<p><strong>ಶಿರಸಿ</strong>: ಒಂಬತ್ತು ದಿನಗಳಿಂದ ಮಾರಿಕಾಂಬೆಯ ದರ್ಶನ ಪಡೆದು ಪುನೀತರಾಗಿದ್ದ ಭಕ್ತಸಾಗರಕ್ಕೆ ಬುಧವಾರ ವಿದಾಯದ ಕ್ಷಣಗಳು ಭಾವುಕತೆಯನ್ನು ತಂದಿದ್ದವು.</p>.<p>ಬಿಡಕಿಬೈಲಿನ ವಿಶಾಲವಾದ ಗದ್ದುಗೆಯಲ್ಲಿ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಆಲಿಸುತ್ತಾ ಕುಳಿತಿದ್ದ ದೇವಿ, ಮರಳಿ ತವರು ಮನೆಗೆ ಪಯಣ ಬೆಳೆಸುವ ಹೊತ್ತಿನಲ್ಲಿ ಸಾವಿರಾರು ಭಕ್ತರು ಜಯಘೋಷಗಳ ಮೂಲಕ ವಿದಾಯ ಹೇಳಿದರು.</p>.<p>ಬೆಳಿಗ್ಗೆಯಿಂದಲೇ ಕಿಕ್ಕಿರಿದು ತುಂಬಿದ್ದ ಭಕ್ತರು ಕೊನೆಯ ಕ್ಷಣದವರೆಗೂ ದೇವಿಯ ದರ್ಶನಕ್ಕಾಗಿ ಹಂಬಲಿಸುತ್ತಾ ಹಣ್ಣು-ಕಾಯಿಗಳನ್ನು ಅರ್ಪಿಸಿ ತಮ್ಮ ಹರಕೆಗಳನ್ನು ತೀರಿಸಿದರು.</p>.<p>ಬಾಬುದಾರರ ಮಂಗಳಾರತಿಯೊಂದಿಗೆ ಜಾತ್ರೆಯ ಧಾರ್ಮಿಕ ಅಂತ್ಯದ ಅಧಿಕೃತ ಪ್ರಕ್ರಿಯೆಗಳು ಚಾಲನೆ ಪಡೆದವು. ಗದ್ದುಗೆಯ ಆವರಣದಲ್ಲಿ ಸೇರಿದ್ದ ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಜಾತ್ರೆಯ ಮುಕ್ತಾಯದ ಸಂದೇಶ ಬಿತ್ತರಿಸಿದರು. ಭಕ್ತರ ಜಯಘೋಷದ ನಡುವೆ ದೇವಿ ಗದ್ದುಗೆಯಿಂದ ಕೆಳಗಿಳಿದು, ಜಾತ್ರಾ ಮಂಟಪದ ನಡುವೆ ಬಂದು ಕುಳಿತಾಗ ಆಸಾದಿಯವರು ರೈತರಿಗೆ ಹುಲುಸು ಪ್ರಸಾದ ನೀಡಿದರು. ಆ ಪ್ರಸಾದವನ್ನು ಸ್ವೀಕರಿಸಿದ ರೈತರು ಓಡುತ್ತ ಗದ್ದೆಗೆ ಹೋಗಿ ಅದನ್ನು ಅಲ್ಲಿ ಬಿತ್ತಿ ಬಂದರು.</p>.<p>ಜಾತ್ರೆಯಲ್ಲಿ ಕೋಣನ ಬಲಿ ಕೊಡುವ ಸಂಪ್ರದಾಯ ಕೈಬಿಟ್ಟ ಕಾರಣ ಜಾತ್ರಾ ಚಪ್ಪರದ ಎದುರು ಹೊಂಡ ತೋಡಿ ಸಾಂಕೇತಿಕವಾಗಿ ಕುಂಬಳಕಾಯಿ ಬಲಿ ಸಮರ್ಪಣೆ ನಡೆಸಿ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಜಾತ್ರೆಗೆ ವಾರ ಮೊದಲು ನಡೆದಿದ್ದ ಅಂಕೆ ಹಾಕುವ, ಕಂಕಣ ಕಟ್ಟುವ ಕಾರ್ಯ ದಿನದಂದು ದೇವಿಗೆ ಆರತಿ ಮಾಡಿದ ಮೇಟಿ ದೀಪವನ್ನು ಆರದಂತೆ ನೋಡಿಕೊಂಡ ಅಸಾದಿ ಬಸವಣ್ಣಿ ಈ ದೀಪದಿಂದ ಮಾರಿಕಾಂಬೆಗೆ ಮಂಗಳಾರತಿ ಮಾಡಿದರು. ಹೀಗೆ ಜಾತ್ರೆ ಮುಕ್ತಾಯದ ವಿಧಿವಿಧಾನಗಳ ನಂತರ 1 ಗಂಟೆಯ ಸುಮಾರಿಗೆ ದೇವಿಯು ಕಟ್ಟಿಗೆಯ ಅಟ್ಟಲಿನ ಮೇಲೆ ಕುಳಿತು ಭಕ್ತರ ಹೆಗಲನೇರಿ ಮರಳಿದಳು.