<p><strong>ಶಿರಸಿ:</strong> ನದಿ ತಟದ ಶಿವತಾಣವಾಗಿರುವ ಐತಿಹಾಸಿಕ ಕ್ಷೇತ್ರ ಸಹಸ್ರಲಿಂಗ ಬಿಸಿಲ ಬೇಗೆಗೆ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ನೂರಾರು ಶಿವಲಿಂಗಗಳನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದ ಜನಸಾಗರ ಈಗ ಮಾಯವಾಗಿದ್ದು, ಕೇವಲ ಸುಡುವ ಬಿಸಿಲು ಮತ್ತು ಬರಿದಾದ ಕಲ್ಲು ಬಂಡೆಗಳು ಮಾತ್ರ ಕಾಣಸಿಗುತ್ತಿವೆ.</p>.<p>ಸಾವಿರಾರು ಜನರಿಂದ ತುಂಬಿರುತ್ತಿದ್ದ ಪ್ರವಾಸಿ ತಾಣ, ಈಗ ನೀರಿನ ಕೊರತೆಯಿಂದಾಗಿ ತನ್ನೆಲ್ಲಾ ಕಳೆಯನ್ನು ಕಳೆದುಕೊಂಡಿದೆ. ಶಾಲ್ಮಲಾ ನದಿಯ ಹರಿವು ನಿಂತು ಹೋಗಿದ್ದು, ನದಿ ಪಾತ್ರವು ಕೇವಲ ಕಲ್ಲುಗಳ ರಾಶಿಯಾಗಿ ಮಾರ್ಪಟ್ಟಿದೆ. ಸದಾ ನೀರಿನ ಮಡಿಲಲ್ಲಿರುತ್ತಿದ್ದ ಸಾವಿರಾರು ಶಿವಲಿಂಗಗಳು ಈಗ ತಂಪಾದ ಜಲಧಾರೆಗಳಿಲ್ಲದೆ ಸುಡುವ ಬಿಸಿಲಿಗೆ ಕಾದ ಕೆಂಡದಂತಾಗಿವೆ. ನದಿಯ ಮಧ್ಯೆ ಇಳಿದು ಪುಣ್ಯಸ್ನಾನ ಮಾಡಿ, ಲಿಂಗಗಳಿಗೆ ಜಲಾಭಿಷೇಕ ಮಾಡುತ್ತಿದ್ದ ಪ್ರವಾಸಿಗರಿಗೆ ಈಗ ಅಲ್ಲಿ ಕೇವಲ ನಿರಾಸೆ ಕಾಯುತ್ತಿದೆ.</p>.<p>‘ಸಾಮಾನ್ಯವಾಗಿ ಬೇಸಿಗೆಯಲ್ಲೂ ಇಲ್ಲಿ ಅಲ್ಪ ಪ್ರಮಾಣದ ನೀರಿನ ಹರಿವು ಇರುತ್ತಿತ್ತು. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ನದಿ ತೀರಕ್ಕೆ ಬಂದರೆ ಮೈಮನ ತಂಪಾಗಿಸುತ್ತಿದ್ದ ಗಾಳಿಯ ಜಾಗದಲ್ಲಿ ಈಗ ಬಿಸಿಗಾಳಿ ಬೀಸುತ್ತಿದೆ. ನೀರಿನ ಅಬ್ಬರವಿಲ್ಲದೆ ಪರಿಸರದಲ್ಲಿ ಸ್ತಬ್ಧತೆ ಆವರಿಸಿದೆ. ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಆಗಿರುವುದರಿಂದ ಈ ಭಾಗದ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಸ್ಥಳಿಕರು.</p>.<p>‘ನೀರಿರುವ ವೇಳೆ ನಿತ್ಯವೂ ನೂರಾರು ಜನರು ಬರುತ್ತಿದ್ದರು. ಈಗ ನೀರಿರದ ಕಾರಣ ಪ್ರವಾಸಿಗರು ಇತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ನದಿಯ ಪಾತ್ರದಲ್ಲಿ ಅಲ್ಲಲ್ಲಿ ಉಳಿದುಕೊಂಡಿರುವ ಅಲ್ಪಸ್ವಲ್ಪ ಗುಂಡಿಗಳಲ್ಲಿನ ನೀರು ಕೂಡ ಪಾಚಿಗಟ್ಟಿ ಬಳಕೆಗೆ ಅಯೋಗ್ಯವಾಗಿದೆ. ಹಸಿರು ಕಾನನದ ನಡುವಿನ ತಾಣವು ಈಗ ಜಲಕ್ಷಾಮದ ಕಟು ಸತ್ಯಕ್ಕೆ ಸಾಕ್ಷಿಯಾಗಿದೆ’ ಎಂಬುದು ನದಿ ತಟದ ನಿವಾಸಿ ರಾಮಚಂದ್ರ ಹೆಗಡೆ ಮಾತು.</p>.<p>‘ನದಿಯ ಮೇಲ್ಭಾಗದಲ್ಲಿರುವ ದೇವರಹೊಳೆ ಎಂಬಲ್ಲಿ ಬಾಂದಾರವಿದ್ದರೂ, ಮಳೆಗಾಲ ಮುಗಿದ ತಕ್ಷಣ ಅದರ ಗೇಟ್ಗಳನ್ನು ಅಳವಡಿಸುವಲ್ಲಿ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ. ಮಳೆ ನಿಂತ ಕೂಡಲೇ ಗೇಟ್ ಅಳವಡಿಸದ ಕಾರಣ ನದಿಯ ನೀರೆಲ್ಲವೂ ಪೋಲಾಗಿ ಹರಿದು ಹೋಗಿದೆ. ಹಿಂದಿನ ವರ್ಷಗಳಲ್ಲಿ ಮಳೆಗಾಲ ಮುಗಿದ ತಕ್ಷಣ ಬಾಂದಾರದ ಗೇಟ್ಗಳನ್ನು ಅಳವಡಿಸಿ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಇದರಿಂದಾಗಿ ಬೇಸಿಗೆಯಲ್ಲೂ ನದಿಯಲ್ಲಿ ನೀರಿನ ಹರಿವು ಇರುತ್ತಿತ್ತು. ವಿಶೇಷವಾಗಿ ಶಿವರಾತ್ರಿ ಹಾಗೂ ಇತರ ಧಾರ್ಮಿಕ ಸಂದರ್ಭಗಳಲ್ಲಿ ಬಾಂದಾರದ ಗೇಟ್ ತೆರೆಯುವ ಮೂಲಕ ಸಹಸ್ರಲಿಂಗಕ್ಕೆ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಗೇಟ್ ಅಳವಡಿಸದ ಕಾರಣ, ಅಂತಹ ವಿಶೇಷ ಸಂದರ್ಭಗಳಲ್ಲೂ ಸಹಸ್ರಲಿಂಗಕ್ಕೆ ನೀರು ಹರಿಸಲು ಯಾವುದೇ ಅವಕಾಶವಿಲ್ಲದಂತಾಗಿದೆ’ ಎಂಬುದು ಸ್ಥಳೀಯರ ದೂರಾಗಿದೆ.</p>.<div><blockquote>ಈ ಬಾರಿ ಉಷ್ಣಾಂಶ ಅಧಿಕವಾಗಿದ್ದು, ನಿಗದಿತ ಅವಧಿಗೂ ಪೂರ್ವ ಸಹಸ್ರಲಿಂಗದಲ್ಲಿ ನೀರಿನ ಕೊರತೆ ಎದುರಾಗಿದೆ. ಮಳೆ ಬಂದರಷ್ಟೇ ಹಳೆಯ ಸೌಂದರ್ಯ ಮರಳುತ್ತದೆ</blockquote><span class="attribution"> ವಿಕಾಸ ಹೆಗಡೆ, ಸ್ಥಳೀಯ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ನದಿ ತಟದ ಶಿವತಾಣವಾಗಿರುವ ಐತಿಹಾಸಿಕ ಕ್ಷೇತ್ರ ಸಹಸ್ರಲಿಂಗ ಬಿಸಿಲ ಬೇಗೆಗೆ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ನೂರಾರು ಶಿವಲಿಂಗಗಳನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದ ಜನಸಾಗರ ಈಗ ಮಾಯವಾಗಿದ್ದು, ಕೇವಲ ಸುಡುವ ಬಿಸಿಲು ಮತ್ತು ಬರಿದಾದ ಕಲ್ಲು ಬಂಡೆಗಳು ಮಾತ್ರ ಕಾಣಸಿಗುತ್ತಿವೆ.</p>.<p>ಸಾವಿರಾರು ಜನರಿಂದ ತುಂಬಿರುತ್ತಿದ್ದ ಪ್ರವಾಸಿ ತಾಣ, ಈಗ ನೀರಿನ ಕೊರತೆಯಿಂದಾಗಿ ತನ್ನೆಲ್ಲಾ ಕಳೆಯನ್ನು ಕಳೆದುಕೊಂಡಿದೆ. ಶಾಲ್ಮಲಾ ನದಿಯ ಹರಿವು ನಿಂತು ಹೋಗಿದ್ದು, ನದಿ ಪಾತ್ರವು ಕೇವಲ ಕಲ್ಲುಗಳ ರಾಶಿಯಾಗಿ ಮಾರ್ಪಟ್ಟಿದೆ. ಸದಾ ನೀರಿನ ಮಡಿಲಲ್ಲಿರುತ್ತಿದ್ದ ಸಾವಿರಾರು ಶಿವಲಿಂಗಗಳು ಈಗ ತಂಪಾದ ಜಲಧಾರೆಗಳಿಲ್ಲದೆ ಸುಡುವ ಬಿಸಿಲಿಗೆ ಕಾದ ಕೆಂಡದಂತಾಗಿವೆ. ನದಿಯ ಮಧ್ಯೆ ಇಳಿದು ಪುಣ್ಯಸ್ನಾನ ಮಾಡಿ, ಲಿಂಗಗಳಿಗೆ ಜಲಾಭಿಷೇಕ ಮಾಡುತ್ತಿದ್ದ ಪ್ರವಾಸಿಗರಿಗೆ ಈಗ ಅಲ್ಲಿ ಕೇವಲ ನಿರಾಸೆ ಕಾಯುತ್ತಿದೆ.</p>.<p>‘ಸಾಮಾನ್ಯವಾಗಿ ಬೇಸಿಗೆಯಲ್ಲೂ ಇಲ್ಲಿ ಅಲ್ಪ ಪ್ರಮಾಣದ ನೀರಿನ ಹರಿವು ಇರುತ್ತಿತ್ತು. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ನದಿ ತೀರಕ್ಕೆ ಬಂದರೆ ಮೈಮನ ತಂಪಾಗಿಸುತ್ತಿದ್ದ ಗಾಳಿಯ ಜಾಗದಲ್ಲಿ ಈಗ ಬಿಸಿಗಾಳಿ ಬೀಸುತ್ತಿದೆ. ನೀರಿನ ಅಬ್ಬರವಿಲ್ಲದೆ ಪರಿಸರದಲ್ಲಿ ಸ್ತಬ್ಧತೆ ಆವರಿಸಿದೆ. ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಆಗಿರುವುದರಿಂದ ಈ ಭಾಗದ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಸ್ಥಳಿಕರು.</p>.