<p><strong>ಕುಮಟಾ</strong>: ‘ಭಾರತೀಯ ಕಾಲ ಗಣನೆ ಆಚರಣೆಗೆ ತರುವ ಉದ್ದೇಶದಿಂದ ಯುಗಾದಿ ಉತ್ಸವ ಸಮಿತಿ ವತಿಯಿಂದ ಮಾರ್ಚ್ 19ರಂದು ಪಟ್ಟಣದ ಗಿಬ್ ಪ್ರೌಢ ಶಾಲೆ ಮೈದಾನದಲ್ಲಿ ಯುಗಾದಿ ಉತ್ಸವ ಏರ್ಪಡಿಸಲಾಗಿದೆ’ ಎಂದು ಸಮಿತಿ ಸಂಚಾಲಕ ಮುರಳಿಧರ ಪ್ರಭು ಹೇಳಿದರು.</p>.<p>ಪಟ್ಟಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊನ್ನಾವರ ತಾಲ್ಲೂಕಿನ ಕೊಂಡಾಕುಳಿ ಓಂಕಾರಾಶ್ರಮದ ಶಿವಾತ್ಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾರ್ಚ್ 14ರಂದು ಭಜನಾ ಸಪ್ತಾಹದ ಬದಲು ಭಜನೆ ಪ್ರದರ್ಶನ ಜರುಗಲಿದೆ’ ಎಂದು ತಿಳಿಸಿದರು.</p>.<p>ಮಾರ್ಚ್ 18ರಂದು ಮಧ್ಯಾಹ್ನ 3ಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸಂಜೆ ಕೊಂಕಣ ಎಜುಕೇಶನ್ ಟ್ರಸ್ಟ್ ಹಾಗೂ ಜಾನಕಿ ಪ್ರಭು ಅಕಾಡೆಮಿ ವತಿಯಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ, ಕೃಷಿ ವಿಚಾರ ಸಂಕಿರಣ, ಶಂಕರ ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಹೆಗಡೆ ಮಾತನಾಡಿದರು. ಸಮಿತಿ ಪದಾಧಿಕಾರಿಗಳಾದ ಜಿ.ಎಸ್. ಹೆಗಡೆ, ಎಂ.ಕೆ. ಶಾನಭಾಗ, ಬಿ.ಎನ್.ಕೆ ನಾಗರಾಜ, ಎಸ್.ವಿ. ಹೆಗಡೆ, ಅರುಣ ಹೆಗಡೆ, ಎಂ.ಆರ್. ಭಟ್ಟ, ಸುರೇಶ ಭಟ್ಟ, ಗಜಾನನ ಮಡಿವಾಳ, ಶೀಥಲ ಭಂಡಾರಿ, ಪೂರ್ಣಿಮಾ ಕಾಮತ್ ಪತ್ರಿಕಾಗೋಷ್ಠಿಯಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಮಟಾ</strong>: ‘ಭಾರತೀಯ ಕಾಲ ಗಣನೆ ಆಚರಣೆಗೆ ತರುವ ಉದ್ದೇಶದಿಂದ ಯುಗಾದಿ ಉತ್ಸವ ಸಮಿತಿ ವತಿಯಿಂದ ಮಾರ್ಚ್ 19ರಂದು ಪಟ್ಟಣದ ಗಿಬ್ ಪ್ರೌಢ ಶಾಲೆ ಮೈದಾನದಲ್ಲಿ ಯುಗಾದಿ ಉತ್ಸವ ಏರ್ಪಡಿಸಲಾಗಿದೆ’ ಎಂದು ಸಮಿತಿ ಸಂಚಾಲಕ ಮುರಳಿಧರ ಪ್ರಭು ಹೇಳಿದರು.</p>.<p>ಪಟ್ಟಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊನ್ನಾವರ ತಾಲ್ಲೂಕಿನ ಕೊಂಡಾಕುಳಿ ಓಂಕಾರಾಶ್ರಮದ ಶಿವಾತ್ಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾರ್ಚ್ 14ರಂದು ಭಜನಾ ಸಪ್ತಾಹದ ಬದಲು ಭಜನೆ ಪ್ರದರ್ಶನ ಜರುಗಲಿದೆ’ ಎಂದು ತಿಳಿಸಿದರು.</p>.<p>ಮಾರ್ಚ್ 18ರಂದು ಮಧ್ಯಾಹ್ನ 3ಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸಂಜೆ ಕೊಂಕಣ ಎಜುಕೇಶನ್ ಟ್ರಸ್ಟ್ ಹಾಗೂ ಜಾನಕಿ ಪ್ರಭು ಅಕಾಡೆಮಿ ವತಿಯಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ, ಕೃಷಿ ವಿಚಾರ ಸಂಕಿರಣ, ಶಂಕರ ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಹೆಗಡೆ ಮಾತನಾಡಿದರು. ಸಮಿತಿ ಪದಾಧಿಕಾರಿಗಳಾದ ಜಿ.ಎಸ್. ಹೆಗಡೆ, ಎಂ.ಕೆ. ಶಾನಭಾಗ, ಬಿ.ಎನ್.ಕೆ ನಾಗರಾಜ, ಎಸ್.ವಿ. ಹೆಗಡೆ, ಅರುಣ ಹೆಗಡೆ, ಎಂ.ಆರ್. ಭಟ್ಟ, ಸುರೇಶ ಭಟ್ಟ, ಗಜಾನನ ಮಡಿವಾಳ, ಶೀಥಲ ಭಂಡಾರಿ, ಪೂರ್ಣಿಮಾ ಕಾಮತ್ ಪತ್ರಿಕಾಗೋಷ್ಠಿಯಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>