</p>.<p>ದುಷ್ಟ ಸಂಹಾರದ ನಂತರ ದೇವಿ ಆವೇಶಭರಿತವಾಗಿ ಹೊರಬರುತ್ತಾಳೆ ಎಂಬ ನಂಬಿಕೆಗೆ ಸಾಕ್ಷಿಯಾಗಿ, ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚುವ ಮತ್ತು ದೇವಿಯ ದೃಷ್ಟಿಯನ್ನು ಅತ್ತ ಹೊರಳಿಸುವ ಕ್ಷಣಗಳು ಇಡೀ ವಾತಾವರಣದಲ್ಲಿ ಗಂಭೀರತೆಯನ್ನು ತುಂಬಿದ್ದವು. ಆ ಸಮಯದಲ್ಲಿ ಭಕ್ತರ ಕಣ್ಣುಗಳಲ್ಲಿ ಹರಿದ ಕಣ್ಣೀರು ದೇವಿಯ ಮೇಲಿರುವ ಅಚಲವಾದ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿತ್ತು. ಬನವಾಸಿ ರಸ್ತೆಯ ವಿಸರ್ಜನಾ ಪೀಠದಲ್ಲಿ ದೇವಿಯ ವಿಸರ್ಜನೆ ಜರುಗಿತು. ರಥೋತ್ಸವಕ್ಕೆ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಮಂಗಲೋತ್ಸವ ವೀಕ್ಷಿಸಲು ಬಂದಿದ್ದರು.</p>.<p><strong>ಲಕ್ಷಾಂತರ ಭಕ್ತರ ಭೇಟಿ </strong></p><p>ಒಂಬತ್ತು ದಿನಗಳ ಜಾತ್ರಾ ಮಹೋತ್ಸವದಲ್ಲಿ ಅಂದಾಜು 20 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಅಮ್ಯೂಸ್ಮೆಂಟ್ಗಳಿಗೆ ಹೆಚ್ಚಿನ ಜನರು ಭೇಟಿ ನೀಡಿದರು. ಶುಕ್ರವಾರದಿಂದ ಆರಂಭಗೊಂಡ ಜನಜಂಗುಳಿ ಶನಿವಾರ ಭಾನುವಾರ ಹಾಗೂ ಸೋಮವಾರವೂ ಮುಂದುವರೆದಿತ್ತು. ದೇವಿಯ ವಾರದಲ್ಲಿ ಇನ್ನಷ್ಟು ಜನದಟ್ಟಣೆ ಕಂಡು ಬಂದಿತ್ತು. ದೇವಿಯ ರಥೋತ್ಸವ ವಿಸರ್ಜನೆಯ ಸಂದರ್ಭದಲ್ಲೂ ಸಂಖ್ಯ ಭಕ್ತರು ಬಂದಿದ್ದರು. ದೇವಿಯ ಜಾತ್ರೆ ಬುಧವಾರ ಮುಕ್ತಾಯಗೊಂಡರೂ ದೂರದ ಊರುಗಳಿಂದ ಬಂದಿರುವ ವ್ಯಾಪಾರಸ್ಥರು ಮತ್ತು ಮನರಂಜನಾ ಸಂಸ್ಥೆಗಳು ಈ ವಾರವಿಡೀ ತಮ್ಮ ವ್ಯವಹಾರವನ್ನು ಮುಂದುವರಿಸಲಿದ್ದು ಹಬ್ಬದ ಸಂಭ್ರಮ ನಗರದಲ್ಲಿ ಇನ್ನು ಕೆಲವು ದಿನ ನಡೆಯಲಿವೆ.</p>.<div><blockquote>ಮಾರಿಕಾಂಬಾ ದೇವಿಯ ಪುನರ್ ಪ್ರತಿಷ್ಠಾಪನೆ ಯುಗಾದಿಯಂದು ನಡೆಯಲಿದೆ. ಅಲ್ಲಿಯ ತನಕ ಶಿರಸಿ ಮಾರಿಕಾಂಬಾ ದೇವಾಲಯದ ಬಾಗಿಲು ಮುಚ್ಚಿರುತ್ತದೆ. </blockquote><span class="attribution">ಜಗದೀಶ ಗೌಡ ಬಾಬುದಾರ, ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಒಂಬತ್ತು ದಿನಗಳಿಂದ ಮಾರಿಕಾಂಬೆಯ ದರ್ಶನ ಪಡೆದು ಪುನೀತರಾಗಿದ್ದ ಭಕ್ತಸಾಗರಕ್ಕೆ ಬುಧವಾರ ವಿದಾಯದ ಕ್ಷಣಗಳು ಭಾವುಕತೆಯನ್ನು ತಂದಿದ್ದವು.