<p>‘ನೀರಿರುವ ವೇಳೆ ನಿತ್ಯವೂ ನೂರಾರು ಜನರು ಬರುತ್ತಿದ್ದರು. ಈಗ ನೀರಿರದ ಕಾರಣ ಪ್ರವಾಸಿಗರು ಇತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ನದಿಯ ಪಾತ್ರದಲ್ಲಿ ಅಲ್ಲಲ್ಲಿ ಉಳಿದುಕೊಂಡಿರುವ ಅಲ್ಪಸ್ವಲ್ಪ ಗುಂಡಿಗಳಲ್ಲಿನ ನೀರು ಕೂಡ ಪಾಚಿಗಟ್ಟಿ ಬಳಕೆಗೆ ಅಯೋಗ್ಯವಾಗಿದೆ. ಹಸಿರು ಕಾನನದ ನಡುವಿನ ತಾಣವು ಈಗ ಜಲಕ್ಷಾಮದ ಕಟು ಸತ್ಯಕ್ಕೆ ಸಾಕ್ಷಿಯಾಗಿದೆ’ ಎಂಬುದು ನದಿ ತಟದ ನಿವಾಸಿ ರಾಮಚಂದ್ರ ಹೆಗಡೆ ಮಾತು.</p>.<p>‘ನದಿಯ ಮೇಲ್ಭಾಗದಲ್ಲಿರುವ ದೇವರಹೊಳೆ ಎಂಬಲ್ಲಿ ಬಾಂದಾರವಿದ್ದರೂ, ಮಳೆಗಾಲ ಮುಗಿದ ತಕ್ಷಣ ಅದರ ಗೇಟ್ಗಳನ್ನು ಅಳವಡಿಸುವಲ್ಲಿ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ. ಮಳೆ ನಿಂತ ಕೂಡಲೇ ಗೇಟ್ ಅಳವಡಿಸದ ಕಾರಣ ನದಿಯ ನೀರೆಲ್ಲವೂ ಪೋಲಾಗಿ ಹರಿದು ಹೋಗಿದೆ. ಹಿಂದಿನ ವರ್ಷಗಳಲ್ಲಿ ಮಳೆಗಾಲ ಮುಗಿದ ತಕ್ಷಣ ಬಾಂದಾರದ ಗೇಟ್ಗಳನ್ನು ಅಳವಡಿಸಿ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಇದರಿಂದಾಗಿ ಬೇಸಿಗೆಯಲ್ಲೂ ನದಿಯಲ್ಲಿ ನೀರಿನ ಹರಿವು ಇರುತ್ತಿತ್ತು. ವಿಶೇಷವಾಗಿ ಶಿವರಾತ್ರಿ ಹಾಗೂ ಇತರ ಧಾರ್ಮಿಕ ಸಂದರ್ಭಗಳಲ್ಲಿ ಬಾಂದಾರದ ಗೇಟ್ ತೆರೆಯುವ ಮೂಲಕ ಸಹಸ್ರಲಿಂಗಕ್ಕೆ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಗೇಟ್ ಅಳವಡಿಸದ ಕಾರಣ, ಅಂತಹ ವಿಶೇಷ ಸಂದರ್ಭಗಳಲ್ಲೂ ಸಹಸ್ರಲಿಂಗಕ್ಕೆ ನೀರು ಹರಿಸಲು ಯಾವುದೇ ಅವಕಾಶವಿಲ್ಲದಂತಾಗಿದೆ’ ಎಂಬುದು ಸ್ಥಳೀಯರ ದೂರಾಗಿದೆ.</p>.<div><blockquote>ಈ ಬಾರಿ ಉಷ್ಣಾಂಶ ಅಧಿಕವಾಗಿದ್ದು, ನಿಗದಿತ ಅವಧಿಗೂ ಪೂರ್ವ ಸಹಸ್ರಲಿಂಗದಲ್ಲಿ ನೀರಿನ ಕೊರತೆ ಎದುರಾಗಿದೆ. ಮಳೆ ಬಂದರಷ್ಟೇ ಹಳೆಯ ಸೌಂದರ್ಯ ಮರಳುತ್ತದೆ</blockquote><span class="attribution"> ವಿಕಾಸ ಹೆಗಡೆ, ಸ್ಥಳೀಯ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>