<p><strong>ಶಿರಸಿ:</strong> ಸಾಗರಮಾಲಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಶಿರಸಿ– ಹಾವೇರಿ– ಕುಮಟಾ ರಾಷ್ಟ್ರೀಯ ಹೆದ್ದಾರಿ (766ಇ) ಕಾಮಗಾರಿಯಡಿ ಅಗೆದು ಹಾಕಲಾದ ರಸ್ತೆಯಿಂದ ಏಳುತ್ತಿರುವ ದೂಳಿನ ಸಮಸ್ಯೆಯಿಂದಾಗಿ ರಸ್ತೆಯಂಚಿನ ನಿವಾಸಿಗಳಲ್ಲಿ ಉಸಿರಾಟ ಸಂಬಂಧ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದರ ಜತೆ ಬದಲಿ ಮಾರ್ಗಗಳೂ ತೀರಾ ಹದಗೆಟ್ಟಿದ್ದು, ವಾಹನ ಸವಾರರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಳೆದ ಐದು ತಿಂಗಳಿನಿಂದ ಕುಂಟುತ್ತಾ ಸಾಗುತ್ತಿದೆ. ನಗರದಂಚಿನ ಚಿಪಗಿಯಿಂದ ದಾಸನಕೊಪ್ಪದವರೆಗಿನ ಸುಮಾರು 25 ಕಿ.ಮೀ ರಸ್ತೆಯನ್ನು ಅಗೆದು ಹಾಕಲಾಗಿದ್ದು, ನಿತ್ಯವೂ ಸರಿಯಾಗಿ ನೀರು ಸಿಂಪಡಿಸದ ಕಾರಣ ಈ ಭಾಗದ ನಿವಾಸಿಗಳು ಹಾಗೂ ವಾಹನ ಸವಾರರು ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.</p>.<p>‘ಬಸ್ ಸೇರಿದಂತೆ ಬೃಹತ್ ವಾಹನಗಳು ಸಾಗಿದರೆ ಸಾಕು, ಇಡೀ ರಸ್ತೆ ದೂಳುಮಯವಾಗುತ್ತದೆ. ಬೈಕ್ ಸವಾರರು, ಪಾದಚಾರಿಗಳು ಹಾಗೂ ರಸ್ತೆ ಅಕ್ಕಪಕ್ಕದ ಅಂಗಡಿಕಾರರು, ನಿವಾಸಿಗಳು ಉಸಿರಾಟದ ತೊಂದರೆಯಿಂದ ಬಳಲುವಂತಾಗಿದೆ’ ಎನ್ನುತ್ತಾರೆ ಬಿಸಲಕೊಪ್ಪದ ಎಂ.ಕೆ.ನಾಯ್ಕ.</p>.<p>‘ರಸ್ತೆ ಅಗೆದು ಹಾಕಿದಂದಿನಿಂದ ಈ ರಸ್ತೆಯ ಅಕ್ಕಪಕ್ಕದಲ್ಲಿರುವ ಕಟ್ಟಡಗಳ ಮಾಲೀಕರು ದೂಳಿನಿಂದ ರಕ್ಷಣೆಗೆ ಇಡೀ ಕಟ್ಟಡಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡಿದ್ದಾರೆ. ಕೆಲಸ ಬೇಗ ಮುಗಿಯುವ ನಿರೀಕ್ಷೆಯಿತ್ತಾದರೂ ಇನ್ನೂ ಒಂದು ಭಾಗದ ಕಾಮಗಾರಿ ನಡೆದಿದೆ. ಹಲವು ದಿನ ಇದೇ ರೀತಿಯ ವಾತಾವರಣದಲ್ಲಿದ್ದರೆ ಶ್ವಾಸಕೋಶ ಸಂಬಂಧಿ ರೋಗ ಬರುವುದು ನಿಶ್ಚಿತ’ ಎನ್ನುತ್ತಾರೆ ಅವರು.</p>.