</p>.<p>ಬಿಡಕಿಬೈಲಿನ ವಿಶಾಲವಾದ ಗದ್ದುಗೆಯಲ್ಲಿ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಆಲಿಸುತ್ತಾ ಕುಳಿತಿದ್ದ ದೇವಿ, ಮರಳಿ ತವರು ಮನೆಗೆ ಪಯಣ ಬೆಳೆಸುವ ಹೊತ್ತಿನಲ್ಲಿ ಸಾವಿರಾರು ಭಕ್ತರು ಜಯಘೋಷಗಳ ಮೂಲಕ ವಿದಾಯ ಹೇಳಿದರು.</p>.<p>ಬೆಳಿಗ್ಗೆಯಿಂದಲೇ ಕಿಕ್ಕಿರಿದು ತುಂಬಿದ್ದ ಭಕ್ತರು ಕೊನೆಯ ಕ್ಷಣದವರೆಗೂ ದೇವಿಯ ದರ್ಶನಕ್ಕಾಗಿ ಹಂಬಲಿಸುತ್ತಾ ಹಣ್ಣು-ಕಾಯಿಗಳನ್ನು ಅರ್ಪಿಸಿ ತಮ್ಮ ಹರಕೆಗಳನ್ನು ತೀರಿಸಿದರು.</p>.<p>ಬಾಬುದಾರರ ಮಂಗಳಾರತಿಯೊಂದಿಗೆ ಜಾತ್ರೆಯ ಧಾರ್ಮಿಕ ಅಂತ್ಯದ ಅಧಿಕೃತ ಪ್ರಕ್ರಿಯೆಗಳು ಚಾಲನೆ ಪಡೆದವು. ಗದ್ದುಗೆಯ ಆವರಣದಲ್ಲಿ ಸೇರಿದ್ದ ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಜಾತ್ರೆಯ ಮುಕ್ತಾಯದ ಸಂದೇಶ ಬಿತ್ತರಿಸಿದರು. ಭಕ್ತರ ಜಯಘೋಷದ ನಡುವೆ ದೇವಿ ಗದ್ದುಗೆಯಿಂದ ಕೆಳಗಿಳಿದು, ಜಾತ್ರಾ ಮಂಟಪದ ನಡುವೆ ಬಂದು ಕುಳಿತಾಗ ಆಸಾದಿಯವರು ರೈತರಿಗೆ ಹುಲುಸು ಪ್ರಸಾದ ನೀಡಿದರು. ಆ ಪ್ರಸಾದವನ್ನು ಸ್ವೀಕರಿಸಿದ ರೈತರು ಓಡುತ್ತ ಗದ್ದೆಗೆ ಹೋಗಿ ಅದನ್ನು ಅಲ್ಲಿ ಬಿತ್ತಿ ಬಂದರು.</p>.<p>ಜಾತ್ರೆಯಲ್ಲಿ ಕೋಣನ ಬಲಿ ಕೊಡುವ ಸಂಪ್ರದಾಯ ಕೈಬಿಟ್ಟ ಕಾರಣ ಜಾತ್ರಾ ಚಪ್ಪರದ ಎದುರು ಹೊಂಡ ತೋಡಿ ಸಾಂಕೇತಿಕವಾಗಿ ಕುಂಬಳಕಾಯಿ ಬಲಿ ಸಮರ್ಪಣೆ ನಡೆಸಿ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಜಾತ್ರೆಗೆ ವಾರ ಮೊದಲು ನಡೆದಿದ್ದ ಅಂಕೆ ಹಾಕುವ, ಕಂಕಣ ಕಟ್ಟುವ ಕಾರ್ಯ ದಿನದಂದು ದೇವಿಗೆ ಆರತಿ ಮಾಡಿದ ಮೇಟಿ ದೀಪವನ್ನು ಆರದಂತೆ ನೋಡಿಕೊಂಡ ಅಸಾದಿ ಬಸವಣ್ಣಿ ಈ ದೀಪದಿಂದ ಮಾರಿಕಾಂಬೆಗೆ ಮಂಗಳಾರತಿ ಮಾಡಿದರು. ಹೀಗೆ ಜಾತ್ರೆ ಮುಕ್ತಾಯದ ವಿಧಿವಿಧಾನಗಳ ನಂತರ 1 ಗಂಟೆಯ ಸುಮಾರಿಗೆ ದೇವಿಯು ಕಟ್ಟಿಗೆಯ ಅಟ್ಟಲಿನ ಮೇಲೆ ಕುಳಿತು ಭಕ್ತರ ಹೆಗಲನೇರಿ ಮರಳಿದಳು.