ಮಧುಕರ ಅವರ ಹಳೆಯ ಮನೆಯನ್ನು ತೆರವುಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗೋಡೆ ಕುಸಿದು ಇಬ್ಬರು ಗಂಭೀರ ಸ್ವರೂಪದಿಂದ ಗಾಯಗೊಂಡಿದ್ದರು. ಇಬ್ಬರನ್ನೂ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಶಾಂತಾರಾಮ ನಾಯಕ ಅವರು ಮಿರ್ಜಾನ್ ಸಮೀಪ ಮತ್ತು ಮಧುಕರ ಅವರು ಬೈಂದೂರು ಸಮೀಪ ಕೊನೆಯುಸಿರೆಳೆದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.