<p>‘ಕೇಂದ್ರ ಸರ್ಕಾರವು ಈ ರಸ್ತೆಯನ್ನು ಸಾಗರಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ 6 ವರ್ಷ ಕಳೆದಿದೆ. ಅರಣ್ಯ ಇಲಾಖೆಯ ಅನುಮತಿ ವಿಳಂಬದಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ಐದು ತಿಂಗಳ ಹಿಂದೆ ಪುನಾರಂಭಗೊಂಡರೂ, ಸಂಪೂರ್ಣ ಅವೈಜ್ಞಾನಿಕವಾಗಿ ನಡೆಯುತ್ತಿದೆ. ರಸ್ತೆ ಏರುಗಳನ್ನು ಸಮತಟ್ಟುಗೊಳಿಸಲು ಕೆಲವೆಡೆ ಆರೆಂಟು ಅಡಿಗೂ ಹೆಚ್ಚು ಅಗೆಯಲಾಗಿದ್ದು, ಯಾವುದೇ ಸೂಚನಾ ಫಲಕ, ಪ್ರತಿಫಲಕಗಳನ್ನು ಅಳವಡಿಸಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ ನಾಯ್ಕ.</p>.<p>ಮುಖ್ಯ ರಸ್ತೆಯ ಅವ್ಯವಸ್ಥೆಯಿಂದಾಗಿ ಜನರು ಅನಿವಾರ್ಯವಾಗಿ ಬಂಕನಾಳ-ಹೊಸ್ಕೊಪ್ಪ ಹಾಗೂ ಬೆಳಲೆ–ತಾರಗೋಡದಂತಹ ಬದಲಿ ಮಾರ್ಗಗಳನ್ನು ಅವಲಂಬಿಸಿದ್ದಾರೆ. ಆದರೆ ಈ ಕಿರಿದಾದ ರಸ್ತೆಗಳೂ ಕೂಡ ಅಧಿಕ ವಾಹನ ಸಂಚಾರದಿಂದಾಗಿ ಸಂಪೂರ್ಣ ಹದಗೆಟ್ಟಿವೆ. ಜತೆಗೆ ದೊಡ್ಡ ವಾಹನಗಳು ಬಂದಾಗ ಜಾಗ ಸಾಲದೆ ಚಿಕ್ಕ ವಾಹನ ಸವಾರರು ಗಟಾರಕ್ಕೆ ಬಿದ್ದ ಘಟನೆಗಳೂ ನಡೆಯುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಕಾಮಗಾರಿಗೆ ಇನ್ನಷ್ಟು ವೇಗ ಕೊಡಿಸುವ ಅಗತ್ಯತೆಯಿದೆ’ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.</p>.<p><strong>ಮಣ್ಣು ಮಾರಾಟ; ಆರೋಪ</strong></p><p>‘ಹೆದ್ದಾರಿ ನಿರ್ಮಾಣದಲ್ಲಿ ಘಟ್ಟ ತಗ್ಗಿಸುವ ಸಲುವಾಗಿ ಅಗೆದ ಮಣ್ಣುಗಳನ್ನು ಖಾಸಗಿ ವ್ಯಕ್ತಿಗಳ ಜಮೀನುಗಳಿಗೆ ಮತ್ತು ಲೇ ಔಟ್ಗಳಿಗೆ ದುಬಾರಿ ಹಣಕ್ಕೆ ನೂರಾರು ಲೋಡ್ಗಳಷ್ಟು ಮಾರಾಟ ಮಾಡಲಾಗುತ್ತಿದೆ. ಮಣ್ಣಿನಿಂದ ಹಣ ಪಡೆದು ಲಾಭ ಗಳಿಸುವ ಉದ್ದೇಶದಿಂದ ಅಗತ್ಯವಿಲ್ಲದ ಕಡೆಗಳಲ್ಲಿ ಮೂರ್ನಾಲ್ಕು ಅಡಿ ಹೆಚ್ಚುವರಿ ಅಗೆಯಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನವಹಿಸಿ, ಇದಕ್ಕೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಾಜೇಶ ನಾಯ್ಕ ಶಿರಸಿ. </p>.<div><blockquote>ಕಾಮಗಾರಿ ಕೈಗೊಂಡಿರುವುದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯ ಜನರಿಗೆ ಸ್ವಲ್ಪ ಸಮಸ್ಯೆ ಆಗುತ್ತದೆ. ಇದು ಅನಿವಾರ್ಯ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು </blockquote><span class="attribution">ಕೆ.