<p><strong>ಶಿರಸಿ:</strong> ತಾತ್ಕಾಲಿಕ ಶೆಡ್ಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಪುಟಾಣಿ ಮಕ್ಕಳು ಬಿಸಿಲ ತಾಪಕ್ಕೆ ಹೈರಾಣಾಗಿದ್ದಾರೆ. ಚಾವಣಿಗೆ ಅಳವಡಿಸಲಾದ ಸಿಮೆಂಟ್ ಹಾಗೂ ತಗಡಿನ ಶೀಟ್ಗಳು ಬೇಸಿಗೆಯಲ್ಲಿ ಕೆಂಡದಂತೆ ಕಾಯುತ್ತಿದ್ದು, ಮಕ್ಕಳು ಒಳಗೆ ಕುಳಿತುಕೊಳ್ಳಲೂ ಸಾಧ್ಯವಾಗದೆ ಹೊರ ಆವರಣದಲ್ಲಿ ನೆರಳನ್ನೇ ಆಶ್ರಯಿಸುವ ಅನಿವಾರ್ಯ ಎದುರಾಗಿದೆ.</p>.<p>ತಾಲ್ಲೂಕಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟೂ 378 ಅಂಗನವಾಡಿಗಳಿವೆ. ನೂರಕ್ಕೂ ಅಧಿಕ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದೇ ಸಮಸ್ಯೆ ಆಗಿದೆ. ಅವುಗಳಲ್ಲಿ 46 ಅಂಗನವಾಡಿಗಳು ಬಾಡಿಗೆ ಕಟ್ಟಡ ಅಥವಾ ಅಸಮರ್ಪಕ ಕಟ್ಟಡದಲ್ಲಿ ನಡೆಯುತ್ತಿವೆ. ಹಲವು ಕೇಂದ್ರಗಳು ಬಾಡಿಗೆ ಕಟ್ಟಡ ಅಥವಾ ಹಳೆಯ ಸಮಾಜ ಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕಟ್ಟಡಗಳಿಗೆ ಸಿಮೆಂಟ್ ಹಾಗೂ ತಗಡಿನ ಶೀಟ್ ಅಳವಡಿಸಲಾಗಿದೆ. ಮಧ್ಯಾಹ್ನವಾಗುತ್ತಿದ್ದಂತೆ ಕಟ್ಟಡ ಭಾಗ ಶಾಖದ ಕುಲುಮೆಯಂತಾಗುತ್ತಿದೆ. 3ರಿಂದ 6 ವರ್ಷದ ಒಳಗಿನ ಪುಟ್ಟ ಮಕ್ಕಳು ತೀವ್ರ ಸೆಖೆಯಿಂದಾಗಿ ಅಸ್ವಸ್ಥರಾಗುತ್ತಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಕಾರ್ಯಕರ್ತೆಯರು ಹೊರಗೆ ಕರೆತಂದು ಚಾಪೆ ಹಾಸಿ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.</p>.<p>‘ಸಿಮೆಂಟ್ ಮತ್ತು ತಗಡಿನ ಶೀಟ್ಗಳು ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ಒಳಗಿನ ಉಷ್ಣತೆ ಅಧಿಕವಾಗಿದೆ. ಇದರಿಂದ ಮಕ್ಕಳ ಮೈಮೇಲೆ ಬಿಸಿಲಿನ ಗುಳ್ಳೆಗಳು ಎದ್ದು ಗಾಯಗಳಾಗುತ್ತಿವೆ. ಮಳೆಗಾಲದಲ್ಲಿ ಇದೇ ಶೀಟ್ಗಳು ಸೋರುತ್ತವೆ. ಇಲಾಖೆಯು ಕೂಡಲೇ ಇಂತಹ ಕೇಂದ್ರಗಳಿಗೆ ಸುಸಜ್ಜಿತ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಡಬೇಕು’ ಎಂದು ಪಾಲಕರು ಒತ್ತಾಯಿಸುತ್ತಿದ್ದಾರೆ.</p>.