2013ರ ಬ್ಯಾಚ್ನ ಐ.ಪಿ.ಎಸ್ ಅಧಿಕಾರಿಯಾಗಿರುವ ಡಾ.ಸುಮನ್ ಪೆನ್ನೇಕರ್, 2021ರ ಅ.30ರಂದು ಜಿಲ್ಲೆಗೆ ವರ್ಗಾವಣೆಯಾಗಿದ್ದರು. ತಮ್ಮ ಕಟ್ಟುನಿಟ್ಟಿನ ಕರ್ತವ್ಯ ಪಾಲನೆಯಿಂದ ಅಲ್ಪಾವಧಿಯಲ್ಲೇ ಜಿಲ್ಲೆಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಮಟ್ಕಾ ದಂಧೆ, ಅಕ್ರಮ ಮರಳು ಗಣಿಗಾರಿಕೆಯನ್ನು ನಿಯಂತ್ರಿಸಲು ಶ್ರಮಿಸಿದ್ದರು.