ಶಿವಕುಮಾರ, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಸಾಗರಮಾಲಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಶಿರಸಿ– ಹಾವೇರಿ– ಕುಮಟಾ ರಾಷ್ಟ್ರೀಯ ಹೆದ್ದಾರಿ (766ಇ) ಕಾಮಗಾರಿಯಡಿ ಅಗೆದು ಹಾಕಲಾದ ರಸ್ತೆಯಿಂದ ಏಳುತ್ತಿರುವ ದೂಳಿನ ಸಮಸ್ಯೆಯಿಂದಾಗಿ ರಸ್ತೆಯಂಚಿನ ನಿವಾಸಿಗಳಲ್ಲಿ ಉಸಿರಾಟ ಸಂಬಂಧ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದರ ಜತೆ ಬದಲಿ ಮಾರ್ಗಗಳೂ ತೀರಾ ಹದಗೆಟ್ಟಿದ್ದು, ವಾಹನ ಸವಾರರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಳೆದ ಐದು ತಿಂಗಳಿನಿಂದ ಕುಂಟುತ್ತಾ ಸಾಗುತ್ತಿದೆ. ನಗರದಂಚಿನ ಚಿಪಗಿಯಿಂದ ದಾಸನಕೊಪ್ಪದವರೆಗಿನ ಸುಮಾರು 25 ಕಿ.ಮೀ ರಸ್ತೆಯನ್ನು ಅಗೆದು ಹಾಕಲಾಗಿದ್ದು, ನಿತ್ಯವೂ ಸರಿಯಾಗಿ ನೀರು ಸಿಂಪಡಿಸದ ಕಾರಣ ಈ ಭಾಗದ ನಿವಾಸಿಗಳು ಹಾಗೂ ವಾಹನ ಸವಾರರು ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.</p>.<p>‘ಬಸ್ ಸೇರಿದಂತೆ ಬೃಹತ್ ವಾಹನಗಳು ಸಾಗಿದರೆ ಸಾಕು, ಇಡೀ ರಸ್ತೆ ದೂಳುಮಯವಾಗುತ್ತದೆ. ಬೈಕ್ ಸವಾರರು, ಪಾದಚಾರಿಗಳು ಹಾಗೂ ರಸ್ತೆ ಅಕ್ಕಪಕ್ಕದ ಅಂಗಡಿಕಾರರು, ನಿವಾಸಿಗಳು ಉಸಿರಾಟದ ತೊಂದರೆಯಿಂದ ಬಳಲುವಂತಾಗಿದೆ’ ಎನ್ನುತ್ತಾರೆ ಬಿಸಲಕೊಪ್ಪದ ಎಂ.ಕೆ.ನಾಯ್ಕ.</p>.<p>‘ರಸ್ತೆ ಅಗೆದು ಹಾಕಿದಂದಿನಿಂದ ಈ ರಸ್ತೆಯ ಅಕ್ಕಪಕ್ಕದಲ್ಲಿರುವ ಕಟ್ಟಡಗಳ ಮಾಲೀಕರು ದೂಳಿನಿಂದ ರಕ್ಷಣೆಗೆ ಇಡೀ ಕಟ್ಟಡಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡಿದ್ದಾರೆ. ಕೆಲಸ ಬೇಗ ಮುಗಿಯುವ ನಿರೀಕ್ಷೆಯಿತ್ತಾದರೂ ಇನ್ನೂ ಒಂದು ಭಾಗದ ಕಾಮಗಾರಿ ನಡೆದಿದೆ. ಹಲವು ದಿನ ಇದೇ ರೀತಿಯ ವಾತಾವರಣದಲ್ಲಿದ್ದರೆ ಶ್ವಾಸಕೋಶ ಸಂಬಂಧಿ ರೋಗ ಬರುವುದು ನಿಶ್ಚಿತ’ ಎನ್ನುತ್ತಾರೆ ಅವರು.</p>.<p>‘ಕೇಂದ್ರ ಸರ್ಕಾರವು ಈ ರಸ್ತೆಯನ್ನು ಸಾಗರಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ 6 ವರ್ಷ ಕಳೆದಿದೆ. ಅರಣ್ಯ ಇಲಾಖೆಯ ಅನುಮತಿ ವಿಳಂಬದಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ಐದು ತಿಂಗಳ ಹಿಂದೆ ಪುನಾರಂಭಗೊಂಡರೂ, ಸಂಪೂರ್ಣ ಅವೈಜ್ಞಾನಿಕವಾಗಿ ನಡೆಯುತ್ತಿದೆ. ರಸ್ತೆ ಏರುಗಳನ್ನು ಸಮತಟ್ಟುಗೊಳಿಸಲು ಕೆಲವೆಡೆ ಆರೆಂಟು ಅಡಿಗೂ ಹೆಚ್ಚು ಅಗೆಯಲಾಗಿದ್ದು, ಯಾವುದೇ ಸೂಚನಾ ಫಲಕ, ಪ್ರತಿಫಲಕಗಳನ್ನು ಅಳವಡಿಸಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ ನಾಯ್ಕ.</p>.<p>ಮುಖ್ಯ ರಸ್ತೆಯ ಅವ್ಯವಸ್ಥೆಯಿಂದಾಗಿ ಜನರು ಅನಿವಾರ್ಯವಾಗಿ ಬಂಕನಾಳ-ಹೊಸ್ಕೊಪ್ಪ ಹಾಗೂ ಬೆಳಲೆ–ತಾರಗೋಡದಂತಹ ಬದಲಿ ಮಾರ್ಗಗಳನ್ನು ಅವಲಂಬಿಸಿದ್ದಾರೆ. ಆದರೆ ಈ ಕಿರಿದಾದ ರಸ್ತೆಗಳೂ ಕೂಡ ಅಧಿಕ ವಾಹನ ಸಂಚಾರದಿಂದಾಗಿ ಸಂಪೂರ್ಣ ಹದಗೆಟ್ಟಿವೆ. ಜತೆಗೆ ದೊಡ್ಡ ವಾಹನಗಳು ಬಂದಾಗ ಜಾಗ ಸಾಲದೆ ಚಿಕ್ಕ ವಾಹನ ಸವಾರರು ಗಟಾರಕ್ಕೆ ಬಿದ್ದ ಘಟನೆಗಳೂ ನಡೆಯುತ್ತಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಕಾಮಗಾರಿಗೆ ಇನ್ನಷ್ಟು ವೇಗ ಕೊಡಿಸುವ ಅಗತ್ಯತೆಯಿದೆ’ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.</p>.<p><strong>ಮಣ್ಣು ಮಾರಾಟ; ಆರೋಪ</strong></p><p>‘ಹೆದ್ದಾರಿ ನಿರ್ಮಾಣದಲ್ಲಿ ಘಟ್ಟ ತಗ್ಗಿಸುವ ಸಲುವಾಗಿ ಅಗೆದ ಮಣ್ಣುಗಳನ್ನು ಖಾಸಗಿ ವ್ಯಕ್ತಿಗಳ ಜಮೀನುಗಳಿಗೆ ಮತ್ತು ಲೇ ಔಟ್ಗಳಿಗೆ ದುಬಾರಿ ಹಣಕ್ಕೆ ನೂರಾರು ಲೋಡ್ಗಳಷ್ಟು ಮಾರಾಟ ಮಾಡಲಾಗುತ್ತಿದೆ. ಮಣ್ಣಿನಿಂದ ಹಣ ಪಡೆದು ಲಾಭ ಗಳಿಸುವ ಉದ್ದೇಶದಿಂದ ಅಗತ್ಯವಿಲ್ಲದ ಕಡೆಗಳಲ್ಲಿ ಮೂರ್ನಾಲ್ಕು ಅಡಿ ಹೆಚ್ಚುವರಿ ಅಗೆಯಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನವಹಿಸಿ, ಇದಕ್ಕೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಾಜೇಶ ನಾಯ್ಕ ಶಿರಸಿ. </p>.<div><blockquote>ಕಾಮಗಾರಿ ಕೈಗೊಂಡಿರುವುದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯ ಜನರಿಗೆ ಸ್ವಲ್ಪ ಸಮಸ್ಯೆ ಆಗುತ್ತದೆ. ಇದು ಅನಿವಾರ್ಯ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು </blockquote><span class="attribution">ಕೆ.ಶಿವಕುಮಾರ, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>