ಆದರೆ, ‘ಮಾದರಿ ಉಪ ಪ್ರಾದೇಶಿಕ ವಿಜ್ಞಾನ ಕೆಂದ್ರ ಸ್ಥಾಪನೆಗೆ ಕನಿಷ್ಠ ₹ 10 ಕೋಟಿ ಅಗತ್ಯವಿದೆ. ಬಜೆಟ್ನಲ್ಲಿ ಘೊಷಣೆಯಾದ ಅನುದಾನದ ಹೊರತಾಗಿ ಹೆಚ್ಚುವರಿ ₹ 3 ಕೋಟಿ ಅಗತ್ಯವಿದ್ದು, ಅದಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಬಿಡುಗಡೆಯಾದ ಬಳಿಕ ಕೇಂದ್ರ ಸ್ಥಾಪನೆಗೆ ತಯಾರಿ ನಡೆಯಲಿದೆ’ ಎಂಬ ಮಾಹಿತಿಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ನಗರದ ಕಾಲೇಜು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.