೃತಾರ್ಥರಾದರು.</p>.<p>ಗೋಕರ್ಣ, ಮುರುಡೇಶ್ವರ, ಯಾಣ, ಬನವಾಸಿ, ಕವಳಾ ಗುಹೆ, ಸಹಸ್ರಲಿಂಗ ಸೇರಿದಂತೆ ಪ್ರಮುಖ ಶಿವತಾಣಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸೇರಿದ್ದರು. ನಸುಕಿನ ಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ ಕಾರ್ಯಗಳು ನಡೆದವು. ನಗರದ ಬಾಡ ಗ್ರಾಮದ ಮಹಾದೇವ ದೇವಸ್ಥಾನ, ಶೇಜವಾಡಾದ ಶೆಜ್ಜೇಶ್ವರ ದೇವಾಲಯಗಳಲ್ಲಿಯೂ ಜನಜಂಗುಳಿ ಕಂಡುಬಂತು.</p>.<p>ದೇವರಿಗೆ ನೇರವಾಗಿ ಅಭಿಷೇಕ ಮಾಡಲು ಭಕ್ತರಿಗೆ ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಅವಕಾಶ ಮಾಡಿಕೊಡುವ ವಾಡಿಕೆ ಹಲವೆಡೆ ಇದೆ. ಮಹಾದೇವ ದೇವಸ್ಥಾನ, ಬನವಾಸಿ, ಇನ್ನಿತರ ಕಡೆಗಳಲ್ಲಿ ದೊರೆತ ಅವಕಾಶವನ್ನು ಬಳಸಿಕೊಳ್ಳಲು ಭಕ್ತರು ಕಾತರದಿಂದ ಭೇಟಿ ನೀಡಿದರು.</p>.<p>ಹಬ್ಬದ ಅಂಗವಾಗಿ ಪ್ರಮುಖ ತಾಣಗಳಿಗೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ಶಿವತಾಣಗಳಿಗೆ ತೆರಳುವ ಬಸ್ಗಳು ಜನದಟ್ಟಣೆಯೊಂದಿಗೆ ಸಂಚರಿಸಿದವು.</p>.<p>ಗ್ರಾಮೀಣ ಭಾಗದ ಶಿವ ದೇವಾಲಯಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕಡಲತೀರಗಳಲ್ಲಿಯೂ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಕಾರವಾರ ಸಹಿತ ಕೆಲವೆಡೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರವಾರ: ಮಹಾ ಶಿವರಾತ್ರಿ ಅಂಗವಾಗಿ ಶನಿವಾರ ಜಿಲ್ಲೆಯ ಶಿವತಾಣಗಳಿಗೆ ಭಕ್ತ ಸಾಗರ ಹರಿದು ಬಂದಿತ್ತು. ಅಭಿಷೇಕ ನೆರವೇರಿಸಿ, ಬಿಲ್ವಪತ್ರೆ ಅರ್ಪಿಸಿ ಕೃತಾರ್ಥರಾದರು.</p>.<p>ಗೋಕರ್ಣ, ಮುರುಡೇಶ್ವರ, ಯಾಣ, ಬನವಾಸಿ, ಕವಳಾ ಗುಹೆ, ಸಹಸ್ರಲಿಂಗ ಸೇರಿದಂತೆ ಪ್ರಮುಖ ಶಿವತಾಣಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸೇರಿದ್ದರು. ನಸುಕಿನ ಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ ಕಾರ್ಯಗಳು ನಡೆದವು. ನಗರದ ಬಾಡ ಗ್ರಾಮದ ಮಹಾದೇವ ದೇವಸ್ಥಾನ, ಶೇಜವಾಡಾದ ಶೆಜ್ಜೇಶ್ವರ ದೇವಾಲಯಗಳಲ್ಲಿಯೂ ಜನಜಂಗುಳಿ ಕಂಡುಬಂತು.</p>.<p>ದೇವರಿಗೆ ನೇರವಾಗಿ ಅಭಿಷೇಕ ಮಾಡಲು ಭಕ್ತರಿಗೆ ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಅವಕಾಶ ಮಾಡಿಕೊಡುವ ವಾಡಿಕೆ ಹಲವೆಡೆ ಇದೆ. ಮಹಾದೇವ ದೇವಸ್ಥಾನ, ಬನವಾಸಿ, ಇನ್ನಿತರ ಕಡೆಗಳಲ್ಲಿ ದೊರೆತ ಅವಕಾಶವನ್ನು ಬಳಸಿಕೊಳ್ಳಲು ಭಕ್ತರು ಕಾತರದಿಂದ ಭೇಟಿ ನೀಡಿದರು.</p>.<p>ಹಬ್ಬದ ಅಂಗವಾಗಿ ಪ್ರಮುಖ ತಾಣಗಳಿಗೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ಶಿವತಾಣಗಳಿಗೆ ತೆರಳುವ ಬಸ್ಗಳು ಜನದಟ್ಟಣೆಯೊಂದಿಗೆ ಸಂಚರಿಸಿದವು.</p>.<p>ಗ್ರಾಮೀಣ ಭಾಗದ ಶಿವ ದೇವಾಲಯಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕಡಲತೀರಗಳಲ್ಲಿಯೂ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಕಾರವಾರ ಸಹಿತ ಕೆಲವೆಡೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>