<p><strong>ಶಿರಸಿ</strong>: ಸ್ಥಳೀಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಭರಪೂರ ಆಗಮನವು ತಾಲ್ಲೂಕಿನ ಅನಾನಸ್ ಬೆಳೆಗಾರರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಾರುಕಟ್ಟೆಯಲ್ಲಿ ಮಾವಿನ ಹಂಗಾಮು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅನಾನಸ್ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಸ್ಥಳೀಯ ಮಾರುಕಟ್ಟೆಯನ್ನೇ ನಂಬಿಕೊಂಡಿದ್ದ ರೈತರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ತಾಲ್ಲೂಕಿನ ಬನವಾಸಿ ಹೋಬಳಿಯೊಂದರಲ್ಲೇ ಅಂದಾಜು 350 ಎಕರೆಗೂ ಅಧಿಕ ಪ್ರದೇಶದಲ್ಲಿ ಅನಾನಸ್ ಬೆಳೆಯಲಾಗುತ್ತಿದೆ. ಇಲ್ಲಿನ ರೈತರು ಸಾಮಾನ್ಯವಾಗಿ ಮಾವಿನ ಹಂಗಾಮಿನಲ್ಲಿ ಅನಾನಸ್ ಕೊಯ್ಲಿಗೆ ಬರದಂತೆ ಮುನ್ನೆಚ್ಚರಿಕೆ ವಹಿಸಿ ಕೃಷಿ ಮಾಡುತ್ತಾರೆ. ಆದರೆ, ಈ ಬಾರಿ ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಉಷ್ಣಾಂಶದ ಜತೆಗೆ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಮಾವಿನ ಜತೆಜತೆಗೇ ಅನಾನಸ್ ಕೂಡ ಏಕಕಾಲಕ್ಕೆ ಮಾರುಕಟ್ಟೆಗೆ ಬಂದಿದೆ.</p>.<p>ಕೇವಲ ಒಂದು ತಿಂಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅನಾನಸ್ಗೆ ₹25 ಲಭಿಸುತ್ತಿತ್ತು. ಆದರೆ ಮಾವು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆಯೇ ಬೇಡಿಕೆ ಕುಸಿದು, ಪ್ರಸ್ತುತ ದರ ಕೇವಲ ₹13ಕ್ಕೆ ಇಳಿಕೆಯಾಗಿದೆ. ಇದು ಲಾಭದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿರುವುದು ಅನಾ ನಸ್ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.</p>.<p>‘ಬನವಾಸಿ ಭಾಗದಲ್ಲಿ ಮುಖ್ಯವಾಗಿ ಕ್ವೀನ್ ತಳಿಯ ಅನಾನಸ್ಅನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಗುಣಮಟ್ಟದ ಪ್ರಥಮ ದರ್ಜೆಯ ಹಣ್ಣುಗಳಿಗೆ ಹೊರರಾಜ್ಯಗಳಲ್ಲಿ ಉತ್ತಮ ಮಾರುಕಟ್ಟೆ ಹಾಗೂ ಬೆಲೆ ದೊರೆಯುತ್ತಿದೆ. ಆದರೆ, ಒಟ್ಟು ಉತ್ಪಾದನೆಯ ಸುಮಾರು ಶೇ 60ರಷ್ಟು ಭಾಗ ದ್ವಿತೀಯ ಹಾಗೂ ತೃತೀಯ ದರ್ಜೆಯ ಹಣ್ಣುಗಳಾಗಿದ್ದು, ಇವುಗಳ ಮಾರಾಟಕ್ಕೆ ರೈತರು ಸಂಪೂರ್ಣವಾಗಿ ಸ್ಥಳೀಯ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ’ ಎಂಬುದು ಬೆಳೆಗಾರ ದ್ಯಾಮಣ್ಣ ದೊಡ್ಮನಿ ಮಾತು.</p>.