</p>.<p>ದುಷ್ಟ ಸಂಹಾರದ ನಂತರ ದೇವಿ ಆವೇಶಭರಿತವಾಗಿ ಹೊರಬರುತ್ತಾಳೆ ಎಂಬ ನಂಬಿಕೆಗೆ ಸಾಕ್ಷಿಯಾಗಿ, ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚುವ ಮತ್ತು ದೇವಿಯ ದೃಷ್ಟಿಯನ್ನು ಅತ್ತ ಹೊರಳಿಸುವ ಕ್ಷಣಗಳು ಇಡೀ ವಾತಾವರಣದಲ್ಲಿ ಗಂಭೀರತೆಯನ್ನು ತುಂಬಿದ್ದವು. ಆ ಸಮಯದಲ್ಲಿ ಭಕ್ತರ ಕಣ್ಣುಗಳಲ್ಲಿ ಹರಿದ ಕಣ್ಣೀರು ದೇವಿಯ ಮೇಲಿರುವ ಅಚಲವಾದ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿತ್ತು. ಬನವಾಸಿ ರಸ್ತೆಯ ವಿಸರ್ಜನಾ ಪೀಠದಲ್ಲಿ ದೇವಿಯ ವಿಸರ್ಜನೆ ಜರುಗಿತು. ರಥೋತ್ಸವಕ್ಕೆ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಮಂಗಲೋತ್ಸವ ವೀಕ್ಷಿಸಲು ಬಂದಿದ್ದರು.</p>.<p><strong>ಲಕ್ಷಾಂತರ ಭಕ್ತರ ಭೇಟಿ </strong></p><p>ಒಂಬತ್ತು ದಿನಗಳ ಜಾತ್ರಾ ಮಹೋತ್ಸವದಲ್ಲಿ ಅಂದಾಜು 20 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಅಮ್ಯೂಸ್ಮೆಂಟ್ಗಳಿಗೆ ಹೆಚ್ಚಿನ ಜನರು ಭೇಟಿ ನೀಡಿದರು. ಶುಕ್ರವಾರದಿಂದ ಆರಂಭಗೊಂಡ ಜನಜಂಗುಳಿ ಶನಿವಾರ ಭಾನುವಾರ ಹಾಗೂ ಸೋಮವಾರವೂ ಮುಂದುವರೆದಿತ್ತು. ದೇವಿಯ ವಾರದಲ್ಲಿ ಇನ್ನಷ್ಟು ಜನದಟ್ಟಣೆ ಕಂಡು ಬಂದಿತ್ತು. ದೇವಿಯ ರಥೋತ್ಸವ ವಿಸರ್ಜನೆಯ ಸಂದರ್ಭದಲ್ಲೂ ಸಂಖ್ಯ ಭಕ್ತರು ಬಂದಿದ್ದರು. ದೇವಿಯ ಜಾತ್ರೆ ಬುಧವಾರ ಮುಕ್ತಾಯಗೊಂಡರೂ ದೂರದ ಊರುಗಳಿಂದ ಬಂದಿರುವ ವ್ಯಾಪಾರಸ್ಥರು ಮತ್ತು ಮನರಂಜನಾ ಸಂಸ್ಥೆಗಳು ಈ ವಾರವಿಡೀ ತಮ್ಮ ವ್ಯವಹಾರವನ್ನು ಮುಂದುವರಿಸಲಿದ್ದು ಹಬ್ಬದ ಸಂಭ್ರಮ ನಗರದಲ್ಲಿ ಇನ್ನು ಕೆಲವು ದಿನ ನಡೆಯಲಿವೆ.</p>.<div><blockquote>ಮಾರಿಕಾಂಬಾ ದೇವಿಯ ಪುನರ್ ಪ್ರತಿಷ್ಠಾಪನೆ ಯುಗಾದಿಯಂದು ನಡೆಯಲಿದೆ. ಅಲ್ಲಿಯ ತನಕ ಶಿರಸಿ ಮಾರಿಕಾಂಬಾ ದೇವಾಲಯದ ಬಾಗಿಲು ಮುಚ್ಚಿರುತ್ತದೆ. </blockquote><span class="attribution">ಜಗದೀಶ ಗೌಡ ಬಾಬುದಾರ, ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>