<p>‘ಹಲವೆಡೆ ಅಂಗನವಾಡಿಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಮಕ್ಕಳು ಬಿಸಿಲಿನ ಬೇಗೆಗೆ ಹೊರಗೆ ಬಂದು ಕುಳಿತಾಗ ದನ– ಕರುಗಳು ಹಾಗೂ ಬೀದಿ ನಾಯಿಗಳ ಭೀತಿ ಎದುರಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳು ಕಟ್ಟಡ ನಿರ್ಮಾಣಕ್ಕೆ ಠರಾವು ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರೂ, ಅನುದಾನದ ಕೊರತೆಯಿಂದಾಗಿ ಯೋಜನೆಗಳು ನನೆಗುದಿಗೆ ಬಿದ್ದಿವೆ’ ಎನ್ನುತ್ತಾರೆ ಹುತ್ಗಾರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ನಾಯ್ಕ.</p>.<p>‘ಬಿಸಿಲಿನ ಝಳವು ಮಕ್ಕಳನ್ನಷ್ಟೇ ಅಲ್ಲದೆ, ದಿನವಿಡೀ ಅಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು, ತಗಡಿನ ಶೀಟ್ನಡಿ ಬೆವರುತ್ತಿರುವ ಪುಟಾಣಿಗಳಿಗೆ ಶಾಶ್ವತ ಸೂರು ಕಲ್ಪಿಸಬೇಕಿದೆ’ ಎನ್ನುತ್ತಾರೆ ಗಣೇಶನಗರ ನಿವಾಸಿ ಅಂಗನವಾಡಿ ಪಾಲಕಿ ಲಕ್ಷ್ಮೀ ಗೊಲ್ಲರ.</p>.<div><blockquote>ತಾಲ್ಲೂಕಿನ ಎಲ್ಲ ಅಂಗನವಾಡಿಗಳಿಗೂ ಈಗಾಗಲೇ ಇಲಾಖೆಯಿಂದ ಫ್ಯಾನ್ ಅಳವಡಿಸಲಾಗಿದೆ. ಸಮಸ್ಯೆ ಇರುವ ಅಂಗನವಾಡಿಗೆ ತೆರಳಿ ಪರಿಶೀಲಿಸಿ, ಪರಿಹರಿಸುವ ಕುರಿತು ಪರಿಶೀಲಿಸುತ್ತೇನೆ </blockquote><span class="attribution">ನಂದಕುಮಾರ, ಸಿಡಿಪಿಒ, ಶಿರಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ತಾತ್ಕಾಲಿಕ ಶೆಡ್ಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಪುಟಾಣಿ ಮಕ್ಕಳು ಬಿಸಿಲ ತಾಪಕ್ಕೆ ಹೈರಾಣಾಗಿದ್ದಾರೆ. ಚಾವಣಿಗೆ ಅಳವಡಿಸಲಾದ ಸಿಮೆಂಟ್ ಹಾಗೂ ತಗಡಿನ ಶೀಟ್ಗಳು ಬೇಸಿಗೆಯಲ್ಲಿ ಕೆಂಡದಂತೆ ಕಾಯುತ್ತಿದ್ದು, ಮಕ್ಕಳು ಒಳಗೆ ಕುಳಿತುಕೊಳ್ಳಲೂ ಸಾಧ್ಯವಾಗದೆ ಹೊರ ಆವರಣದಲ್ಲಿ ನೆರಳನ್ನೇ ಆಶ್ರಯಿಸುವ ಅನಿವಾರ್ಯ ಎದುರಾಗಿದೆ.</p>.<p>ತಾಲ್ಲೂಕಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟೂ 378 ಅಂಗನವಾಡಿಗಳಿವೆ. ನೂರಕ್ಕೂ ಅಧಿಕ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದೇ ಸಮಸ್ಯೆ ಆಗಿದೆ. ಅವುಗಳಲ್ಲಿ 46 ಅಂಗನವಾಡಿಗಳು ಬಾಡಿಗೆ ಕಟ್ಟಡ ಅಥವಾ ಅಸಮರ್ಪಕ ಕಟ್ಟಡದಲ್ಲಿ ನಡೆಯುತ್ತಿವೆ. ಹಲವು ಕೇಂದ್ರಗಳು ಬಾಡಿಗೆ ಕಟ್ಟಡ ಅಥವಾ ಹಳೆಯ ಸಮಾಜ ಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕಟ್ಟಡಗಳಿಗೆ ಸಿಮೆಂಟ್ ಹಾಗೂ ತಗಡಿನ ಶೀಟ್ ಅಳವಡಿಸಲಾಗಿದೆ. ಮಧ್ಯಾಹ್ನವಾಗುತ್ತಿದ್ದಂತೆ ಕಟ್ಟಡ ಭಾಗ ಶಾಖದ ಕುಲುಮೆಯಂತಾಗುತ್ತಿದೆ. 