ಐ.ಆರ್.ಬಿ ಕಂಪನಿ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜನ್ ಅವರು ಪ್ರತಿಕ್ರ್ರಿಯಿಸಿ, ‘ಮಳೆ ನೀರು ನಿಲ್ಲುವ ಹೆದ್ದಾರಿ ಬದಿ ನೆಲದಡಿ ಕುಮಟಾ-ಹೊನ್ನಾವರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮರಾಕಲ್ ಯೋಜನೆಯ ಪೈಪ್ ಲೈನ್ ಇದೆ. ಅದನ್ನು ಸ್ಥಳಾಂತರಿಸಲು ಹೆದ್ದಾರಿ ಪ್ರಾಧಿಕಾರ ಇನ್ನೂ ಅನುಮತಿ ನೀಡಿಲ್ಲ. ಸ್ಥಳಾಂತರದ ನಂತರ ಗಟಾರ, ನಂತರ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯಲಿದೆ. ಅಲ್ಲಿಯವರೆಗೆ ಹೆದ್ದಾರಿಯಲ್ಲಿ ನಿಲ್ಲುವ ಮಳೆ ನೀರು ಹರಿದು ಹೋಗಲು ಆಗಾಗ ತಾತ್ಕಾಲಿಕ ಗಟಾರ ನಿರ್ಮಿಸಲಾಗುತ್ತಿದೆ’ ಎಂದರು.