<p>‘ಮಾರುಕಟ್ಟೆಯ ಪೈಪೋಟಿ ಯಿಂದಾಗಿ ಸಿಗಬೇಕಾದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಈ ಹಠಾತ್ ದರ ಕುಸಿತವು ಕೃಷಿ ವೆಚ್ಚವನ್ನೂ ಭರಿಸಲಾಗದ ಸ್ಥಿತಿಗೆ ಅನಾನಸ್ ಬೆಳೆಗಾರರನ್ನು ತಳ್ಳಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬರದಿದ್ದರೆ ಬೆಳೆಗಾರರು ಈ ಬಾರಿ ದೊಡ್ಡ ಮಟ್ಟದ ನಷ್ಟ ಅನುಭವಿಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಅವರು.</p>.<div><blockquote>ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಸಂದರ್ಭದಲ್ಲಿ ಅನಾನಸ್ ಹಣ್ಣುಗಳನ್ನು ಹಣ್ಣು ಸಂಸ್ಕರಣಾ ಫ್ಯಾಕ್ಟರಿಗಳಿಗೆ ನೀಡಿದರೆ ಮಾರುಕಟ್ಟೆಗಿಂತ ಹೆಚ್ಚಿನ ದರ ನಿರೀಕ್ಷಿಸಬಹುದು</blockquote><span class="attribution">– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ </span></div>.<div><blockquote>ಮಾರುಕಟ್ಟೆಯಲ್ಲಿ ಮಾವು ಲಭ್ಯವಿರುವಾಗ ಗ್ರಾಹಕರು ಅನಾನಸ್ನತ್ತ ಆಸಕ್ತಿ ತೋರುತ್ತಿಲ್ಲ, ಇದರಿಂದಾಗಿ ಹಣ್ಣುಗಳ ಸಂಗ್ರಹ ಹೆಚ್ಚಾಗಿ ಬೆಲೆ ಕುಸಿತಕ್ಕೆ ದಾರಿಯಾಗಿದೆ </blockquote><span class="attribution">– ದ್ಯಾಮಣ್ಣ ದೊಡ್ಮನಿ, ಅನಾನಸ್ ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ಸ್ಥಳೀಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಭರಪೂರ ಆಗಮನವು ತಾಲ್ಲೂಕಿನ ಅನಾನಸ್ ಬೆಳೆಗಾರರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಾರುಕಟ್ಟೆಯಲ್ಲಿ ಮಾವಿನ ಹಂಗಾಮು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅನಾನಸ್ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಸ್ಥಳೀಯ ಮಾರುಕಟ್ಟೆಯನ್ನೇ ನಂಬಿಕೊಂಡಿದ್ದ ರೈತರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ತಾಲ್ಲೂಕಿನ ಬನವಾಸಿ ಹೋಬಳಿಯೊಂದರಲ್ಲೇ ಅಂದಾಜು 350 ಎಕರೆಗೂ ಅಧಿಕ ಪ್ರದೇಶದಲ್ಲಿ ಅನಾನಸ್ ಬೆಳೆಯಲಾಗುತ್ತಿದೆ. ಇಲ್ಲಿನ ರೈತರು ಸಾಮಾನ್ಯವಾಗಿ ಮಾವಿನ ಹಂಗಾಮಿನಲ್ಲಿ ಅನಾನಸ್ ಕೊಯ್ಲಿಗೆ ಬರದಂತೆ ಮುನ್ನೆಚ್ಚರಿಕೆ ವಹಿಸಿ ಕೃಷಿ ಮಾಡುತ್ತಾರೆ. ಆದರೆ, ಈ ಬಾರಿ ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಉಷ್ಣಾಂಶದ ಜತೆಗೆ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಮಾವಿನ ಜತೆಜತೆಗೇ ಅನಾನಸ್ ಕೂಡ ಏಕಕಾಲಕ್ಕೆ ಮಾರುಕಟ್ಟೆಗೆ ಬಂದಿದೆ.</p>.