3ರಿಂದ 6 ವರ್ಷದ ಒಳಗಿನ ಪುಟ್ಟ ಮಕ್ಕಳು ತೀವ್ರ ಸೆಖೆಯಿಂದಾಗಿ ಅಸ್ವಸ್ಥರಾಗುತ್ತಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಕಾರ್ಯಕರ್ತೆಯರು ಹೊರಗೆ ಕರೆತಂದು ಚಾಪೆ ಹಾಸಿ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.</p>.<p>‘ಸಿಮೆಂಟ್ ಮತ್ತು ತಗಡಿನ ಶೀಟ್ಗಳು ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ಒಳಗಿನ ಉಷ್ಣತೆ ಅಧಿಕವಾಗಿದೆ. ಇದರಿಂದ ಮಕ್ಕಳ ಮೈಮೇಲೆ ಬಿಸಿಲಿನ ಗುಳ್ಳೆಗಳು ಎದ್ದು ಗಾಯಗಳಾಗುತ್ತಿವೆ. ಮಳೆಗಾಲದಲ್ಲಿ ಇದೇ ಶೀಟ್ಗಳು ಸೋರುತ್ತವೆ. ಇಲಾಖೆಯು ಕೂಡಲೇ ಇಂತಹ ಕೇಂದ್ರಗಳಿಗೆ ಸುಸಜ್ಜಿತ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಡಬೇಕು’ ಎಂದು ಪಾಲಕರು ಒತ್ತಾಯಿಸುತ್ತಿದ್ದಾರೆ.</p>.<p>‘ಹಲವೆಡೆ ಅಂಗನವಾಡಿಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಮಕ್ಕಳು ಬಿಸಿಲಿನ ಬೇಗೆಗೆ ಹೊರಗೆ ಬಂದು ಕುಳಿತಾಗ ದನ– ಕರುಗಳು ಹಾಗೂ ಬೀದಿ ನಾಯಿಗಳ ಭೀತಿ ಎದುರಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳು ಕಟ್ಟಡ ನಿರ್ಮಾಣಕ್ಕೆ ಠರಾವು ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರೂ, ಅನುದಾನದ ಕೊರತೆಯಿಂದಾಗಿ ಯೋಜನೆಗಳು ನನೆಗುದಿಗೆ ಬಿದ್ದಿವೆ’ ಎನ್ನುತ್ತಾರೆ ಹುತ್ಗಾರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ನಾಯ್ಕ.</p>.<p>‘ಬಿಸಿಲಿನ ಝಳವು ಮಕ್ಕಳನ್ನಷ್ಟೇ ಅಲ್ಲದೆ, ದಿನವಿಡೀ ಅಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು, ತಗಡಿನ ಶೀಟ್ನಡಿ ಬೆವರುತ್ತಿರುವ ಪುಟಾಣಿಗಳಿಗೆ ಶಾಶ್ವತ ಸೂರು ಕಲ್ಪಿಸಬೇಕಿದೆ’ ಎನ್ನುತ್ತಾರೆ ಗಣೇಶನಗರ ನಿವಾಸಿ ಅಂಗನವಾಡಿ ಪಾಲಕಿ ಲಕ್ಷ್ಮೀ ಗೊಲ್ಲರ.</p>.<div><blockquote>ತಾಲ್ಲೂಕಿನ ಎಲ್ಲ ಅಂಗನವಾಡಿಗಳಿಗೂ ಈಗಾಗಲೇ ಇಲಾಖೆಯಿಂದ ಫ್ಯಾನ್ ಅಳವಡಿಸಲಾಗಿದೆ. ಸಮಸ್ಯೆ ಇರುವ ಅಂಗನವಾಡಿಗೆ ತೆರಳಿ ಪರಿಶೀಲಿಸಿ, ಪರಿಹರಿಸುವ ಕುರಿತು ಪರಿಶೀಲಿಸುತ್ತೇನೆ </blockquote><span class="attribution">ನಂದಕುಮಾರ, ಸಿಡಿಪಿಒ, ಶಿರಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>