<p>ಕೇವಲ ಒಂದು ತಿಂಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅನಾನಸ್ಗೆ ₹25 ಲಭಿಸುತ್ತಿತ್ತು. ಆದರೆ ಮಾವು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆಯೇ ಬೇಡಿಕೆ ಕುಸಿದು, ಪ್ರಸ್ತುತ ದರ ಕೇವಲ ₹13ಕ್ಕೆ ಇಳಿಕೆಯಾಗಿದೆ. ಇದು ಲಾಭದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿರುವುದು ಅನಾ ನಸ್ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.</p>.<p>‘ಬನವಾಸಿ ಭಾಗದಲ್ಲಿ ಮುಖ್ಯವಾಗಿ ಕ್ವೀನ್ ತಳಿಯ ಅನಾನಸ್ಅನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಗುಣಮಟ್ಟದ ಪ್ರಥಮ ದರ್ಜೆಯ ಹಣ್ಣುಗಳಿಗೆ ಹೊರರಾಜ್ಯಗಳಲ್ಲಿ ಉತ್ತಮ ಮಾರುಕಟ್ಟೆ ಹಾಗೂ ಬೆಲೆ ದೊರೆಯುತ್ತಿದೆ. ಆದರೆ, ಒಟ್ಟು ಉತ್ಪಾದನೆಯ ಸುಮಾರು ಶೇ 60ರಷ್ಟು ಭಾಗ ದ್ವಿತೀಯ ಹಾಗೂ ತೃತೀಯ ದರ್ಜೆಯ ಹಣ್ಣುಗಳಾಗಿದ್ದು, ಇವುಗಳ ಮಾರಾಟಕ್ಕೆ ರೈತರು ಸಂಪೂರ್ಣವಾಗಿ ಸ್ಥಳೀಯ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ’ ಎಂಬುದು ಬೆಳೆಗಾರ ದ್ಯಾಮಣ್ಣ ದೊಡ್ಮನಿ ಮಾತು.</p>.<p>‘ಮಾರುಕಟ್ಟೆಯ ಪೈಪೋಟಿ ಯಿಂದಾಗಿ ಸಿಗಬೇಕಾದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಈ ಹಠಾತ್ ದರ ಕುಸಿತವು ಕೃಷಿ ವೆಚ್ಚವನ್ನೂ ಭರಿಸಲಾಗದ ಸ್ಥಿತಿಗೆ ಅನಾನಸ್ ಬೆಳೆಗಾರರನ್ನು ತಳ್ಳಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬರದಿದ್ದರೆ ಬೆಳೆಗಾರರು ಈ ಬಾರಿ ದೊಡ್ಡ ಮಟ್ಟದ ನಷ್ಟ ಅನುಭವಿಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಅವರು.</p>.<div><blockquote>ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಸಂದರ್ಭದಲ್ಲಿ ಅನಾನಸ್ ಹಣ್ಣುಗಳನ್ನು ಹಣ್ಣು ಸಂಸ್ಕರಣಾ ಫ್ಯಾಕ್ಟರಿಗಳಿಗೆ ನೀಡಿದರೆ ಮಾರುಕಟ್ಟೆಗಿಂತ ಹೆಚ್ಚಿನ ದರ ನಿರೀಕ್ಷಿಸಬಹುದು</blockquote><span class="attribution">– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ </span></div>.<div><blockquote>ಮಾರುಕಟ್ಟೆಯಲ್ಲಿ ಮಾವು ಲಭ್ಯವಿರುವಾಗ ಗ್ರಾಹಕರು ಅನಾನಸ್ನತ್ತ ಆಸಕ್ತಿ ತೋರುತ್ತಿಲ್ಲ, ಇದರಿಂದಾಗಿ ಹಣ್ಣುಗಳ ಸಂಗ್ರಹ ಹೆಚ್ಚಾಗಿ ಬೆಲೆ ಕುಸಿತಕ್ಕೆ ದಾರಿಯಾಗಿದೆ </blockquote><span class="attribution">– ದ್ಯಾಮಣ್ಣ ದೊಡ್ಮನಿ, ಅನಾನಸ್ ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>